ಕೆನೆಯಂಥ ಕೆನ್ನೆಗಾಗಿ…


Team Udayavani, Aug 24, 2018, 6:00 AM IST

skin.jpg

ಹೆಣ್ಣಿನ ವರ್ಣನೆಯ ವಿಷಯ ಬಂದಾಗಲೆಲ್ಲ ಆಕೆಯ ಕೆನ್ನೆಯನ್ನು ಹಾಲಿಗೆ ಹೋಲಿಸುವುದುಂಟು. ಹಾಲ್ಗೆನ್ನೆಯ ಹುಡುಗಿ ಅಂತ ಕೇಳುವುದಕ್ಕೇನೋ ಚೆನ್ನಾಗಿದೆ. ಆದರೆ, ಚರ್ಮವನ್ನು ನಿಜಕ್ಕೂ ಹಾಲಿನಷ್ಟು ಬಿಳಿಯಾಗಿ, ನುಣುಪಾಗಿ ಇಡಲು ಸಾಧ್ಯವಾ, ಒಣಚರ್ಮ, ಮೊಡವೆ ಕಲೆ ಇತ್ಯಾದಿ ಸಮಸ್ಯೆಗಳು ಚರ್ಮದ ಕಾಂತಿಯನ್ನು ಹಾಲು ಮಾಡೋದಿಲ್ಲವಾ ಅಂತ ನೀವು ಕೇಳಬಹುದು. ಆ ಸಮಸ್ಯೆಗಳಿಗೆ ಕೆಲವು ಸರಳ ಪರಿಹಾರಗಳು ಇಲ್ಲಿವೆ.

.ನೀವು ಏನು ತಿನ್ನುತ್ತೀರಿ ಮತ್ತು ಎಷ್ಟು ತಿನ್ನುತ್ತೀರಿ ಅನ್ನೋದು ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದಿನಕ್ಕೆ ನಾಲ್ಕು ಬಾರಿ ಹಿತಮಿತವಾಗಿ ಆರೋಗ್ಯಯುತ ಆಹಾರ ಸೇವಿಸಿ.  ಹಣ್ಣು-ತರಕಾರಿ ಹಾಗೂ ಪ್ರೊಟೀನ್‌ಯುಕ್ತ ಆಹಾರ ನಿಮ್ಮ ಡಯಟ್‌ನಲ್ಲಿರಲಿ.

.ಒಣ ಚರ್ಮ, ತುಟಿ ಒಡೆಯುವುದು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಂಡರೆ ದೇಹಕ್ಕೆ “ಸಿ’, “ಇ’ ವಿಟಮಿನ್‌ ಅಗತ್ಯವಿದೆ ಎಂದರ್ಥ. ಹಸಿರು ಸೊಪ್ಪು , ಹಸಿ ತರಕಾರಿ, ಕಿತ್ತಳೆ, ಮೂಸಂಬಿಯಂಥ ಸಿಟ್ರಿಕ್‌ ಅಂಶವಿರುವ ಹಣ್ಣು ಸೇವಿಸಿ.

.ಮುದ್ದು ಮುಖ, ನುಣುಪು ಕೆನ್ನೆ ನಿಮ್ಮದಾಗಬೇಕಾದರೆ ಕೋಪ ಮತ್ತು ಒತ್ತಡಕ್ಕೆ ಗುಡ್‌ಬೈ ಹೇಳಬೇಕು. ಯೋಗ, ಧ್ಯಾನ, ಪ್ರಾಣಾಯಾಮದ ಮೂಲಕ ಮಾನಸಿಕ ನೆಮ್ಮದಿ ಕಾಪಾಡಿಕೊಳ್ಳಿ. ಕನಿಷ್ಠ 7-8 ಗಂಟೆ ನಿದ್ದೆ ಮಾಡುವುದೂ ಕೂಡಾ ಅಷ್ಟೇ ಮುಖ್ಯ.

