ಮಳೆಯಲ್ಲಿ ಹೊಳೆಯುವ ಮುಖ 


Team Udayavani, Aug 17, 2018, 6:00 AM IST

c-21.jpg

ಅಧಿಕ ತೇವಾಂಶವಿರುವ ಮಳೆಗಾಲದ ವಾತಾವರಣದಲ್ಲಿ ಮುಖಕ್ಕೆ ವಿಶೇಷ ಆರೈಕೆ ಅವಶ್ಯ. ವಾತಾವರಣದ ಉಷ್ಣತೆ ವೈಪರೀತ್ಯ ಹಾಗೂ ತೇವಾಂಶ ಅಧಿಕ್ಯತೆಯಿಂದ ಮೊಡವೆ, ಕೆಂಪು ಗುಳ್ಳೆಗಳು ಉಂಟಾಗುತ್ತವೆ.

ಒಣ ಚರ್ಮದವರಿಗೆ ಮಳೆಗಾಲದ ಫೇಸ್‌ಪ್ಯಾಕ್‌
 ಒಣ ಚರ್ಮ ನಿವಾರಣೆ ಜೊತೆಗೆ ಮೊಡವೆ, ಗುಳ್ಳೆ, ಕಲೆಗಳ ನಿವಾರಣೆಗೆ ಈ ಫೇಸ್‌ಪ್ಯಾಕ್‌ ಹಿತಕರ. ಒಂದು ಬೌಲ್‌ನಲ್ಲಿ  10 ಚಮಚ ಜೊಜೋಬಾ ತೈಲ, 10 ಚಮಚ ತಾಜಾ ದಪ್ಪ ಮೊಸರು, 5 ಚಮಚ ಜೇನುತುಪ್ಪ – ಇವೆಲ್ಲವನ್ನೂ ಚೆನ್ನಾಗಿ ಬೆರೆಸಿ ಮುಖಲೇಪನ ಮಾಡಬೇಕು. 15-20 ನಿಮಿಷದ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದರೆ ಮುಖ ಫ‌ಳಫ‌ಳ ಹೊಳೆಯುತ್ತದೆ. ಮೊಡವೆ, ಕೆಂಪು ಗುಳ್ಳೆ, ಕಪ್ಪು ಕಲೆಗಳೂ ನಿವಾರಣೆಯಾಗುತ್ತವೆ.

ಹಣ್ಣುಗಳ ಮುಖಲೇಪ
ಬಾಳೆಹಣ್ಣು , ಸೇಬು, ಸ್ಟ್ರಾಬೆರಿ, ಅಂಜೂರ ಮೊದಲಾದ ಹಣ್ಣುಗಳ ತಿರುಳನ್ನು ತೆಗೆದುಕೊಳ್ಳಬೇಕು. ಇದನ್ನು ಬ್ಲೆಂಡರ್‌ನಲ್ಲಿ ತಿರುವಿ ದಪ್ಪ ಪೇಸ್ಟ್‌ ತಯಾರಿಸಬೇಕು.

ಗ್ರೀನ್‌ ಟೀ ಮುಖಲೇಪ
ಚರ್ಮಕ್ಕೆ ತಂಪು ಗುಣ ನೀಡಲು ಹಾಗೂ ಹಾರ್ಮೋನ್‌ ವ್ಯತ್ಯಯದಿಂದ ಉಂಟಾಗುವ ಮೊಡವೆಗಳ ನಿವಾರಣೆಗೆ ಈ ಫೇಸ್‌ಪ್ಯಾಕ್‌ ಉತ್ತಮ. ಕಟೆಚಿನ್ಸ್‌ (cate chins) ಎಂಬ ಬ್ಯಾಕ್ಟೀರಿಯಾ ನಿರೋಧ‌ಕ ಅಂಶವು ಮಳೆಗಾಲದಲ್ಲಿ ಮೊಗವನ್ನು ಬ್ಯಾಕ್ಟೀರಿಯಾ ಹಾಗೂ ಕ್ರಿಮಿಗಳಿಂದ ರಕ್ಷಿಸುತ್ತದೆ. ಮುಖದ ಕಾಂತಿ ವೃದ್ಧಿಗೂ ಸಹಕಾರಿ.

