ಮನೆಯೊಳಗೆ ಮನೆಕೆಲಸದವರು ಇದ್ದಾರೋ ಇಲ್ಲವೋ!


Team Udayavani, Jan 18, 2019, 12:30 AM IST

18.jpg

“ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬಳು ಮಹಿಳೆಯಿರುತ್ತಾಳೆ’ ಎಂಬ ಮಾತಿದೆ. ಅದೇ ಮಹಿಳೆಯ ಶ್ರೇಯದ ಹಿಂದೆ ಹಲವಾರು ಕಾಣದ ಕೈಗಳೂ ಕೆಲಸ ಮಾಡಿರುತ್ತವೆ. ಆ ಕಾಣದ ಕೈಗಳ ಹಿಂದೆಯೂ ಹೆಣ್ಣು ಜೀವವೇ ಇರುತ್ತದೆ. ಮಕ್ಕಳನ್ನು ನೋಡಿಕೊಳ್ಳುವ, ಅಡುಗೆ ಮಾಡುವ, ಹಿರಿಯರ ಆರೈಕೆ ಮಾಡುವ, ಪಾತ್ರೆ ತೊಳೆಯುವ, ಬಟ್ಟೆ ಒಗೆಯುವ ಆ ಕೈಗಳು ಕೆಲಸದಾಕೆಯದು. ಈ ಮೂಲಕ ಆಕೆ ತನ್ನ   ಯಜಮಾನಿಯ ಮತ್ತು ಮನೆಯವರ ಯಶಸ್ಸಿನಲ್ಲಿ ಪರೋಕ್ಷವಾಗಿ ಪಾಲುದಾರಳಾಗಿರುತ್ತಾಳೆ. 

ಮಹಿಳೆ ಸ್ವಾವಲಂಬಿಯಾಗುತ್ತಿದ್ದಾಳೆ. ವಿಶಾಲ ಜಗತ್ತಿನಲ್ಲಿ ತನಗೆ ಬೇಕಾದುದನ್ನು ಪಡೆಯುವ ವೃತ್ತಿ ಕೌಶಲ್ಯ, ಛಾತಿ ಅವಳಲ್ಲಿದೆ. ಕೆಲಸಕ್ಕೆಂದು ಮನೆಯಿಂದ ಹೊರಬೀಳುವ ಇಂದಿನ ಮಹಿಳೆ, ಮನೆಯ ಚಿಂತೆ ಬಿಟ್ಟು ನಿಶ್ಚಿಂತೆಯಿಂದ, ಆತ್ಮವಿಶ್ವಾಸದಿಂದ ವೃತ್ತಿಕ್ಷೇತ್ರದಲ್ಲಿ ಮುನ್ನುಗ್ಗಲು ಸಾಧ್ಯವಾಗಿದ್ದರೆ ಅದರ ಶ್ರೇಯ ಸಲ್ಲಬೇಕಿರುವುದು ಮನೆಗೆಲಸದವರಿಗೆ. ಹಾಗೆ ನೋಡಿದರೆ, ಮನೆಗೆಲಸದವರು ಹೊರಗಿನವರಲ್ಲ. ಒಳಗಿನವರು. ಯಾಕೆ ಗೊತ್ತಾ? ಕೆಲಸದ ಮಹಿಳೆಯರ ಕೈಗಳಲ್ಲಿ ನಾವು ನಮ್ಮ ಬದುಕಿನ ಭಾಗಗಳನ್ನೇ ನೀಡಿರುತ್ತೇವೆ. ಮನೆ, ಮಕ್ಕಳು, ಹಿರಿಯರು ಇವರೆಲ್ಲರನ್ನೂ ಕಾಪಿಡುವವಳು ಕೆಲಸದಾಕೆ. ಹೀಗಾಗಿ ತಿಂಗಳು ತಿಂಗಳು ಸಂಬಳವನ್ನು ಆಕೆಗೆ ನೀಡುತ್ತೇವಾದರೂ, ದುಡ್ಡಿಗೂ ಮಿಗಿಲಾದ ಪ್ರೀತಿ-ವಿಶ್ವಾಸ ಮನೆಯವರ ಮತ್ತು ಕೆಲಸದಾಕೆಯ ನಡುವೆ ಬೆಸೆದುಕೊಂಡಿರುತ್ತದೆ.

