ಬದುಕು ಬಂಗಾರ
Team Udayavani, Dec 28, 2018, 6:45 AM IST
ಚಿನ್ನದ ಒಡವೆಗಳನ್ನು ಧರಿಸುವಿಕೆ
.ಆಭರಣಗಳನ್ನು ಧರಿಸುವಾಗ ಯಾವಾಗಲೂ ಕುಳಿತುಕೊಂಡೇ ಧರಿಸಬೇಕು. 2 ನಿಮಿಷ ಲೇಟ್ ಆದರೂ ಪರವಾಗಿಲ್ಲ, ಕಾರು ಹೋಗುತ್ತಾ ಇರುವಾಗ ಧರಿಸಬಾರದು.
.ನಿದ್ದೆ ಮಾಡುವ ಸಂದರ್ಭಗಳಲ್ಲಿ ಭಾರವಾದ ಒಡವೆಗಳನ್ನು ಯಾವಾಗಲು ಧರಿಸದೇ ಇರುವುದು ಉತ್ತಮ.
.ಯಾವಾಗಲೂ ಸುಗಂಧ ದ್ರವ್ಯಗಳನ್ನು ಬಳಸಿದ ಸ್ವಲ್ಪಹೊತ್ತಿನ ಬಳಿಕ ಆಭರಣಗಳನ್ನು ಧರಿಸಬೇಕು. ಅದು ಚಿನ್ನದ್ದಿರಲಿ, ಹವಳದ್ದಾಗಿರಲಿ, ಮುತ್ತು ಅಥವಾ ಹರಳುಗಳದ್ದೇ ಆಗಿರಲಿ ಯಾಕೆಂದರೆ ಸುಗಂಧ ದ್ರವ್ಯಗಳಲ್ಲಿ ಕೆಮಿಕಲ್ಗಳಿವೆ. ಆಭರಣಗಳು ಬಣ್ಣ ಕಳೆದುಕೊಳ್ಳುತ್ತವೆ.
.ಯಾವಾಗಲೂ ಚಿನ್ನ ಹಾಗೂ ವಜಾÅಭರಣಗಳನ್ನು ಹತ್ತಿಯ ಬಟ್ಟೆಯಲ್ಲಿ ಸುತ್ತಿಡಬೇಕು. ಪ್ಲಾಸ್ಟಿಕ್ನ್ನು ಬಳಸದಿರಿ.
.ಸೂಕ್ಷ್ಮವಾದ ಲಾಕ್, ಹುಕ್ಗಳನ್ನು ಬೇರ್ಪಡಿಸುವ ಮೊದಲು ಜ್ಯುವೆಲ್ಲರ್ಗಳಿಂದ ಉಪಯುಕ್ತ ಸಲಹೆ, ಸಹಾಯ ಪಡೆಯಬೇಕು.
ಇಂದು ಆಭರಣಕ್ಕೆ ಇಷ್ಟೊಂದು ಪ್ರಾಶಸ್ತ ಹೇಗೆ ಬಂತು ಎಂದರೆ ಹಿಂದೆ ತಲೆ-ತಲಾಂತರಗಳಿಂದ ಯಾರು ವರ್ಷಕ್ಕೊಂದಿಷ್ಟು ಆಭರಣ ಎಂದು ಖರೀದಿಸಿ ಇಟ್ಟ ಕುಟುಂಬ ಸಂತೋಷವಾಗಿ ಜೀವನ, ವಿದ್ಯಾಭ್ಯಾಸ, ಜಾಗ, ಮನೆ ಮುಂತಾದ ಸೌಕರ್ಯಗಳನ್ನು ಸುಲಭದಲ್ಲಿ ಮಾಡಿಕೊಂಡ ಉದಾಹರಣೆ ನಮ್ಮ ಕಣ್ಣ ಮುಂದೆ ಇದೆ. ಯಾವುದೇ ಇಲೆಕ್ಟ್ರಾನಿಕ್ ವಸ್ತುಗಳಿಗೆ ಹಾಕಿದ ಮೌಲ್ಯ ಕ್ಷಣ ಮಾತ್ರದಲ್ಲಿ ಮಿಂಚಿ ಹೋದಂತೆ. ಆದರೆ ಬಂಗಾರ ಹಾಗಲ್ಲ, ಬಂಗಾರದ ಬೆಳೆಯನ್ನು ಸುರಿಸಿ ಜೀವನಕ್ಕೆ ಆಧಾರವಾಗಿರುತ್ತದೆ.
– ಕೃಷ್ಣವೇಣಿ ಪ್ರಸಾದ ಮುಳಿಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು