ಮರುಭೂಮಿಯಲ್ಲೂ ಮಲಯಾಳಿ ಮಳಿಗೆ!
Team Udayavani, May 8, 2017, 11:32 PM IST
ದಮ್ಮಾಮ್: ಚಂದ್ರ ಲೋಕಕ್ಕೆ ಹೋದರೂ ಕೇರಳದ ವ್ಯಕ್ತಿ ಅಥವಾ ಮಲಯಾಳಿಗರ ಅಂಗಡಿ ಇದ್ದೀತು ಎಂಬುದು ಜೋಕ್. ಇದಕ್ಕೆ ಅನ್ವರ್ಥರೀತಿಯಲ್ಲಿ ಅತಿ ಕಡಿಮೆ ಜನಸಂಖ್ಯೆ ಇರುವ ಸೌದಿ ಅರೇಬಿಯಾ-ಕುವೈಟ್ ಗಡಿ ಪ್ರದೇಶದಲ್ಲೂ ಇದೀಗ ಮಲಯಾಳಿಯೊಬ್ಬರ ಅಂಗಡಿ ಶುರುವಾಗಿದೆ! ಕಣ್ಣೂರಿನ ರಾಜೀವ್ ಎಂಬುವ ಈ ಮರುಭೂಮಿಯಲ್ಲಿ ಅಂಗಡಿ ಶುರುಮಾಡಿದ್ದಾರೆ. ಬಿರುಬಿಸಿಲಲ್ಲೂ ಎಸಿ ಇಲ್ಲದೆ ಕೇವಲ ಏರ್ಕೂಲರ್ ಇಟ್ಟುಕೊಂಡು ರಾಜೀವ್ ಅಂಗಡಿ-ಮನೆ ನಿರ್ವಹಿಸುತ್ತಿದ್ದಾರೆ.
ಈ ಪ್ರದೇಶದಲ್ಲಿ ಗಲ್ಫ್ ಯುದ್ಧ ಸಂದರ್ಭ ನಿರಾಶ್ರಿತರಾಗಿ ಬಂದ ಇರಾಕಿ ಕುಟುಂಬಗಳಿವೆ. ಅಂದು ಸಾವಿರಷ್ಟು ಮಂದಿ ಇಲ್ಲಿಗೆ ಬಂದಿದ್ದು, ಹಲವರಿಗೆ ಸೌದಿ ಸರ್ಕಾರ ನಾಗರಿಕತ್ವ ನೀಡಿದೆ. ಅವರು ಬೇರೆಡೆಗಳಿಗೆ ಹೋಗಿದ್ದಾರೆ. ಉಳಿದವರು ಕುರಿಗಾಹಿಗಳಾಗಿದ್ದು, ಸೂಕ್ತದಾಖಲೆ ಇಲ್ಲದ್ದರಿಂದ ಬೇರೆಡೆ ಕೆಲಸಕ್ಕೆ ಹೋಗಲಾರದೆ ಅಲ್ಲೇ ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ರಾಜೀವ್ ಅಂಗಡಿಯಿಂದ ಬಹಳಷ್ಟು ಪ್ರಯೋಜನ ಆಗಿದೆಯಂತೆ! ಇದರಿಂದ ಸ್ಫೂರ್ತಿ ಪಡೆದ ಇನ್ನೂ ಹಲವು ಮಂದಿ ಆ ಪ್ರದೇಶಕ್ಕೆ ತೆರಳಿ ತಮ್ಮ ವ್ಯಾಪಾರ ವಹಿವಾಟು ವಿಸ್ತರಿಸುವ ಸಾಧ್ಯತೆಯೂ ಇಲ್ಲದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!
Tollywood: ಈ ತಿಂಗಳಿನಲ್ಲಿ ಸಟ್ಟೇರಲಿದೆ ಜೂ.ಎನ್ ಟಿಆರ್ – ಪ್ರಶಾಂತ್ ನೀಲ್ ಸಿನಿಮಾ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