ಮನೆ ಜೊತೆಗಿನ ಬಾಂಧವ್ಯ
ಬಹಳ ಹಿಂದೆ ಪಾಶ್ಚಾತ್ಯ ದೇಶಗಳಲ್ಲಿ ಪರಿಚಾರಕಿಯರನ್ನು “ನ್ಯಾನಿ’, “ಗವರ್ನೆಸ್‌’ ಮುಂತಾದ ಹೆಸರುಗಳಿಂದ  ಕರೆಯುತ್ತಿದ್ದರು. ಸಾಮಾನ್ಯವಾಗಿ ಪರಿಚಾರಕಿಯಾಗಿದ್ದವರು ನೀಗ್ರೋಗಳಾಗಿರುತ್ತಿದ್ದರು. ಜಗತ್ತಿನೆಲ್ಲೆಡೆ ಗಮನಿಸಿದರೂ ಸಾಮಾಜಿಕವಾಗಿ, ಆರ್ಥಿಕವಾಗಿ ಸದೃಢರಲ್ಲದವರೇ ಮನೆಗೆಲಸಕ್ಕೆ ಸೇರಿರುವುದು ಕಂಡುಬರುತ್ತದೆ. ಇಂದು ಮನೆಗೆಲಸ ಎನ್ನುವುದು ಕಡಿಮೆ ಸಂಗತಿಯೇನಲ್ಲ. ನಿಷ್ಠೆಯಿಂದಲೇ ಕೆಲಸ ಮಾಡುತ್ತ ತಿಂಗಳಿಗೆ ಹೆಚ್ಚಾ ಕಮ್ಮಿ ಸಾಫ್ಟ್ ವೇರ್‌ ಉದ್ಯೋಗಿಗಳಷ್ಟೇ ಸಂಬಳ ಪಡೆಯುವವರೂ ಇದ್ದಾರೆ. ಆದರೂ ಪಾಶ್ಚಾತ್ಯ ದೇಶಗಳಲ್ಲಿನ ಕೆಲಸದವರಿಗೆ ಇರುವಷ್ಟು ಸಡಿಲ ನಿಯಮಗಳು, ವೇತನ, ಗೌರವ ಇಲ್ಲಿನ್ನೂ ಸಿಗಬೇಕಷ್ಟೆ. ವಿದೇಶಗಳಲ್ಲಿ ತಿಂಗಳಿಗೆ ಲಕ್ಷ ಪಗಾರ ಎಣಿಸುವವರು ಕೂಡಾ ಪಾರ್ಟ್‌ಟೈಮ್‌ನಲ್ಲಿ ಮನೆಗೆಲಸ, ಬೇಬಿ ಸಿಟ್ಟಿಂಗ್‌, ಪೌರಕಾರ್ಮಿಕರಾಗಿ ದುಡಿಯುವುದಿದೆ. ಅಲ್ಲಿ ಅದೆಲ್ಲ ಸಾಮಾನ್ಯ. ಅಂಥ ಪರಿಸ್ಥಿತಿ ಇಲ್ಲೂ ಬಂದರೆ ಮನೆಗೆಲಸದವರನ್ನು ಗೌರವದಿಂದ ಕಾಣುವ ಪ್ರವೃತ್ತಿ ನಮ್ಮಲ್ಲೂ ಬೆಳೆಯಬಹುದು.

