ಬಿಸಿಲ ಬೇಗೆ ಕಳೆಯಲು ತಂಪಾದ ಪಾನೀಯಗಳು


Team Udayavani, Apr 13, 2018, 6:00 AM IST

7.jpg

ಹೊರಗೆ ಬಿಸಿಲು ಏರುತ್ತಿದ್ದಂತೆ ವಾತಾವರಣದ ಉಷ್ಣತೆಯಿಂದಾಗಿ ಉರಿಮೂತ್ರ, ಮೂತ್ರಕಟ್ಟು, ಮಲಬದ್ಧತೆ, ಉದರದಲ್ಲಿ ಉಷ್ಣದಿಂದಾಗಿ ನೋವು, ಸಂಕಟ ಇತ್ಯಾದಿ ತೊಂದರೆಗಳು ಪ್ರಾರಂಭವಾಗುತ್ತದೆ. ಇದಕ್ಕಾಗಿ ದೇಹ ತಂಪಾಗುವ ಪಾನೀಯಗಳನ್ನು ಮನೆಯಲ್ಲಿಯೇ ಬಹಳ ಸುಲಭವಾಗಿ ತಯಾರಿಸಬಹುದು.

ಬಾರ್ಲಿ ಹಾಲು
ಬೇಕಾಗುವ ಸಾಮಗ್ರಿ: ಬಾರ್ಲಿಪುಡಿ- ಎರಡು ಚಮಚ, ಹಾಲು- ಅರ್ಧ ಕಪ್‌, ಕಲ್ಲು ಸಕ್ಕರೆ.

ತಯಾರಿಸುವ ವಿಧಾನ: ಬಾರ್ಲಿಯನ್ನು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ. ಒಂದು ಲೀಟರ್‌ ನೀರು ಕುದಿಯಲು ಇಡಿ. ಮೂರು ಟೇಬಲ್‌ ಚಮಚ ಬಾರ್ಲಿ ಪುಡಿಯನ್ನು ಸ್ವಲ್ಪನೀರಿನಲ್ಲಿ ಗಂಟುಗಳಿಲ್ಲದಂತೆ ಕಲಕಿ, ಕುದಿಯಲು ಇಟ್ಟ ನೀರಿಗೆ ಸೇರಿಸಿ. ಆಗಾಗ ಸೌಟಿನಿಂದ ಮಗುಚುತ್ತಾ ಇದ್ದು, ಕುದಿಯಲು ಪ್ರಾರಂಭವಾದ ಮೇಲೂ ಉರಿ ಸಣ್ಣ ಮಾಡಿ ಸುಮಾರು ಐದು ನಿಮಿಷ ಬೇಯಿಸಿ. ಈಗ ತಯಾರಾದ ಈ ನೀರಿಗೆ ಬೇಕಷ್ಟು ಹಾಲು ಮತ್ತು ಕಲ್ಲು ಸಕ್ಕರೆ ಸೇರಿಸಿ ಸೇವಿಸಬಹುದು. ಇದನ್ನು ಬಿಸಿಯಾಗಿ ಅಥವಾ ಆರಿದ ಮೇಲೂ ಸೇವಿಸಬಹುದು. ಹಾಲು ಸೇರಿಸದೇ ಹಾಗೆಯೂ ಸೇವಿಸಬಹುದು. ತಂಪು ಗುಣದ ಇದರ ಸೇವನೆಯಿಂದ ಮೂತ್ರ ಸಲೀಸಾಗಿ ಹೋಗುವುದಲ್ಲದೇ ಉರಿ ಮೂತ್ರಕ್ಕೆ ಬಹಳ ಹಿತ.

ಬಾದಾಮಿ ವಿದ್‌ ಖರ್ಜೂರದ ಹಾಲು 
ಬೇಕಾಗುವ ಸಾಮಗ್ರಿ: ಸಬ ಬೀಜಗಳು- ಒಂದು ಚಮಚ, ಹಾಲು- ಎರಡು ಕಪ್‌, ಏಲಕ್ಕಿಪುಡಿ- ಸುವಾಸನೆಗಾಗಿ, ನೆನೆಸಿದ ಬಾದಾಮಿ- ಆರು, ನೆನೆಸಿದ ಖರ್ಜೂರ- ನಾಲ್ಕು, ಸಕ್ಕರೆ- ರುಚಿಗೆ ಬೇಕಷ್ಟು,  ಬಾದಾಮಿ ಮಿಕ್ಸ್‌ – ಒಂದು ಚಮಚ.

ತಯಾರಿಸುವ ವಿಧಾನ: ಕಾಮಕಸ್ತೂರಿ ಬೀಜವನ್ನು ಸುಮಾರು ಎರಡು ಗಂಟೆ ನೀರಿನಲ್ಲಿ ನೆನೆಸಿಡಿ. ಅರ್ಧ ಕಪ್‌ ಹಾಲಿಗೆ ಬಾದಾಮಿ ಮತ್ತು ಖರ್ಜೂರ ಸೇರಿಸಿ ರುಬ್ಬಿ ಪೇಸ್ಟ್‌ ಮಾಡಿಡಿ. ಉಳಿದ ಹಾಲಿಗೆ ಬಾದಾಮಿ ಮಿಕ್ಸ್‌ ಸೇರಿಸಿ ಕುದಿಸಿ. ಇದು ಆರಿದ ಮೇಲೆ ಇದಕ್ಕೆ ರುಬ್ಬಿದ ಮಿಶ್ರಣ ಸೇರಿಸಿ ಬೇಕಷ್ಟು ನೀರು, ಸಕ್ಕರೆ, ನೆನೆಸಿದ ಸಬ ಬೀಜಗಳು ಮತ್ತು ಬೇಕಿದ್ದರೆ ಫ‌ುಡ್‌ ಕಲರ್‌ ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಫ್ರಿಜ್‌ನಲ್ಲಿ ತಂಪಾಗಲು ಇಟ್ಟು ಸರ್ವ್‌ ಮಾಡಬಹುದು. 

