ಬೇಸಿಗೆಗೆ ಹಿತ ನೀಡುವ  ವೈವಿಧ್ಯಮಯ ಮಜ್ಜಿಗೆ


Team Udayavani, Mar 16, 2018, 7:30 AM IST

a-16.jpg

ಹೊರಗೆ ಬಿಸಿಲಿನ ತಾಪ ಏರುತ್ತಿದ್ದಂತೆ,  ದೇಹ ತಂಪಾಗಿರುವ ಏನನ್ನಾದರೂ  ಬಯಸುತ್ತಿರುವಾಗ, ಮಜ್ಜಿಗೆಯು ಬಹಳ ಸಲಭವಾಗಿ ತಯಾರಿಸಬಹುದಾದ ಪಾನೀಯ. ಅತಿಸಾರ, ಅರುಚಿ, ಆಮಶಂಕೆ, ಅಜೀರ್ಣ, ಮೂಲವ್ಯಾಧಿ, ವಾಂತಿ, ಭೇದಿ, ಮೂತ್ರಕಟ್ಟು, ಉರಿಮೂತ್ರ, ಕಾಮಾಲೆ ಇತ್ಯಾದಿ ಹಲವಾರು ಸಮಸ್ಯೆಗಳಿಗೆ ಮಜ್ಜಿಗೆಯು ಅಮೃತಕ್ಕೆ ಸಮನಾದ ಪಾನ. ಇಂಗು, ಹಸಿಶುಂಠಿ, ದಾಳಿಂಬೆ, ಮೆಂತ್ಯ, ಓಂಕಾಳುಗಳನ್ನು ಬಳಸಿ ತಯಾರಿಸುವ ಮಜ್ಜಿಗೆಗಳು ಅಧರಕ್ಕೆ ರುಚಿಮಾತ್ರವಲ್ಲ ಉದರಕ್ಕೂ ಹಿತನೀಡಿ ಆರೋಗ್ಯಕ್ಕೆ ಬಹಳ ಉತ್ತಮ. ಇಲ್ಲಿವೆ ಕೆಲವು ರೆಸಿಪಿ.

ಮಜ್ಜಿಗೆಯ ಜೊತೆ ಪುದಿನ 
ಬೇಕಾಗುವ ಸಾಮಗ್ರಿ: ಪುದಿನ ಎಲೆಗಳು- ಇಪ್ಪತ್ತು, ಹಸಿಮೆಣಸು- ಎರಡು, ಶುಂಠಿ- ಅರ್ಧ ಇಂಚು, ಮಜ್ಜಿ ಗೆ- ಮೂರು ಲೋಟ, ತೆಂಗಿನ ತುರಿ- ಎಂಟು ಚಮಚ, ಉಪ್ಪು ರುಚಿಗೆ, ಇಂಗು- ಕಾಲು ಚಮಚ.

ತಯಾರಿಸುವ ವಿಧಾನ: ಪುದಿನ ಎಲೆಗಳಿಗೆ ತೆಂಗಿನ ತುರಿ, ಹಸಿಮೆಣಸು, ಶುಂಠಿ, ಇಂಗು ಮತ್ತು ಉಪ್ಪು$ ಸೇರಿಸಿ ನುಣ್ಣಗೆ ರುಬ್ಬಿ ಮಜ್ಜಿಗೆಗೆ ಸೇರಿಸಿ ಬೇಕಷ್ಟು ನೀರು ಸೇರಿಸಿ ಹದ ಮಾಡಿಕೊಳ್ಳಿ. ಅತಿಯಾದ ಬಾಯಾರಿಕೆ, ಅಜೀರ್ಣವಾದಾಗ ಈ ಮಜ್ಜಿಗೆಯ ಸೇವನೆ ಬಹಳ ಹಿತನೀಡುವುದು.

ಕಲಗಚ್ಚಿನ ಮಜ್ಜಿಗೆ 
ಬೇಕಾಗುವ ಸಾಮಗ್ರಿ:
ಅಕ್ಕಿ ಮೂರನೇ ಸಲ ತೊಳೆದ ನೀರು, ಜೀರಿಗೆ ಪುಡಿ- ಎರಡು ಚಮಚ, ಲಿಂಬೆಹಣ್ಣು – ಅರ್ಧ, ಮಜ್ಜಿಗೆ- ಒಂದು ಲೋಟ, ಇಂಗು- ಕಾಲು ಚಮಚ, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಕಲಗಚ್ಚಿಗೆ ಜೀರಿಗೆಪುಡಿ, ಉಪ್ಪು, ಲಿಂಬೆರಸ, ಇಂಗು ಸೇರಿಸಿ ಕರಗಿಸಿ. ನಂತರ ಮಜ್ಜಿಗೆ ಸೇರಿಸಿ ಮಿಶ್ರಮಾಡಿ. ಹೊಟ್ಟೆ ಉರಿ, ಎಸಿಡಿಟಿ ತೊಂದರೆಯವರಿಗೆ ಇದರ ಸೇವನೆ ಬಹಳ ಹಿತ.

