ವೀಸಾ ನೀತಿ ಉಲ್ಲಂಘನೆ: ಟಿಸಿಎಸ್‌, ಇನ್ಫೋಸಿಸ್‌ ವಿರುದ್ಧ ಅಮೆರಿಕ ಕಿಡಿ


Team Udayavani, Apr 24, 2017, 11:01 AM IST

24-PTI-8.jpg

ವಾಷಿಂಗ್ಟನ್‌: ಎಚ್‌-1ಬಿ ವೀಸಾ ವಿಚಾರಕ್ಕೆ ಸಂಬಂಧಿಸಿ ಭಾರತದ ಐಟಿ ದಿಗ್ಗಜರಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ (ಟಿಸಿಎಸ್‌) ಮತ್ತು ಇನ್ಫೋಸಿಸ್‌ ಕಂಪೆನಿಗಳ ವಿರುದ್ಧ ಅಮೆರಿಕ ಗಂಭೀರ ಆರೋಪ ಮಾಡಿದೆ. ಈ ಎರಡೂ ಕಂಪೆನಿಗಳು ಲಾಟರಿ ಪ್ರಕ್ರಿಯೆಯಲ್ಲಿ ಕಾನೂನು ಬಾಹಿರವಾಗಿ ಹೆಚ್ಚುವರಿ ಟಿಕೆಟ್‌ಗಳನ್ನು ಹಾಕಿ ಹೆಚ್ಚೆಚ್ಚು ವೀಸಾ ಪಡೆಯುವ ಹುನ್ನಾರ ನಡೆಸಿವೆ ಎನ್ನುವುದು ಅಮೆರಿಕದ ಆರೋಪ. ಈ ಹಿನ್ನೆಲೆಯಲ್ಲಿ ಇದೀಗ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತ “ಅರ್ಹತೆ  ಆಧಾರಿತ ವಲಸೆ ನೀತಿ’ ಜಾರಿಗೆ ಮುಂದಾಗಿದೆ.

ಎಚ್‌-1 ಬಿ ವೀಸಾ ವಿಚಾರದಲ್ಲಿ ಕಳೆದ ವಾರ ಶ್ವೇತಭವನದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ನೂತನ ವೀಸಾ ನೀತಿ ಜಾರಿಯ ಬಳಿಕ ಬೇಡಿಕೆ ಸಾಕಷ್ಟು ಹೆಚ್ಚುತ್ತಿದೆ. ಭಾರಿ ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾಗಿವೆ. ಕಾರಣ ಲಾಟರಿ ಪ್ರಕ್ರಿಯೆ ಮೂಲಕ ನಿರ್ಧರಿಸಲು ಅತ್ಯಾಧುನಿಕ ಆ್ಯಪ್‌ ಅಭಿವೃದ್ಧಿಪಡಿಸಲಾಧಿಗುತ್ತಿದೆ ಎಂದು ಅಧಿಕೃತವಾಗಿಯೇ ಹೇಳಿದ್ದರು.

ಇದೀಗ ವೈಟ್‌ಹೌಸ್‌ ಹಿರಿಯ ಅಧಿಕಾರಿಯೊಬ್ಬರು, ಎಚ್‌-1ಬಿ ವೀಸಾ ಪಡೆದುಕೊಳ್ಳಲಿಕ್ಕಾಗಿ ಟಾಟಾ, ಇನ್ಫೋಸಿಸ್‌, ಕಾಗ್ನೆ„ಝೆಂಟ್‌ ಕಂಪೆನಿಗಳು ಹೆಚೆಚ್ಚು ಟಿಕೆಟ್‌ಗಳನ್ನು ಹಾಕಿವೆ. ಹೆಚ್ಚು ವೀಸಾಗಳಿಗಾಗಿ ಬೇಡಿಕೆ ಇಟ್ಟಿವೆ ಎಂದಿದ್ದಾರೆ. ಎಚ್‌-1ಬಿ ವೀಸಾಗಾಗಿ ಮುಗಿಬಿದ್ದಿರುವ ಭಾರತದ ಈ ಕಂಪೆನಿಗಳ ಸಿಬಂದಿ ಅಮೆರಿಕದಲ್ಲಿ ವರ್ಷಕ್ಕೆ ಅಂದಾಜು 38.79 ಲಕ್ಷ ರೂ.ನಿಂದ 42.02 ಲಕ್ಷ ರೂ. ವೇತನ ಪಡೆದುಕೊಳ್ಳುಧಿತ್ತಾರೆ. ಇನ್ನು ಸಿಲಿಕಾನ್‌ವ್ಯಾಲಿ ಸಾಫ್ಟ್ ವೇರ್‌ ಎಂಜಿನಿಯರ್‌ಗಳು ಹೆಚ್ಚಾ ಕಡಿಮೆ 96.97 ಲಕ್ಷ ರೂ. ವೇತನ ಪಡೆದುಕೊಳ್ಳುತ್ತಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

