ಪುಣ್ಯಕೋಟಿಯಲ್ಲಿದೆ ಏಡ್ಸ್‌ಗೆ ಮದ್ದು !


Team Udayavani, Jul 23, 2017, 7:00 AM IST

punya-koti.jpg

ವಾಷಿಂಗ್ಟನ್‌: ವೈದ್ಯಕೀಯ ಲೋಕದಲ್ಲಿ ಹಲವು ಉತ್ಪನ್ನಗಳಿಗೆ ಗೋಜನ್ಯ, ಪ್ರಾಣಿಜನ್ಯ ವಸ್ತುಗಳು ಬಳಕೆಯಾಗುತ್ತವೆ. ಆದರೀಗ ಮನುಷ್ಯರಿಗೆ ಮಾರಣಾಂತಿಕವಾದ, ಜಗತ್ತಿನಲ್ಲಿ ಈವರೆಗೆ ಔಷಧವೇ ಇಲ್ಲದ ಎಚ್‌ಐವಿ ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ಗೋವಿನಲ್ಲಿದೆ ಎಂಬ ವಿಚಾರ ಬಹಿರಂಗವಾಗಿದೆ. ಪರಿಣಾಮ ಮುಂದಿನ ದಿನಗಳಲ್ಲಿ ಗೋವಿನಿಂದ ತಯಾರಾದ ಲಸಿಕೆಯನ್ನು ಎಚ್‌ಐವಿ ನಿರೋಧಕವಾಗಿ ಬಳಸಲ್ಪಡುವ ಸಾಧ್ಯತೆ ಹೆಚ್ಚಾಗಿದೆ.

ಇಂಥ ವಿನೂತನ ಸಂಶೋಧನೆಯನ್ನು ಅಮೆ ರಿಕದ ಸಂಶೋಧಕರ ತಂಡ ಮಾಡಿದ್ದು, “ನೇಚರ್‌’ ಹೆಸರಿನ ನಿಯತಕಾಲಿಕೆಯಲ್ಲಿ ಸಂಶೋಧನೆಯ ವಿವರಗಳನ್ನು ನೀಡಿದೆ. ಸಂಶೋಧನೆ ಪ್ರಕಾರ, ಗೋವಿನಿಂದ ಎಚ್‌ಐವಿಗಳನ್ನು ತಡೆಯುವ ಪ್ರತಿಜೀವಿಗಳನ್ನು ಕೆಲವು ವಾರಗಳಲ್ಲಿ ತಯಾರು ಮಾಡಬಹುದು.

ಗೋವುಗಳಲ್ಲಿರುವ ಬ್ಯಾಕ್ಟೀರಿಯಾ ಪೂರಿತ ಜೀರ್ಣಾಂಗ ವ್ಯವಸ್ಥೆ ಅತ್ಯಂತ ಸಂಕೀರ್ಣ ವಾಗಿದ್ದು, ಹೊಟ್ಟೆಯಲ್ಲಿನ ಬಹು
ಹಂತದ ವ್ಯವಸ್ಥೆ, ಹುಲ್ಲುಗಳನ್ನು ಜೀರ್ಣಗೊಳಿಸಲು ಸಹಾಯ ಮಾಡುತ್ತವೆ. ಇದಕ್ಕೆ ತಕ್ಕುದಾದ ಭಾರೀ ಪ್ರಮಾಣದ ಬ್ಯಾಕ್ಟೀರಿಯಾ ವ್ಯವಸ್ಥೆ ಅವು ಗಳಲ್ಲಿದೆ. ಆದ್ದರಿಂದ ಅವುಗಳಲ್ಲಿ ಸಹಜವಾಗಿ ರೋಗನಿರೋಧಕ ಶಕ್ತಿಯೂ ಹೆಚ್ಚು. ಜತೆಗೆ ಪ್ರತಿಜೀವಿ (ಆ್ಯಂಟಿಬಾಡಿ)ಗಳು ಅತಿ ವೇಗದಲ್ಲಿ ಗೋವುಗಳಲ್ಲಿ ಉತ್ಪತ್ತಿಯಾಗುತ್ತವೆ. ಇದೇ ರೀತಿ ಮಾನವನಲ್ಲಾದರೆ ಪ್ರಾಕೃತಿಕವಾಗಿ ಎಚ್‌ಐವಿ ವಿರುದ್ಧದ ಪ್ರತಿಜೀವಿಗಳು (ಬಿಎನ್‌ಎಬಿಎಸ್‌) ಬೆಳವಣಿಗೆ ಹೊಂದುವ ಪ್ರಮಾಣ ಶೇ. 10ರಿಂದ 20ರಷ್ಟು ಮಾತ್ರವಾಗಿದೆ. ಇಷ್ಟು ಬೆಳವಣಿಗೆ ಯಾಗಲು 2 ವರ್ಷ ಬೇಕಾಗಿದ್ದು, ಅದಾಗಲೇ ಎಚ್‌ಐವಿ ವೈರಸ್‌ ರೂಪಾಂತರಗೊಂಡು ದೇಹ ವನ್ನು ಜರ್ಝರಿತಗೊಳಿಸಿರುತ್ತದೆ.

ಆದರೆ, ಸಂಶೋಧನೆ ಪ್ರಕಾರ, ಎಚ್‌ಐವಿ ವಿರುದ್ಧ ಕೆಲವೇ ವಾರಗಳಲ್ಲಿ ಗೋವುಗಳಲ್ಲಿ ಬಿಎನ್‌ಎಬಿಎಸ್‌ಗಳು ಸೃಷ್ಟಿಯಾಗಿವೆ. ನಾಲ್ಕು ಹಸುಗಳ ಮೇಲೆ ಇಂತಹ ಪ್ರಯೋಗ ಮಾಡಲಾಗಿದ್ದು, ಧನಾತ್ಮಕ ಫ‌ಲಿತಾಂಶಗಳು ಗೋಚರವಾಗಿವೆ. 

ಎಚ್‌ಐವಿ ಗೋವುಗಳ ಮೇಲೆ ಪರಿ ಣಾಮ ಬೀರುವುದಿಲ್ಲ ಮತ್ತು ಸದ್ಯದ ಪರಿಸ್ಥಿತಿಯಲ್ಲಿ ಗೋವಿನ ಪ್ರತಿಜೀವಕ ಗಳನ್ನೇ ಔಷಧವನ್ನಾಗಿ ಮಾನವನಿಗೆ ನೀಡಲು ಸಾಧ್ಯವಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಅವುಗಳನ್ನು ಪೂರಕ ವಾಗಿ ಬಳಸಿ ಮಾನವರಿಗೆ ಬೇಕಾದ ಸುಧಾರಿತ ಎಚ್‌ಐವಿ ವಿರೋಧಿ ಲಸಿಕೆ ಕಂಡುಹಿಡಿಯುವುದು ವಿಜ್ಞಾನಿಗಳ ಲೆಕ್ಕಾಚಾರವಾಗಿದೆ. ಈ ಬಗ್ಗೆ ಇನ್ನೂ ವ್ಯಾಪಕವಾದ ಸಂಶೋಧನೆಗಳು ನಡೆಯಬೇಕಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಎಚ್‌ಐವಿ ವಿರುದ್ಧ ಹೋರಾಟ ಹೇಗೆ ?
ಮಾನವನಲ್ಲಿ ಎಚ್‌ಐವಿ ಬಳಿಕ ಪ್ರತಿಜೀವಿಗಳು ಸೃಷ್ಟಿಯಾಗುತ್ತಾವಾದರೂ, ಅವುಗಳ ಉತ್ಪಾದನೆ ನಿಧಾನವಾಗಿರುತ್ತದೆ ಮತ್ತು ಪ್ರಬಲವಾಗಿರುವುದಿಲ್ಲ. ವಿರೋಧಿ ಪ್ರತಿಜೀವಿಗಳ ಬೆಳವಣಿಗೆಗೆ ಸುಮಾರು 2 ವರ್ಷ ತಗಲುತ್ತವೆ. ಆದರೆ ಮಾನವ ದೇಹ ಆಗ ಎಚ್‌ಐವಿನಿಂದಾಗಿ ತೀರಾ ಘಾಸಿಗೊಂಡಿರುತ್ತವೆ. ಆದರೆ ಗೋವು ಗಳಲ್ಲಿ 30-45 ದಿನಗಳಲ್ಲಿ ಪ್ರತಿಜೀವಿಗಳು ಉತ್ಪತ್ತಿಯಾಗಿ ಎಚ್‌ಐವಿ ನಿರೋಧಕವಾಗಿ ಕೆಲಸ ಮಾಡುವುದನ್ನು ಪತ್ತೆ ಹಚ್ಚಲಾಗಿದೆ.

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.