ಸಾಂಬಾರು ಸೊಪ್ಪಿನ ಮಜ್ಜಿಗೆ
 ಬೇಕಾಗುವ ಸಾಮಗ್ರಿ:
ಸಣ್ಣಗೆ ಹಚ್ಚಿದ ಸಾಂಬಾರು ಸೊಪ್ಪು$- ನಾಲ್ಕು ಚಮಚ, ಹೆಚ್ಚಿದ ಈರುಳ್ಳಿ- ನಾಲ್ಕು ಚಮಚ, ಹಸಿಮೆಣಸು- ಒಂದು, ಮಜ್ಜಿಗೆ – ಎರಡು ಕಪ್‌, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಮಜ್ಜಿಗೆಗೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಬೇಕಷ್ಟು ನೀರು ಸೇರಿಸಿ ಹದ ಮಾಡಿಕೊಳ್ಳಿ. ನಂತರ ಇದಕ್ಕೆ ತುಪ್ಪದಲ್ಲಿ ಸಾಸಿವೆ ಒಗ್ಗರಣೆಯನ್ನು ಇಂಗಿನ ಜೊತೆ ನೀಡಿ. ಅಜೀರ್ಣ, ಅರುಚಿ, ಹೊಟ್ಟೆ ಉಬ್ಬರವಾದಾಗ ಈ ಮಜ್ಜಿಗೆಯ ಸೇವನೆ ಹಿತ.

ಮಜ್ಜಿಗೆ ಜೊತೆ ಬಸಳೆ
ಬೇಕಾಗುವ ಸಾಮಗ್ರಿ:
ಬಸಳೆ ಎಲೆಗಳು- ಆರು, ಕಾಯಿತುರಿ- ಆರು ಚಮಚ, ಕಾಳುಮೆಣಸು- ನಾಲ್ಕು. ಜೀರಿಗೆ- ಒಂದು ಚಮಚ, ಮಜ್ಜಿಗೆ- ಎರಡು ಕಪ್‌, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಹೆಚ್ಚಿದ ಬಸಳೆ ಸೊಪ್ಪನ್ನು ಸಣ್ಣ ಉರಿಯಲ್ಲಿ ಬಾಡಿಸಿ. ನಂತರ ಇದಕ್ಕೆ ಜೀರಿಗೆ, ಕಾಳುಮೆಣಸು, ಕಾಯಿತುರಿ, ಉಪ್ಪು ಸೇರಿಸಿ ರುಬ್ಬಿ ಮಜ್ಜಿ ಗೆಗೆ ಸೇರಿಸಿ. ಕೊತ್ತಂಬರಿ ಸೊಪ್ಪು$ಸೇರಿಸಿ ಇಂಗಿನ ಒಗ್ಗರಣೆ ನೀಡಿ ಸರ್ವ್‌ ಮಾಡಬಹುದು.

         ಇದೇರೀತಿ ಓಂಕಾಳು, ಹಸಿಮೆಣಸು, ಶುಂಠಿಯನ್ನು ಸ್ವಲ್ಪ ಕಾಯಿತುರಿಯ ಜೊತೆ ಸೇರಿಸಿ ರುಬ್ಬಿ ಮಜ್ಜಿಗೆಗೆ ಸೇರಿಸಿ ಸರ್ವ್‌ ಮಾಡಬಹುದು. ಜೀರ್ಣಕ್ರಿಯೆಗೆ ಇದು ಉತ್ತಮ.

       ಕೊತ್ತಂಬರಿಸೊಪ್ಪು, ಉಪ್ಪು, ಇಂಗು, ಶುಂಠಿ, ಹಸಿಮೆಣಸು ಅಥವಾ  ಇಂಗು, ಹಸಿಮೆಣಸು, ಶುಂಠಿ ಸೇರಿಸಿ ರುಬ್ಬಿ ಲಿಂಬೆರಸ ಸೇರಿಸಿದ ಮಜ್ಜಿಗೆಗೆ ಸೇರಿಸಿ ಸಾಸಿವೆ ಕರಿಬೇವಿನ ಒಗ್ಗರಣೆ ನೀಡಿಯೂ ಮಜ್ಜಿಗೆ ತಯಾರಿಸಬಹದು.                                                 
ಗೀತಸದಾ

ಟಾಪ್ ನ್ಯೂಸ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

9-fusion

Drama: ಪ್ರೇಕ್ಷಕರ ಮನಗೆದ್ದ “ಸೀತಾರಾಮ ಚರಿತಾ”

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.