ಮಳೆ ಹಬ್ಬಗಳು


Team Udayavani, Oct 12, 2018, 6:00 AM IST

z-17.jpg

ಮಳೆ ಎಂದರೆ ಪ್ರಕೃತಿಗೆ ಹಬ್ಬ. ಈ ಹಬ್ಬದಲ್ಲಿ ಉತ್ಸಾಹಪೂರ್ಣತೆಯಿಂದ, ಉತ್ಸವ ಆಚರಿಸುವ ಉತ್ಸುಕತೆ ವಿಶ್ವದ ಹಲವೆಡೆ ಇದೆ, ಭಾರತದ ಪರಂಪರೆಯಂತೆ. ಬಂಗಾ ದ್ಯಾ ಜಾತ್ರಾ ಮಳೆ ದೇವತೆಯ ಹಬ್ಬ ಎಂದು ಕರೆಯಲಾಗುವ ಈ ಜಾತ್ರೆಗೆ ನೇಪಾಳದಲ್ಲಿ ಬಹಳ ಮಹತ್ವವಿದೆ. ಮಚ್ಛೇಂದ್ರನಾಥ-ನೇಪಾಳಿಗರ ಮಳೆದೇವತೆ. ಕಠ್ಮಂಡುವಿನ ಸಮೀಪದಲ್ಲೇ ಇರುವ ಬಂಗಾಮತಿಯಲ್ಲಿ ಮಚ್ಛೇಂದ್ರನಾಥನ ರಥಯಾತ್ರೆ ನಡೆದು, ಮಳೆ ದೇವರಿಗೆ ಗೌರವ ಸಮರ್ಪಿಸುವ ಸಂಪ್ರದಾಯ ಅನೂಚಾನವಾಗಿ ನಡೆದುಬಂದಿದೆ.

ಲಾಂಗ್ಟ್ ಚೊ ಹಬ್ಬ
“ಡ್ರ್ಯಾಗನ್‌’ ಚೈನಾದೇಶದ ಮಳೆಗೆ ಮತ್ತು ಜೀವರಾಶಿಯ ದೊರೆ ಹಾಗೂ ದೇವತೆ. ಚೀನೀಯರ ಜಾನಪದೀಯ ನಂಬಿಕೆಯಂತೆ ಡ್ರ್ಯಾಗನ್‌ ದೊರೆಗೆ ಜನರು ಪ್ರಾರ್ಥಿಸುವುದರಿಂದ ಕಾಲಕಾಲಕ್ಕೆ ಮಳೆಯಾಗುತ್ತದೆ. ಅಂತೆಯೇ ಈ ಹಬ್ಬ ಚೀನಾದಲ್ಲಿ ಬಲು ಮಹತ್ವ ಪಡೆದಿರುವ ಮಳೆಹಬ್ಬವಾಗಿದೆ.

ರಾಕೆಟ್‌ ಮಳೆಹಬ್ಬ
ಥಾಯ್‌ಲೆಂಡ್‌ನ‌ಲ್ಲಿ ಮಳೆಗಾಲದಲ್ಲಿ ಆಚರಿಸುವ ಈ “ರಾಕೆಟ್‌ ಫೆಸ್ಟಿವಲ್‌’ ಅಲ್ಲಿಯ ಮಳೆಗಾಲ (ಮೇಯಲ್ಲಿ) ಆಚರಿಸಲ್ಪಡುವ ವಿಶೇಷ ಹಬ್ಬವಾಗಿದೆ. ಮನೆಯಲ್ಲಿಯೇ ತಯಾರಿಸಿದ ರಾಕೆಟ್‌, ಸುಡುಮದ್ದುಗಳನ್ನು ಸಿಡಿಸಿ ಆನಂದಿಸುವ ಈ ಹಬ್ಬದ ದಿನ, ಮಹಿಳೆಯರ ಪಾರಂಪರಿಕ ನೃತ್ಯ, ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡುತ್ತದೆ.

ಮಕಾಹಿರೆ ಹಬ್ಬ ಅಥವಾ ಮಕಾಹಿರೆ ಕಾರ್ನಿವಲ್‌
ಈ ಹಬ್ಬ ಹವಾಯಿ ಪ್ರದೇಶದ ಮುಖ್ಯ ಹಬ್ಬ. ಅಕ್ಟೋಬರ್‌ನಿಂದ ಫೆಬ್ರವರಿಯವರೆಗೆ ಮಳೆರಾಯನಿಗೆ ಗೌರವ ಸೂಚಿಸಲು, ಸಂತಸದಿಂದ ಈ ಹಬ್ಬವನ್ನು ಹವಾಯಿಯನ್ನರು ಆಚರಿಸುತ್ತಾರೆ. ಅವರು ಈ ಸಮಯದಲ್ಲಿ ಮಳೆಗಾಲದ ವಿಶ್ರಾಂತಿಯ ಸಮಯವನ್ನು ಮಳೆ ದೇವತೆ ಲೋನೋ (Lono) ತಮಗೆ ನೀಡಿರುವ  ಉತ್ತಮ ಮಳೆ, ಬೆಳೆಯನ್ನು ಪ್ರಶಂಸಿಸುತ್ತಾ ವಿವಿಧ ಕ್ರೀಡೆ, ಉತ್ಸವ, ನೃತ್ಯ ಹಾಗೂ ವಿಶೇಷ ಭೋಜನ ಕೂಟಗಳನ್ನು ನಡೆಸಿ, ಆಚರಿಸುತ್ತಾರೆ.