ಇಷ್ಟು ಕಾಲದಿಂದ ಮನೆಗಳು ಇವರಿಂದಲೇ ನಿಭಾಯಿಸಲ್ಪಡುತ್ತಿದ್ದರೂ ಮನೆಗೆಲಸವನ್ನು ನಾವು “ಉದ್ಯೋಗ’, “ವೃತ್ತಿ’ ಎಂದು ಪರಿಗಣಿಸದಿರುವುದು ಆಶ್ಚರ್ಯ! ಏಕೆಂದರೆ, ಮನೆಕೆಲಸ ಎಷ್ಟೇ ಚೆನ್ನಾಗಿ ಮಾಡಿದರೂ ಅದು ‘unskilled’ ಅಂದರೆ ಕೌಶಲಗಳ ಅಗತ್ಯವಿಲ್ಲದ್ದು ಎಂಬ ಅಭಿಪ್ರಾಯವಿದೆ! ವೃತ್ತಿಪರತೆ professionalism ಅದಕ್ಕೆ ಬೇಡ ಎಂಬುದು ನಮ್ಮ ನಂಬಿಕೆ. ಆದರೆ, ಪಾಶ್ಚಾತ್ಯ ದೇಶಗಳಲ್ಲಿ ಮನೆಕೆಲಸವನ್ನೇ ಆಧರಿಸಿದ “ಹೌಸ್‌ ಕೀಪಿಂಗ್‌’ ಉದ್ಯಮ ಕಾರ್ಪೊರೇಟ್‌ ಮಟ್ಟದಲ್ಲಿ ದೊಡ್ಡದಾಗಿ ಬೆಳೆದಿದೆ.

ಮನೆ ಮೇಲೆ ಪ್ರೀತಿಯೂ ಇರಲಿ
ಇಂದು “ಮನೆಕೆಲಸದವಳು ರಜಾ’ ಎಂದರೆ ನಮ್ಮ ಕೈಕಾಲುಗಳೇ ಆಡುವುದಿಲ್ಲ ! ಅವರು ಶಾಶ್ವತವಾಗಿ ನಮ್ಮ ಮನೆಕೆಲಸ ಮುಂದುವರಿಸಬೇಕು ಎಂದು ಅಪೇಕ್ಷಿಸುವುದೂ ಸಾಮಾನ್ಯವಾಗಿದೆ. ಕಚೇರಿಗಳಲ್ಲಿ ತಮ್ಮ ತಮ್ಮ ಅಗತ್ಯಗಳಿಗೆ, ಅನುಕೂಲಗಳಿಗೆ ತಕ್ಕಂತೆ ರಜೆ ಪಡೆದುಕೊಳ್ಳುವ ನಾವು ಮನೆಗೆಲಸದಾಕೆಗೆ ರಜೆ ನೀಡಲು ಹಿಂದೆ ಮುಂದೆ ನೋಡುತ್ತೇವೆ. ಹೋಗಲಿ, ಆಕೆಗೆ ವಿಶ್ರಾಂತಿ ಸಿಗಲಿ ಎಂಬ ಕಾರಣಕ್ಕಲ್ಲದಿದ್ದರೂ ತಮ್ಮ ಸ್ವಂತ ಮನೆ ಮೇಲಿನ ಪ್ರೀತಿಗಾದರೂ ಆವಾಗಾವಾಗ ಮನೆಗೆಲಸದವರಿಗೆ ಬಿಡುವು ನೀಡುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ಮನೆ ನಿರ್ವಹಣೆಯ ಜವಾಬ್ದಾರಿ ತಿಳಿಯುವುದಲ್ಲದೆ, ಮನೆಮಂದಿಯ ನಡುವೆ ಬಾಂಧವ್ಯವೂ ಏರ್ಪಡುತ್ತದೆ.