38 ಭಾರತೀಯರು ವಶಕ್ಕೆ: ಏತನ್ಮಧ್ಯೆ, ವೀಸಾ ಅವಧಿ ಮುಗಿದರೂ ಅಲ್ಲೇ ಇದ್ದ ಹಾಗೂ ಅಕ್ರಮವಾಗಿ ಕೆಲಸ ಮಾಡುತ್ತಿದ್ದ 38 ಮಂದಿ ಭಾರತೀಯರನ್ನು ಬ್ರಿಟನ್‌ನ ವಲಸೆ ಅಧಿಕಾರಿಗಳು ರವಿವಾರ ವಶಕ್ಕೆ ಪಡೆದಿದ್ದಾರೆ. ಬಂಧಿತರಲ್ಲಿ 9 ಮಂದಿ ಮಹಿಳೆಯರೂ ಸೇರಿದ್ದಾರೆ. ಲೈಸೆಸ್ಟರ್‌ನ ಉಡುಪು ತಯಾರಿಕಾ ಕಂಪೆನಿ ಮೇಲೆ ದಾಳಿ ನಡೆಸಿ, ಇವರನ್ನು ವಶಕ್ಕೆ ಪಡೆಯಲಾಗಿದೆ.

ಟಿಸಿಎಸ್‌ನಿಂದ 11,500 ಮಂದಿ ಸ್ಥಳೀಯರ ನೇಮಕ
ಎಚ್‌-1ಬಿ ವೀಸಾ ಸಮಸ್ಯೆಯಿಂದ ಪಾರಾಗಲು ಟಿಸಿಎಸ್‌ 2016-17ನೇ ಸಾಲಿನಲ್ಲಿ ದೇಶದಿಂದಾಚೆ ಬರೋಬ್ಬರಿ 11,500 ಮಂದಿಯನ್ನು  ನೇಮಕ ಮಾಡಿಕೊಂಡಿದೆ. ಸ್ಥಳೀಯರ ಉದ್ಯೋಗಕ್ಕೆ ಆದ್ಯತೆ ನೀಡಬೇಕೆಂದು ಸರಕಾರ ಹೇಳಿರುವ ಹಿನ್ನೆಲೆಯಲ್ಲಿ, ಅಮೆರಿಕದಲ್ಲಿ ಬಿ-ಸ್ಕೂಲ್‌ ಮತ್ತು ಎಂಜಿನಿಯರಿಂಗ್‌ ಪದವೀಧರರನ್ನೇ ಹೆಚ್ಚಾಗಿ ನೇಮಕ ಮಾಡಲಾಗಿದೆ. 

11,500 ಜನರನ್ನು ಅಮೆರಿಕದಲ್ಲಿ ನೇಮಕ ಮಾಡಿಕೊಂಡಿದ್ದೇವೆ. ಕ್ಯಾಂಪಸ್‌ಗಳಿಂದ ಎಂಜಿನಿಯರ್‌ಗಳನ್ನು ಹಾಗೂ ಅಮೆರಿಕದ ಪ್ರಮುಖ 10 ಉದ್ಯಮ ತರಬೇತಿ ಶಾಲೆಗಳಿಂದ ಅನೇಕರನ್ನು ನೇಮಕ ಮಾಡಿಕೊಂಡಿದ್ದೇವೆ.
ರಾಜೇಶ್‌ ಗೋಪಿನಾಥನ್‌, ಟಿಸಿಎಸ್‌ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ

ಟಾಪ್ ನ್ಯೂಸ್

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ

Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ

America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್‌ ಬೈಬಲ್‌ ಮಾರಾಟ!

America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್‌ ಬೈಬಲ್‌ ಮಾರಾಟ!

1—weqe

Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ

LGBTQ Couple anjali chakra sufi malik broke their marriage

Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್‌ ಸಲಿಂಗಿ ಜೋಡಿ ಬ್ರೇಕಪ್‌!

ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!

H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.