ಪುಣ್ಯಕೋಟಿಯಲ್ಲಿದೆ ಏಡ್ಸ್‌ಗೆ ಮದ್ದು !


Team Udayavani, Jul 23, 2017, 7:00 AM IST

punya-koti.jpg

ವಾಷಿಂಗ್ಟನ್‌: ವೈದ್ಯಕೀಯ ಲೋಕದಲ್ಲಿ ಹಲವು ಉತ್ಪನ್ನಗಳಿಗೆ ಗೋಜನ್ಯ, ಪ್ರಾಣಿಜನ್ಯ ವಸ್ತುಗಳು ಬಳಕೆಯಾಗುತ್ತವೆ. ಆದರೀಗ ಮನುಷ್ಯರಿಗೆ ಮಾರಣಾಂತಿಕವಾದ, ಜಗತ್ತಿನಲ್ಲಿ ಈವರೆಗೆ ಔಷಧವೇ ಇಲ್ಲದ ಎಚ್‌ಐವಿ ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ಗೋವಿನಲ್ಲಿದೆ ಎಂಬ ವಿಚಾರ ಬಹಿರಂಗವಾಗಿದೆ. ಪರಿಣಾಮ ಮುಂದಿನ ದಿನಗಳಲ್ಲಿ ಗೋವಿನಿಂದ ತಯಾರಾದ ಲಸಿಕೆಯನ್ನು ಎಚ್‌ಐವಿ ನಿರೋಧಕವಾಗಿ ಬಳಸಲ್ಪಡುವ ಸಾಧ್ಯತೆ ಹೆಚ್ಚಾಗಿದೆ.

ಇಂಥ ವಿನೂತನ ಸಂಶೋಧನೆಯನ್ನು ಅಮೆ ರಿಕದ ಸಂಶೋಧಕರ ತಂಡ ಮಾಡಿದ್ದು, “ನೇಚರ್‌’ ಹೆಸರಿನ ನಿಯತಕಾಲಿಕೆಯಲ್ಲಿ ಸಂಶೋಧನೆಯ ವಿವರಗಳನ್ನು ನೀಡಿದೆ. ಸಂಶೋಧನೆ ಪ್ರಕಾರ, ಗೋವಿನಿಂದ ಎಚ್‌ಐವಿಗಳನ್ನು ತಡೆಯುವ ಪ್ರತಿಜೀವಿಗಳನ್ನು ಕೆಲವು ವಾರಗಳಲ್ಲಿ ತಯಾರು ಮಾಡಬಹುದು.

ಗೋವುಗಳಲ್ಲಿರುವ ಬ್ಯಾಕ್ಟೀರಿಯಾ ಪೂರಿತ ಜೀರ್ಣಾಂಗ ವ್ಯವಸ್ಥೆ ಅತ್ಯಂತ ಸಂಕೀರ್ಣ ವಾಗಿದ್ದು, ಹೊಟ್ಟೆಯಲ್ಲಿನ ಬಹು
ಹಂತದ ವ್ಯವಸ್ಥೆ, ಹುಲ್ಲುಗಳನ್ನು ಜೀರ್ಣಗೊಳಿಸಲು ಸಹಾಯ ಮಾಡುತ್ತವೆ. ಇದಕ್ಕೆ ತಕ್ಕುದಾದ ಭಾರೀ ಪ್ರಮಾಣದ ಬ್ಯಾಕ್ಟೀರಿಯಾ ವ್ಯವಸ್ಥೆ ಅವು ಗಳಲ್ಲಿದೆ. ಆದ್ದರಿಂದ ಅವುಗಳಲ್ಲಿ ಸಹಜವಾಗಿ ರೋಗನಿರೋಧಕ ಶಕ್ತಿಯೂ ಹೆಚ್ಚು. ಜತೆಗೆ ಪ್ರತಿಜೀವಿ (ಆ್ಯಂಟಿಬಾಡಿ)ಗಳು ಅತಿ ವೇಗದಲ್ಲಿ ಗೋವುಗಳಲ್ಲಿ ಉತ್ಪತ್ತಿಯಾಗುತ್ತವೆ. ಇದೇ ರೀತಿ ಮಾನವನಲ್ಲಾದರೆ ಪ್ರಾಕೃತಿಕವಾಗಿ ಎಚ್‌ಐವಿ ವಿರುದ್ಧದ ಪ್ರತಿಜೀವಿಗಳು (ಬಿಎನ್‌ಎಬಿಎಸ್‌) ಬೆಳವಣಿಗೆ ಹೊಂದುವ ಪ್ರಮಾಣ ಶೇ. 10ರಿಂದ 20ರಷ್ಟು ಮಾತ್ರವಾಗಿದೆ. ಇಷ್ಟು ಬೆಳವಣಿಗೆ ಯಾಗಲು 2 ವರ್ಷ ಬೇಕಾಗಿದ್ದು, ಅದಾಗಲೇ ಎಚ್‌ಐವಿ ವೈರಸ್‌ ರೂಪಾಂತರಗೊಂಡು ದೇಹ ವನ್ನು ಜರ್ಝರಿತಗೊಳಿಸಿರುತ್ತದೆ.

