ಮಾತನಾಡುತ್ತಾಳೆ ಮೌನಿ


Team Udayavani, Aug 31, 2018, 6:00 AM IST

17.jpg

ಮೌನಿ ರಾಯ್‌. ಹಿಂದಿ ಟಿವಿ ಧಾರಾವಾಹಿಗಳನ್ನು ನೋಡುವ ಅಭ್ಯಾಸ ಇರುವವರಿಗೆ ಒಂದು ಚಿರಪರಿಚಿತ ಹೆಸರು. ಕ್ಯೂನಕಿ ಸಾಸ್‌ ಭಿ ಕಭಿ ಬಹೂ ಥಿಯಿಂದ ಹಿಡಿದು ಹತ್ತಾರು ಧಾರಾವಾಹಿಗಳಲ್ಲಿ ನಟಿಸಿ ಮನೆ ಮಾತಾಗಿದ್ದಾಳೆ ಮೌನಿ. 

ಸುಮಾರು ಒಂಬತ್ತು ವರ್ಷ ಕಿರುತೆರೆಯಲ್ಲಿ ಮೆರೆದಾಡಿದ ಬಳಿಕ ಮೌನಿ ಈಗ ಬಾಲಿವುಡ್‌ನ‌ತ್ತ ಪಯಣ ಬೆಳೆಸಿದ್ದಾಳೆ. ಅಕ್ಷಯ್‌ ಕುಮಾರ್‌ ಹೀರೊ ಆಗಿದ್ದ ಗೋಲ್ಡ್‌ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಬಳಿಕ ಮೌನಿಯ ಅದೃಷ್ಟದ ಬಾಗಿಲು ತೆರೆದಿದೆ. ಗೋಲ್ಡ್‌ ಬೆನ್ನಿಗೆ ಕರಣ್‌ ಜೋಹರ್‌ ನಿರ್ಮಿಸುತ್ತಿರುವ ಬ್ರಹ್ಮಾಸ್ತ್ರ  ಮತ್ತು ಜಾನ್‌ ಅಬ್ರಹಾಂ ನಾಯಕನಾಗಿರುವ ರಾ-ರೋಮಿಯೊ  ಅಕ್ಬರ್‌ ವಾಲ್ಟರ್‌ ಎಂಬೆರಡು ಬಿಗ್‌ ಬ್ಯಾನರ್‌ ಚಿತ್ರಗಳಿಗೆ ನಾಯಕಿಯಾಗುವ ಅವಕಾಶ ಸಿಕ್ಕಿದೆ. ಈ ಅದೃಷ್ಟವನ್ನು ಕಂಡು ಅವಳಿಗೆ ನಂಬಿಕೆಯೇ ಬರುತ್ತಿಲ್ಲವಂತೆ.

“ಹಿರಿತೆರೆಗೆ ಬಂದ ಕೂಡಲೇ ಇಷ್ಟೊಂದು ಅವಕಾಶ ಅದೂ ದೊಡ್ಡ ಬ್ಯಾನರ್‌ನ ಚಿತ್ರಗಳು ಸಿಗುವುದು ಸಣ್ಣ ಮಾತಲ್ಲ. ಅದೃಷ್ಟವಿದ್ದರೆ ಮಾತ್ರ ಇದೆಲ್ಲ ಸಾಧ್ಯ’ ಎನ್ನುತ್ತಾಳೆ ಮೌನಿ. ಹಾಗೆಂದು ಮೌನಿಗೆ ಬಾಲಿವುಡ್‌ ತೀರಾ ಹೊಸತೇನೂ ಅಲ್ಲ. 14 ವರ್ಷದ ಹಿಂದೆಯೇ ರನ್‌ ಎಂಬ ಚಿತ್ರದಲ್ಲಿ ಅತಿಥಿ ನಟಿಯಾಗಿ ಕಾಣಿಸಿಕೊಂಡಿದ್ದಳು. ಅನಂತರ ಒಂದು ಪಂಜಾಬಿ ಚಿತ್ರಕ್ಕೆ ನಾಯಕಿಯಾಗಿದ್ದಾಳೆ. ತುಮ್‌ ಬಿನ್‌ ಚಿತ್ರದಲ್ಲೂ ಅತಿಥಿಯಾಗಿ ಮುಖ ತೋರಿಸಿದ್ದಾಳೆ. ಆದರೆ, ಹೀರೊಯಿನ್‌ ಆಗುವ ಅವಕಾಶ ಸಿಕ್ಕಿರುವುದು ಗೋಲ್ಡ್‌ನಲ್ಲಿ. ಹೀಗಾಗಿ ಮೌನಿ ಗೋಲ್ಡ್‌ ತನ್ನ ಮೊದಲ ಚಿತ್ರ ಎನ್ನುತ್ತಿದ್ದಾಳೆ. ಬಾಲಿವುಡ್‌ಗೆ ಬರುವಾಗ ಬಹಳ ತಡವಾಯಿತು ಎನ್ನುವುದನ್ನು ಅವಳು ಒಪ್ಪಿಕೊಳ್ಳುತ್ತಾಳೆ. ಇರುವ ಸೀಮಿತ ಅವಕಾಶದಲ್ಲಿ ತನ್ನದೇ ಆದ ಛಾಪು ಮೂಡಿಸಬೇಕೆನ್ನುವುದು ಅವಳ ಅಭಿಲಾಷೆ. ಕಿರುತೆರೆಯಿಂದ ಹಿರಿತೆರೆಗೆ ಬಂದಿರುವುದನ್ನು ಬದುಕಿನ ಸ್ಥಿತ್ಯಂತರ ಎಂದು ಬಣ್ಣಿಸುತ್ತಿದ್ದಾಳೆ. ಇಲ್ಲಿ ಎಲ್ಲವನ್ನೂ ಮೊದಲಿನಿಂದ ಪ್ರಾರಂಭಿಸಬೇಕು. ಹೀಗಾಗಿ, ಕಿರುತೆರೆಯಲ್ಲಿ ದಶಕದ ಅನುಭವವಿದ್ದರೂ ಹಿರಿತೆರೆಗೆ ಅಪರಿಚಿತವಂತೆ.   

ಟಾಪ್ ನ್ಯೂಸ್

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.