ಸಹಜ ಚರ್ಮದವರಿಗೆ ಗ್ರೀನ್‌ ಟೀ ಫೇಸ್‌ಪ್ಯಾಕ್‌
3 ಚಮಚ ಕಡಲೆಹಿಟ್ಟು , 10 ಚಮಚ ಗ್ರೀನ್‌ ಟೀ, 10 ಚಮಚ ಕಿತ್ತಳೆ ಸಿಪ್ಪೆಯ ಪುಡಿ, 1/2 ಚಮಚ ಜೇನು ಇವೆಲ್ಲವನ್ನೂ ಬೆರೆಸಿ ಚೆನ್ನಾಗಿ ಕಲಕಿ, ಪೇಸ್ಟ್‌ ತಯಾರಿಸಬೇಕು. ಇದನ್ನು ಸðಬ್‌ನಂತೆ ಲೇಪಿಸಿ ಮಾಲೀಶು ಮಾಡಬೇಕು. ಅಂದರೆ ತುದಿಬೆರಳುಗಳಿಂದ ವರ್ತುಲಾಕಾರದಲ್ಲಿ ಮಾಲೀಶು ಮಾಡಿ 15 ನಿಮಿಷದ ಬಳಿಕ ಬೆಚ್ಚಗಿನ ನೀರಿನಿಂದ ತೊಳೆಯಬೇಕು. ಹೀಗೆ ವಾರಕ್ಕೆ 2-3 ಬಾರಿ ಬಳಸಿದರೆ ಪರಿಣಾಮಕಾರಿ. ಕಿತ್ತಳೆ ಸಿಪ್ಪೆಯ ಪುಡಿಯ ಬದಲು 10 ಚಮಚ ಚಂದನದ ಪುಡಿ ಹಾಗೂ 1/2 ಚಮಚ ಅರಸಿನ ಪುಡಿ ಬಳಸಿದರೆ ಈ ಫೇಸ್‌ಪ್ಯಾಕ್‌ ಎಲ್ಲಾ ಬಗೆಯ ಚರ್ಮದವರಿಗೆ ಉತ್ತಮ.

ತೈಲಯುಕ್ತ ಚರ್ಮದವರಿಗೆ ಗ್ರೀನ್‌ ಟೀ ಫೇಸ್‌ಮಾಸ್ಕ್
ಮಳೆಗಾಲದಲ್ಲಿ ತೈಲಯುಕ್ತ ಚರ್ಮದವರಲ್ಲಿ ಅಧಿಕ ತೇವಾಂಶದೊಂದಿಗೆ ಚರ್ಮದ ಕಾಂತಿ ಕುಂದುತ್ತದೆ. ಜೊತೆಗೆ ಅಧಿಕ ಜಿಡ್ಡಿನ ಅಂಶ ನಿವಾರಣೆ ಮಾಡಿ ಮೊಗದ ಕಾಂತಿ ವರ್ಧಿಸಲು ಈ ಫೇಸ್‌ಮಾಸ್ಕ್ ಸಹಾಯಕ. 10 ಚಮಚ ಅಕ್ಕಿಹಿಟ್ಟಿಗೆ, 5 ಚಮಚ ಗ್ರೀನ್‌ ಟೀ ಹಾಗೂ 5 ಚಮಚ ನಿಂಬೆರಸ ಬೆರೆಸಬೇಕು. ಇದನ್ನು ಚೆನ್ನಾಗಿ ಮಿಶ್ರಮಾಡಿದ ಬಳಿಕ ಮುಖಕ್ಕೆ ಲೇಪಿಸಿ ಫೇಸ್‌ಮಾಸ್ಕ್ ತಯಾರಿಸಬೇಕು. 15 ನಿಮಿಷಗಳ ಬಳಿಕ ತಣ್ಣೀರಿನಲ್ಲಿ ಮುಖ ತೊಳೆದು ಒರೆಸಬೇಕು.

ಈ ಫೇಸ್‌ಮಾಸ್ಕ್ ತೈಲಾಂಶ ಹೀರುವ ಗುಣಗಳನ್ನು ಹೊಂದಿದೆ. ಗ್ರೀನ್‌ ಟೀ, ಅಕ್ಕಿಹಿಟ್ಟು ಹಾಗೂ ನಿಂಬೆರಸದ ಜೊತೆಗೆ ಬೆರೆತಾಗ ಸೀಬಮ್‌ ಉತ್ಪತ್ತಿ ಮಾಡುವ ಅಂದರೆ, ತೈಲಾಂಶ ಸ್ರಾವ ಮಾಡುವ ಸೆಬೆಶಿಯಸ್‌ ಗ್ರಂಥಿಗಳಿಂದ ಉಂಟಾಗುವ ಅಧಿಕ ಸ್ರಾವವನ್ನು ನಿಯಂತ್ರಿಸುತ್ತದೆ.
ಗ್ರೀನ್‌ಟೀಯಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಹಾಗೂ ನಿಂಬೆರಸದಲ್ಲಿರುವ ವಿಟಮಿನ್‌ “ಸಿ’ ಮುಖದ ತ್ವಚೆಗೆ ಕಾಂತಿ ನೀಡುತ್ತದೆ. ಸುಲಭದಲ್ಲೇ ಮನೆಯಲ್ಲಿ ತಯಾರಿಸಬಹುದಾದ ಈ ಮಾಸ್ಕ್ ಮಳೆಗಾಲದಲ್ಲಿ ಹಿತಕರ.

ಸ್ಟ್ರಾಬೆರಿ-ಮುಲ್ತಾನಿ ಮಿಟ್ಟಿ ಫೇಸ್‌ಪ್ಯಾಕ್‌
5 ಚೆನ್ನಾಗಿ ಕಳಿತ ಸ್ಟ್ರಾಬೆರಿ ಹಣ್ಣಿನ ಪೇಸ್ಟ್‌ ತಯಾರಿಸಿ ಅದಕ್ಕೆ 2 ಚಮಚ ಜೇನು, 10 ಚಮಚ ಮುಲ್ತಾನಿ ಮಿಟ್ಟಿ ಬೆರೆಸಿ ಚೆನ್ನಾಗಿ ಕಲಕಬೇಕು. ತದನಂತರ ಬ್ರೆಡ್‌ ಕ್ರಂಟ್ಸ್‌ (2 ಚಮಚ) ಪುಡಿಯನ್ನು ಬೆರೆಸಿ 4 ಚಮಚ ಗುಲಾಬಿ ಜಲ ಬೆರೆಸಬೇಕು. ಇದನ್ನು ಪೇಸ್ಟ್‌ ಮಾಡಿದ ಬಳಿಕ ವರ್ತುಲಾಕಾರದಲ್ಲಿ ಮುಖಕ್ಕೆ ಮಾಲೀಶು ಮಾಡುತ್ತಾ, ಫೇಸ್‌ಪ್ಯಾಕ್‌ ಲೇಪಿಸಬೇಕು. 15 ನಿಮಿಷಗಳ ಬಳಿಕ ತೊಳೆದರೆ ಮೊಗದಲ್ಲಿರುವ ಕಲೆ ನಿವಾರಣೆಗೆ ಹಾಗೂ ಕಾಂತಿ ವರ್ಧನೆಗೆ ಸಹಕಾರಿ.

ಮುಲ್ತಾನಿ ಮಿಟ್ಟಿಯಲ್ಲಿ ಮೆಗ್ನಿಶಿಯಂ, ಕಬ್ಬಿಣ ಸಣ್ತೀ , ಕ್ಯಾಲ್ಸಿಯಂ, ಸಿಲಿಕಾ, ಡೊಲೊಮೈಟ್‌, ಕ್ವಾರ್ಟ್ಸ್ ಹಾಗೂ ಕ್ಯಾಲ್‌ಸೈಟ್‌ ಅಂಶಗಳಿದ್ದು , ಈ ವಿಧದ ಫೇಸ್‌ಪ್ಯಾಕ್‌ ಉತ್ತಮ ಕ್ಲೆನ್ಸರ್‌ ಆಗಿದೆ. ಸ್ಟ್ರಾಬೆರಿ ಹಣ್ಣಿನಲ್ಲಿರುವ ವಿಟಮಿನ್‌ “ಸಿ’ ಹಾಗೂ ವಿಶಿಷ್ಟ ಆ್ಯಂಟಿಆಕ್ಸಿಡೆಂಟ್‌ಗಳು ಕಲೆ, ಮುಖದ ಪಿಗ್‌ಮೆಂಟ್‌ ನಿವಾರಣೆಗೆ ಸಹಾಯಕವಾಗಿದೆ. ಜೇನು ಸಹ ಬ್ಲೀಚಿಂಗ್‌ ಪರಿಣಾಮ ಉಂಟಮಾಡಿ ಸಹಜವಾಗಿ ಮುಖದ ಶುಭ್ರತೆಯನ್ನು ವರ್ಧಿಸುತ್ತದೆ.

ಡಾ. ಅನುರಾಧಾ ಕಾಮತ್‌

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.