ಬಗೆ ಬಗೆ ಬಸಳೆ


Team Udayavani, Nov 30, 2018, 6:00 AM IST

21.jpg

ಕಬ್ಬಿಣಾಂಶ ಹೊಂದಿರುವ ಹಲವಾರು ಸೊಪ್ಪುಗಳಲ್ಲಿ ಬಸಳೆಯೂ ಒಂದು. ರುಚಿಕರ ಖಾದ್ಯ ತಯಾರಿಕೆ ಮಾತ್ರವಲ್ಲ, ಔಷಧಿಯಾಗಿಯೂ ಇದು ಬಹಳ ಉಪಯೋಗಿ.

ಬಸಳೆ ಪತ್ರೊಡೆ 
ಕೆಸುವಿನೆಲೆ ಪತ್ರೊಡೆ ಅರಿಯದವರಿಲ್ಲ. ಆದರೆ, ಬಸಳೆ ಸೊಪ್ಪಿನೊಂದಿಗಿನ ಪತ್ರೊಡೆಯೂ ಅಷ್ಟೇ ರುಚಿಕರ.
ಬೇಕಾಗುವ ಸಾಮಗ್ರಿ: ಬಸಳೆಸೊಪ್ಪು 10-12, ಅಕ್ಕಿ – 3/4 ಕಪ್‌, ಒಣಮೆಣಸು- 6, ಕಡಲೆಬೇಳೆ- 1 ದೊಡ್ಡ ಚಮಚ, ಒಣ ಕೊತ್ತಂಬರಿ- 2 ಚಮಚ, ಮೆಂತ್ಯ- 1/4 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಹುಣಸೆಹಣ್ಣು ಗೋಲಿಗಾತ್ರ.

ತಯಾರಿಸುವ ವಿಧಾನ: ಕಡಲೆಬೇಳೆ, ಅಕ್ಕಿ ಒಂದು ಗಂಟೆ ನೆನೆಸಿ ಒಣಮೆಣಸು, ಹುಣಸೆ, ಉಪ್ಪು ಸೇರಿಸಿ ರುಬ್ಬಿ. ನಯವಾಗಿ ರುಬ್ಬಬೇಕಾಗಿಲ್ಲ. ಕಡಲೆಬೇಳೆ, ಕೊತ್ತಂಬರಿ, ಮೆಂತ್ಯ ಹುರಿದು ಪುಡಿ ಮಾಡಿ ರುಬ್ಬಿದ ಮಿಶ್ರಣಕ್ಕೆ ಬೆರೆಸಿ. ಈ ಹಿಟ್ಟನ್ನು ಬಸಳೆಸೊಪ್ಪಿಗೆ ಪತ್ರೊಡೆಯಂತೆ ಸವರಿ, ಮಡಚಿ ಆವಿಯಲ್ಲಿ ಬೇಯಿಸಿ. ಬಿಸಿಬಿಸಿ ಬಸಳೆ ಪತ್ರೊಡೆ ಅತ್ಯಂತ ರುಚಿಕರ.

ಬಸಳೆ ವಡೆ 
ಬೇಕಾಗುವ ಸಾಮಗ್ರಿ:
ಬಸಳೆ ಸೊಪ್ಪು – 10, ಅಕ್ಕಿಹಿಟ್ಟು- 1/4 ಕಪ್‌, ಉಪ್ಪು ರುಚಿಗೆ ತಕ್ಕಷ್ಟು , ಕಡಲೆಬೇಳೆ- 1/2 ಕಪ್‌, ಹುರಿದ ಕೆಂಪು ಮೆಣಸು- 4.

ತಯಾರಿಸುವ ವಿಧಾನ: ಕಡಲೆಬೇಳೆ ಒಂದು ಗಂಟೆ ನೆನೆಸಿ. ನಂತರ ಉಪ್ಪು , ಮೆಣಸಿನೊಂದಿಗೆ ತರಿತರಿಯಾಗಿ ರುಬ್ಬಿ . ಬಸಳೆ ಸಣ್ಣದಾಗಿ ಕತ್ತರಿಸಿ ಇದಕ್ಕೆ ಅಕ್ಕಿಹಿಟ್ಟು ಬೆರೆಸಿ, ವಡೆಯಂತೆ ತಟ್ಟಿ ಕರಿಯಿರಿ.

ಬಸಳೆ ತಂಬುಳಿ
ಬೇಕಾಗುವ ಸಾಮಗ್ರಿ:
ಬಸಳೆಸೊಪ್ಪು- 8, ಜೀರಿಗೆ- 1/2 ಚಮಚ, ಮೊಸರು- 1/2 ಕಪ್‌, ಕಾಯಿತುರಿ- 2 ಚಮಚ, ಬೆಣ್ಣೆ – 1 ಚಮಚ, ಉಪ್ಪು ರುಚಿಗೆ ತಕ್ಕಷ್ಟು , ಮೆಣಸು-1.

ತಯಾರಿಸುವ ವಿಧಾನ: ಬಸಳೆಸೊಪ್ಪನ್ನು ತೊಳೆದುಕೊಂಡು ಸಣ್ಣಗೆ ಹೆಚ್ಚಿ. ನಂತರ ಬೆಣ್ಣೆ , ಜೀರಿಗೆಯೊಂದಿಗೆ ಹುರಿಯಿರಿ. ನಂತರ ಕಾಯಿತುರಿ, ಮೆಣಸಿನೊಂದಿಗೆ ನಯವಾಗಿ ರುಬ್ಬಿ. ಮೊಸರು, ಉಪ್ಪು ಸೇರಿಸಿ ಒಗ್ಗರಿಸಿ. ಬಾಯಿಹುಣ್ಣಿರುವವರಿಗೆ ಇದರ ಸೇವನೆ ಉತ್ತಮ.

ಬಸಳೆ ಕಷಾಯ 
ಬೇಕಾಗುವ ಸಾಮಗ್ರಿ:
ಬಸಳೆ ಸೊಪ್ಪು – 6, ಬೆಲ್ಲ- ಒಂದು ದೊಡ್ಡ ತುಂಡು, ಹಾಲು- 1/2 ಕಪ್‌.

ತಯಾರಿಸುವ ವಿಧಾನ: ಬಸಳೆ ಎಲೆಗಳನ್ನು ಚೆನ್ನಾಗಿ ತೊಳೆದು ಒಂದು ಕಪ್‌ ನೀರಿನಲ್ಲಿ ಕುದಿಸಿ, ಅರ್ಧಕ್ಕೆ ಇಳಿಸಿ, ಸೋಸಿಕೊಳ್ಳಿ. ಇದಕ್ಕೆ ಬೆಲ್ಲ, ಬಿಸಿ ಹಾಲು ಸೇರಿಸಿ ಸೇವಿಸಿ. ಉಷ್ಣ ಪ್ರಕೃತಿಯವರಿಗೆ, ಬಾಯಿಹುಣ್ಣಿನ ತೊಂದರೆ ಅನುಭವಿಸುವವರಿಗೆ ಇದರ ಸೇವನೆ ಉತ್ತಮ.

ದೀಪಾ ಡಿ ಹೆಗಡೆ 

ಟಾಪ್ ನ್ಯೂಸ್

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

1-S-M

TIME’s : 100 ಪ್ರಭಾವಿಗಳ ಪಟ್ಟಿಯಲ್ಲಿ ಸಾಕ್ಷಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.