ಬಹಳ ಹೆಲ್ದಿಯಾದ ಈ ಹಾಲಿನ ಸೇವನೆಯಿಂದ ಸುಸ್ತು, ಸಂಕಟ ಪರಿಹಾರ. 

ರಾಗಿ ಹಾಲು
ಬೇಕಾಗುವ ಸಾಮಗ್ರಿ: ರಾಗಿ- ಅರ್ಧ ಕಪ್‌,  ಹಾಲು- ಒಂದು ಕಪ್‌, ಬೆಲ್ಲ – ರುಚಿಗೆ ಬೇಕಷ್ಟು, ಏಲಕ್ಕಿ ಪುಡಿ- ಸುವಾಸನೆಗಾಗಿ.

ತಯಾರಿಸುವ ವಿಧಾನ: ರಾಗಿಯನ್ನು ನೀರಿನಲ್ಲಿ ಅರ್ಧ ಗಂಟೆ ನೆನೆಸಿಡಿ. ನಂತರ ಇದನ್ನು ಮಿಕ್ಸಿಯಲ್ಲಿ ರುಬ್ಬಿ ಸೋಸಿ ಹಾಲು ತೆಗೆಯಿರಿ. ಇದಕ್ಕೆ ಹಾಲು ಮತ್ತು ಬೆಲ್ಲ ಹಾಗೂ ಬೇಕಷ್ಟು ನೀರು ಸೇರಿಸಿ ಹದ ಮಾಡಿಕೊಳ್ಳಿ. ಕೊನೆಗೆ ಏಲಕ್ಕಿ ಪುಡಿ ಸೇರಿಸಿ ಫ್ರಿಜ್‌ನಲ್ಲಿಟ್ಟು ತಂಪಾಗಿಸಿಯೂ ಸವಿಯಬಹುದು. 
ಬಹಳ ತಂಪು ಗುಣದ ರಾಗಿ ಪೌಷ್ಟಿಕವೂ ಆಗಿದ್ದು ಬೇಸಿಗೆಯಲ್ಲಿ ಕಾಡುವ ನಿಶ್ಯಕ್ತಿ, ಹೊಟ್ಟೆಉರಿ, ಉಷ್ಣದ ಹೊಟ್ಟೆನೋವಿನ ಪರಿಹಾರಕ್ಕೆ ಉತ್ತಮ. ಬೇಯಿಸಿಟ್ಟ ರಾಗಿಗೆ ಮಜ್ಜಿಗೆ, ಉಪ್ಪು$ ಜೀರಿಗೆ ಅಥವ ಹೆಚ್ಚಿದ ಈರುಳ್ಳಿ ಸೇರಿಸಿಯೂ ಸೇವಿಸಬಹುದು. ಈ ಅಂಬಲಿಯ ಸೇವನೆಯೂ ಬಹಳ ಹಿತ.

ಕ್ಯಾರೆಟ್‌ ಹಾಲು
ಬೇಕಾಗುವ ಸಾಮಗ್ರಿ: ಹೆಚ್ಚಿದ ಕ್ಯಾರೆಟ್‌- ಎರಡು, ಹಾಲು- ಒಂದೂವರೆ ಕಪ್‌, ಸಕ್ಕರೆ- ಸಿಹಿಗೆ ಬೇಕಷ್ಟು, ಗೋಡಂಬಿ- ಐದು, ಏಲಕ್ಕಿ – ಸುವಾಸನೆಗೆ.

ತಯಾರಿಸುವ ವಿಧಾನ: ಹೆಚ್ಚಿದ ಕ್ಯಾರೆಟ್‌ನ್ನು ಬೇಯಲು ಇಡಿ. ಇದು ಬೇಯುತ್ತಾ ಬರುವಾಗ ಅರ್ಧ ಕಪ್‌ ಹಾಲು ಸೇರಿಸಿ ಬೇಯಿಸಿ. ಇದು ಆರಿದ ಮೇಲೆ ಮಿಕ್ಸಿಗೆ ಹಾಕಿ ಸಕ್ಕರೆ, ಸ್ವಲ್ಪ ಹಾಲು, ಗೇರುಬೀಜ, ಏಲಕ್ಕಿ ಪುಡಿ ಸೇರಿಸಿ ರುಬ್ಬಿ. ನಂತರ ಉಳಿದ ಹಾಲು ಸೇರಿಸಿ ಪುನಃ ರುಬ್ಬಿ ಫ್ರಿಜ್‌ನಲ್ಲಿಟ್ಟು ತಂಪು ಮಾಡಿ ಅಥವಾ ಐಸ್‌ಪೀಸ್‌ ಸೇರಿಸಿ ಸರ್ವ್‌ ಮಾಡಬಹುದು. ಬಹಳ ರುಚಿಯಾದ ಈ ಹಾಲು ಪೌಷ್ಟಿಕಾಂಶದಿಂದ ಕೂಡಿದ್ದು ಬೇಸಿಗೆಗೆ ಹಿತ.

ಗೀತಸದಾ

ಟಾಪ್ ನ್ಯೂಸ್

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.