.ಸತ್ತ ಚರ್ಮವು ಕೆನ್ನೆಯ ಮೇಲಿನ ಸೂಕ್ಷ್ಮ ರಂಧ್ರಗಳನ್ನು ಮುಚ್ಚಿ ಮುಖ ಕಳಾಹೀನವಾಗಿ ಕಾಣುವಂತೆ ಮಾಡುತ್ತದೆ. ಅದನ್ನು ತಡೆಯಲು ಪ್ರತಿವಾರ ಅಥವಾ ಹದಿನೈದು ದಿನಕ್ಕೊಮ್ಮೆ ಮುಖವನ್ನು ಮೃದುವಾಗಿ ಸðಬ್‌ ಮಾಡಿ ತೊಳೆಯಿರಿ.

.ಬೆಳಿಗ್ಗೆ-ಸಂಜೆ ಮುಖ ತೊಳೆದ ನಂತರ ತಪ್ಪದೇ ಮಾಯಿಶ್ಚರೈಸರ್‌ ಹಚ್ಚಿ ಚರ್ಮದ ತೇವ ಕಾಪಾಡಿ. ಕೆನ್ನೆಯ ರಂಗು ಹೆಚ್ಚಲು ಅಲೋವೆರಾ, ಅವಕಾಡೊ ಮಾಯಿಶ್ಚರೈಸರ್‌ ಉತ್ತಮ.

.ನೀವು ಜಾಸ್ತಿ ನೀರು ಕುಡಿದಷ್ಟೂ ನಿಮ್ಮ ಚರ್ಮದ ಹೊಳಪು ಹೆಚ್ಚುತ್ತದೆ. ಮೊಡವೆಯಂಥ ಸಮಸ್ಯೆಗಳೂ ದೂರವಾಗುತ್ತವೆ.

.ಕೆನ್ನೆ ನುಣುಪಾಗಬೇಕಿದ್ದರೆ ನೈಸರ್ಗಿಕವಾಗಿ ಸಿಗುವ ಟೊಮೆಟೋ, ವಿನೆಗರ್‌ ಬಳಸಿ ಬ್ಲೀಚ್‌ ಮಾಡಿ. ಬ್ಲೀಚ್‌ನಿಂದ ಮೊಡವೆ ಕಲೆಯೂ ಮಾಯವಾಗುತ್ತದೆ.

.ಮುಖದ ಚರ್ಮಕ್ಕೆ ರಕ್ತ ಪೂರೈಕೆ ಚೆನ್ನಾಗಾದರೆ ಚರ್ಮ ಕಾಂತಿ  ಪಡೆದುಕೊಳ್ಳುತ್ತದೆ. ವಾರದಲ್ಲಿ 2-3 ಬಾರಿ ಮುಖಕ್ಕೆ ಬಾದಾಮಿ ಎಣ್ಣೆ , ಲೋಳೆಸರ (ಅಲೊವೆರಾ) ಅಥವಾ ಫೇಶಿಯಲ್‌ ಕ್ರೀಮ್‌ ಬಳಸಿ ಮಸಾಜ್‌ ಮಾಡಿ.

.ಜೇನು, ಮೊಸರು, ಬಾದಾಮಿ, ಹಣ್ಣಿನ ತಿರುಳು, ಸೌತೆಕಾಯಿ, ಲಿಂಬೆರಸ… ಇತ್ಯಾದಿ ಅಡುಗೆ ಮನೆಯಲ್ಲೇ ಸಿಗುವ ಪದಾರ್ಥಗಳನು ಬಳಸಿ ಫೇಸ್‌ಪ್ಯಾಕ್‌ ಮಾಡಿ ಹಚ್ಚಿಕೊಂಡರೆ ಚರ್ಮಕ್ಕೆ ಕಾಂತಿ ಸಿಗುತ್ತದೆ.

ಟಾಪ್ ನ್ಯೂಸ್

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.