ಥ್ಯಾಂಕ್‌ಲೆಸ್‌ V/s ಜಾಬ್‌ಲೆಸ್‌
ಮನೆಗೆಲಸದಾಕೆ ಎಷ್ಟೇ ಚೆನ್ನಾಗಿ ಕೆಲಸ ನಿರ್ವಹಿಸಿದರೂ, ಅದರಿಂದ ಕುಟುಂಬಕ್ಕೆ ಎಷ್ಟೇ ದೊಡ್ಡ ಉಪಕಾರವಾಗಿದ್ದರೂ ಮನೆಯವರು ಮನ ತುಂಬಿ ಅವಳನ್ನು ಶ್ಲಾ ಸುವುದಿಲ್ಲ. ಥ್ಯಾಂಕ್ಸ್‌ ಅನ್ನು ನಿರೀಕ್ಷಿಸದೆ ತನ್ನ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಹೋಗಬೇಕಾಗುತ್ತದೆ. ಜಾಬ್‌ಲೆಸ್‌ ಆಗುವುದಕ್ಕಿಂತ ಥ್ಯಾಂಕ್‌ಲೆಸ್‌ ಆಗಿರುವುದೇ ಒಳ್ಳೆಯದು ಎಂಬುದನ್ನು ಅವರು ಯಾವತ್ತೋ ಅರಿತಿರುತ್ತಾರೆ. ಆದರೆ, ಮುನ್ನಾಭಾಯಿ ಎಂಬಿಬಿಎಸ್‌ ಸಿನಿಮಾದಲ್ಲಿ ತೋರಿಸುವಂತೆ ಒಂದು ಜಾದೂ ಕೀ ಜಪ್ಪಿ , ಒಂದು ಚಿಕ್ಕ ಥ್ಯಾಂಕ್ಸ್‌ ಕೂಡಾ ಕೆಲಸದವರಲ್ಲಿ ಅದಮ್ಯ ಚೇತನ ತುಂಬಬಲ್ಲುದು.

ಇಷ್ಟಕ್ಕೂ ಮನೆಗೆಲಸ ಎಂದರೆ ಬರೀ ಮನೆಯ ಕೆಲಸಗಳನ್ನು ನಿರ್ವಹಿಸುವುದು ಮಾತ್ರವಲ್ಲ. ಮನೆಗೆಲಸದ ಜೊತೆಗೆ ಅನೇಕ ಗುರುತರ ಜವಾಬ್ದಾರಿಗಳೂ ಇರುತ್ತವೆ. ಮನೆಗಳಲ್ಲಿ ಯಾವುದೇ ವಸ್ತು ಕಾಣೆಯಾದರೆ ಮೊದಲು ಅನುಮಾನ ಬರುವುದು ಕೆಲಸದಾಕೆಯ ಮೇಲೆ. ಕೆಲವೊಮ್ಮೆ ಯಜಮಾನತಿಗೆ ಪಕ್ಕದ ಮನೆಯ ವಿಚಾರ ತಿಳಿದುಕೊಳ್ಳಲು ಸಿಗುವವಳೂ ಕೆಲಸದಾಕೆಯೇ ಆಗಿರುತ್ತಾಳೆ. ತಮಗೆ ಮಾಹಿತಿ ಒದಗಿಸಿದ ಹಾಗೆಯೇ ತಮ್ಮ ಮನೆಯ ವಿಚಾರಗಳನ್ನು ಬೇರೊಬ್ಬರ ಬಳಿ ಹಂಚಿಕೊಂಡಾಳೆಂಬ ಅನುಮಾನಗಳನ್ನೂ ಕೆಲಸದಾಕೆ ಎದುರಿಸಬೇಕಾಗುತ್ತದೆ. ಮನೆಮಂದಿ ಕೆಲಸದಾಕೆಯನ್ನು ಹೆಚ್ಚು ಹಚ್ಚಿ ಕೊಂಡರೂ ಕೆಲಸದಾಕೆಗೆ ಆಪತ್ತು ಕಟ್ಟಿಟ್ಟ ಬುತ್ತಿ. ಆಗ ಯಜಮಾನತಿಯ ನಿಷ್ಠುರವನ್ನು ಅವಳು ಕಟ್ಟಿಕೊಳ್ಳಬೇಕಾಗುತ್ತದೆ. ಇಂಥ ಅನೇಕ ಕಾರಣಗಳಿಂದಾಗಿ ಮನೆಗೆಲಸವನ್ನು ಸೂಕ್ಷ್ಮವಾಗಿ ನಿಭಾಯಿಸಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ.