ಆದರೆ, ಸಂಶೋಧನೆ ಪ್ರಕಾರ, ಎಚ್‌ಐವಿ ವಿರುದ್ಧ ಕೆಲವೇ ವಾರಗಳಲ್ಲಿ ಗೋವುಗಳಲ್ಲಿ ಬಿಎನ್‌ಎಬಿಎಸ್‌ಗಳು ಸೃಷ್ಟಿಯಾಗಿವೆ. ನಾಲ್ಕು ಹಸುಗಳ ಮೇಲೆ ಇಂತಹ ಪ್ರಯೋಗ ಮಾಡಲಾಗಿದ್ದು, ಧನಾತ್ಮಕ ಫ‌ಲಿತಾಂಶಗಳು ಗೋಚರವಾಗಿವೆ. 

ಎಚ್‌ಐವಿ ಗೋವುಗಳ ಮೇಲೆ ಪರಿ ಣಾಮ ಬೀರುವುದಿಲ್ಲ ಮತ್ತು ಸದ್ಯದ ಪರಿಸ್ಥಿತಿಯಲ್ಲಿ ಗೋವಿನ ಪ್ರತಿಜೀವಕ ಗಳನ್ನೇ ಔಷಧವನ್ನಾಗಿ ಮಾನವನಿಗೆ ನೀಡಲು ಸಾಧ್ಯವಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಅವುಗಳನ್ನು ಪೂರಕ ವಾಗಿ ಬಳಸಿ ಮಾನವರಿಗೆ ಬೇಕಾದ ಸುಧಾರಿತ ಎಚ್‌ಐವಿ ವಿರೋಧಿ ಲಸಿಕೆ ಕಂಡುಹಿಡಿಯುವುದು ವಿಜ್ಞಾನಿಗಳ ಲೆಕ್ಕಾಚಾರವಾಗಿದೆ. ಈ ಬಗ್ಗೆ ಇನ್ನೂ ವ್ಯಾಪಕವಾದ ಸಂಶೋಧನೆಗಳು ನಡೆಯಬೇಕಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಎಚ್‌ಐವಿ ವಿರುದ್ಧ ಹೋರಾಟ ಹೇಗೆ ?
ಮಾನವನಲ್ಲಿ ಎಚ್‌ಐವಿ ಬಳಿಕ ಪ್ರತಿಜೀವಿಗಳು ಸೃಷ್ಟಿಯಾಗುತ್ತಾವಾದರೂ, ಅವುಗಳ ಉತ್ಪಾದನೆ ನಿಧಾನವಾಗಿರುತ್ತದೆ ಮತ್ತು ಪ್ರಬಲವಾಗಿರುವುದಿಲ್ಲ. ವಿರೋಧಿ ಪ್ರತಿಜೀವಿಗಳ ಬೆಳವಣಿಗೆಗೆ ಸುಮಾರು 2 ವರ್ಷ ತಗಲುತ್ತವೆ. ಆದರೆ ಮಾನವ ದೇಹ ಆಗ ಎಚ್‌ಐವಿನಿಂದಾಗಿ ತೀರಾ ಘಾಸಿಗೊಂಡಿರುತ್ತವೆ. ಆದರೆ ಗೋವು ಗಳಲ್ಲಿ 30-45 ದಿನಗಳಲ್ಲಿ ಪ್ರತಿಜೀವಿಗಳು ಉತ್ಪತ್ತಿಯಾಗಿ ಎಚ್‌ಐವಿ ನಿರೋಧಕವಾಗಿ ಕೆಲಸ ಮಾಡುವುದನ್ನು ಪತ್ತೆ ಹಚ್ಚಲಾಗಿದೆ.

ಟಾಪ್ ನ್ಯೂಸ್

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ

Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ

America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್‌ ಬೈಬಲ್‌ ಮಾರಾಟ!

America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್‌ ಬೈಬಲ್‌ ಮಾರಾಟ!

1—weqe

Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ

LGBTQ Couple anjali chakra sufi malik broke their marriage

Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್‌ ಸಲಿಂಗಿ ಜೋಡಿ ಬ್ರೇಕಪ್‌!

ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!

H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.