ಫೆಸ್ಟಾ ಜುನಿನಾ
ಬ್ರೆಜಿಲ್‌ನಲ್ಲಿ ಈ ಮಳೆಹಬ್ಬವನ್ನು ಸಂತ ಜಾನ್‌ ದ ಬ್ಯಾಪ್ಟಿಸ್ಟ್‌ ಅವರಿಗೆ ಗೌರವ ಸೂಚಿಸುವ ಸಲುವಾಗಿ, ಮಳೆಯಿಂದಾದ ಇಳೆಯ, ಬೆಳೆಯ ಸಮೃದ್ಧಿಯನ್ನು ಆನಂದಿಸುವ ಸಲುವಾಗಿ ಆಚರಿಸುತ್ತಾರೆ. ಬ್ರೆಜಿಲ್‌ನ ಮಳೆಗಾಲದ ಸಮಯದಲ್ಲಿ (ಜೂನ್‌-ಜುಲೈನಲ್ಲಿ) ಆಚರಿಸಲ್ಪಡುವ ಈ ಹಬ್ಬದಲ್ಲಿ ಬ್ರೆಜಿಲ್‌ನ ಗ್ರಾಮೀಣ ಬದುಕಿನ ಸೊಗಡು ಅನಾವರಣಗೊಳ್ಳುವುದಲ್ಲದೆ, ಜೊತೆ ಜೊತೆಗೆ ಅಲ್ಲಿನ ಪ್ರಾಂತೀಯ ಪಾಕ ವೈವಿಧ್ಯ, ಉಡುಗೆ-ತೊಡುಗೆ, ಸಂಗೀತ ನೃತ್ಯಗಳು ಪ್ರಚುರಗೊಳ್ಳುತ್ತವೆ.

ಹೆಮಿಸ್‌ ಹಬ್ಬ
ಜಮ್ಮು , ಕಾಶ್ಮೀರದಲ್ಲಿನ ಲಡಾಖ್‌ನಲ್ಲಿ ಹೆಮಿಸ್‌ ಹಬ್ಬವು ಬೌದ್ಧ ಸ್ತೂಪದಲ್ಲಿ ನಡೆಯುತ್ತದೆ. ಈ ಮಳೆಹಬ್ಬದಲ್ಲಿ ಹಿಮಾಲಯದ ಅಂದಚಂದವನ್ನು ವೀಕ್ಷಿಸುವುದರ ಜೊತೆಗೆ, ಅಲ್ಲಿನ ಜನತೆಯ ನೃತ್ಯ, ಸಂಗೀತ, ಸಂಸ್ಕೃತಿಯನ್ನು ನೋಡಿ ಆನಂದಿಸಬಹುದು.

ಹರೇಲಿ ಹಬ್ಬ
ಛತ್ತೀಸ್‌ಗಡ್‌ ಹಾಗೂ ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿನ ಬುಡಕಟ್ಟು ಜನಾಂಗದ ಈ ಹಬ್ಬ ಶ್ರಾವಣ (ಸಾವನ್‌) ಮಾಸದಲ್ಲಿ ವಿಶಿಷ್ಟವಾಗಿ ನಡೆಯುತ್ತದೆ. ರೈತಾಪಿ ಬಂಧುಗಳು ಹಸು, ಎತ್ತು ಮೊದಲಾದವುಗಳನ್ನು ಗದ್ದೆಯಲ್ಲಿ ಬಳಸುವ ಸಾಧನಗಳನ್ನು ಪೂಜಿಸುತ್ತಾರೆ. ಇದೀ ರೀತಿಯಲ್ಲಿ ಒರಿಸ್ಸಾದಲ್ಲಿ “ರಾಜಪರ್ವ’ ಎಂದು ಮಹಿಳೆಯರೇ ಮುಖ್ಯವಾಗಿ ಹಬ್ಬವನ್ನು ಮಳೆಗಾಲದಲ್ಲಿ ಆಚರಿಸುತ್ತಾರೆ.

ವಿಶ್ವದ ಎಲ್ಲ ಬಗೆಯ ಸಂಸ್ಕೃತಿಯಲ್ಲೂ , ಅದೂ ವಿಶೇಷವಾಗಿ ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯಲ್ಲಿ ಭುವಿ, ಜಲ, ಅಗ್ನಿ , ವಾಯು, ಆಗಸ ಮೊದಲಾದ ಪಂಚಭೌತಿಕ ತಣ್ತೀಗಳನ್ನು ಪೂಜಿಸುವುದು, ಪ್ರಕೃತಿಯ ಆರಾಧನೆ ಬಹು ಪ್ರಾಮುಖ್ಯತೆ ಪಡೆದಿದೆ.

ಜೀವ ಸಂಕುಲಕ್ಕೆ, ಜನಜೀವನಕ್ಕೆ ಸಕಲ  ಚರಾಚರಗಳಿಗೂ ಜೀವನೀಯ ಮಳೆ! ಆದ್ದರಿಂದಲೇ “ಪರ್ಜನ್ಯ’ವೆಂದು ವೇದಕಾಲದಲ್ಲಿ ಮಳೆಯನ್ನು ಪೂಜಿಸಿದರು. ಮಳೆ ದೇವರಿಗೆ ವಿಶೇಷ ಸ್ಥಾನಮಾನ ಪೂಜೆ-ಪುನಸ್ಕಾರಗಳನ್ನು ಕಲ್ಪಿಸಿದರು. ಮಳೆ ಅಮೃತದ ಉಪಾಧಿಯಲ್ಲಿ, ಅಮೃತೋಪವಾಗಿ ಹರಿದು ಧಾರೆಯಾಗಿ, ಅಮೃತವರ್ಷಿಣಿಯಾಗಿ ಜಗವನ್ನು ಪೊರೆಯಲಿ.

ಡಾ. ಅನುರಾಧಾ ಕಾಮತ್‌

ಟಾಪ್ ನ್ಯೂಸ್

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.