ವೃತ್ತಿಗೌರವ ಅವರಿಗೂ ಇದೆ
ಇತರ ಮಹಿಳೆಯರಾದರೂ ಅಷ್ಟೇ; ಗೃಹಿಣಿಯೊಬ್ಬಳ ಮನೆಯಲ್ಲಿ ದೀರ್ಘ‌ಕಾಲ ಸಹಾಯಕಿಯರು ನೆಲೆ ನಿಲ್ಲುವಾಗ, ಅದರ ಹಿಂದಿನ ಅಂಶಗಳನ್ನು ಗಮನಿಸುವುದಿಲ್ಲ. ಅವರ ಟೀಕೆ ಒಂದೇ- “ಅವರಿಗೇನು? ಬೇಕಾದ ಹಾಗೆ ಕೆಲಸದವರಿದ್ದಾರೆ. ಮಕ್ಕಳನ್ನು ಅವರ ಬಳಿ ಬಿಡ್ತಾರೆ- ಎಲ್ಲಾ ಕಡೆ ತಿರುಗಾಡ್ತಾರೆ! ನಮಗೂ ಆ ಥರದ ಕೆಲಸದವರಿದ್ದಿದ್ರೆ, ನಾವೂ ಎಲ್ಲದೂ ಮಾಡ್ತಿದ್ವಿ’ ಎಂದು. ಮನೆಯ ಸಹಾಯಕಿಯರ ಬಳಿ ಕೆಲಸ ಮಾಡಿಸಿಕೊಳ್ಳುವುದೂ ಒಂದು ಕಲೆಯೇ ಎಂಬುದನ್ನು ಅವರು ಗಮನಿಸುವುದೇ ಇಲ್ಲ. ತನ್ನನ್ನು-ತನ್ನ ಕೆಲಸವನ್ನು ಗೌರವಿಸುವ ಮಹಿಳೆ ಯನ್ನು ಮನೆಯ ಸಹಾಯಕಿಯರೂ ಗೌರವಿಸುತ್ತಾರೆ. ಕೆಲಸಕ್ಕೆಂದು ಇಟ್ಟುಕೊಂಡಾಗಲೂ, ತನ್ನ ಸ್ವಾವಲಂಬಿತನವನ್ನು ಸಂಪೂರ್ಣವಾಗಿ ಒಪ್ಪಿಸಿ ಪರಾವಲಂಬಿಯಾಗದೇ, ಅವರ ಜೊತೆಯಲ್ಲಿ ತಾನೂ ಕೆಲಸ ಮಾಡಿ, ಅವರಿಗೆ ಮಾರ್ಗದರ್ಶನ ಮಾಡುವ ಮನೆಯೊಡತಿ ಯಿಂದ ಸಹಾಯಕಿಯರು ಕಲಿಯುತ್ತಾರೆ. ತಮ್ಮ ಮನೆ- ಮಕ್ಕಳನ್ನೂ, ತಮ್ಮ ಮನೆಯೊಡತಿಯ ಮನೆ-ಮಕ್ಕಳಂತೆ ಬೆಳೆಸಲು ಪ್ರಯತ್ನಿಸು ತ್ತಾರೆ. ಹಾಗಾಗಿ ಮನೆಯ ಸಹಾಯಕಿಯರನ್ನು “ಒಳ್ಳೆಯ’ ಕೆಲಸದ ವರನ್ನಾಗಿಸುವುದು ಮನೆಯೊಡತಿಯ ಸಾಮರ್ಥ್ಯಗಳಲ್ಲಿ ಒಂದು. ಮನೆಗೆಲಸದವರು ಕಾಲದಿಂದ ಕಾಲಕ್ಕೆ ಬದಲಾಗಬಹುದು. ಆದರೆ ಹುಟ್ಟಿನಿಂದ ಹಿಡಿದು ಬೆಳೆದು ಜೀವನದ ಹಂತಗಳನ್ನು ದಾಟಿ ವೃದ್ಧರಾಗುವ ತನಕವೂ ಅವರು ವಿವಿಧ ರೂಪಗಳಲ್ಲಿ ನಮಗೆ ನೆರವಾಗುತ್ತಿರುತ್ತಾರೆ ಎಂಬ ಸತ್ಯವನ್ನು ನಾವು ಮನಗಾಣಬೇಕು. ಇಂಥ ಮನೆ ಸಹಾಯಕಿಗೊಂದು ಸಲಾಂ!

ಕೆ. ಎಸ್‌. ಪವಿತ್ರಾ

ಟಾಪ್ ನ್ಯೂಸ್

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.