ಸೆರೆಯಾಯ್ತು ತಾಪಮಾನ ವೈಪರೀತ್ಯದ ಬೀಭತ್ಸ ದೃಶ್ಯ!
Team Udayavani, Dec 11, 2017, 7:15 AM IST
ವಾಷಿಂಗ್ಟನ್: ಸನ್ನಿವೇಶದ ಭೀಕರತೆಯನ್ನು ಹೇಳಲು ಒಂದು ಚಿತ್ರ ಸಾಕು. ಸೊಮಾಲಿಯಾದಲ್ಲಿನ ಬರ ಪರಿಸ್ಥಿತಿಯನ್ನು ಹಿಡಿದಿಟ್ಟಿದ್ದು, ನಿಶ್ಯಕ್ತ ದೇಹದ ಒಂದು ಚಿತ್ರ. ಕೆಲವು ವರ್ಷಗಳ ಹಿಂದೆ ಸಿರಿಯಾದಲ್ಲಿ ಯುದ್ಧ ಸನ್ನಿವೇಶದಲ್ಲಿ ಸಮುದ್ರದ ದಂಡೆಗೆ ತೇಲಿ ಬಂದ ಮಗುವೊಂದು ಯುದ್ಧದ ಬೀಭತ್ಸ ದೃಶ್ಯವನ್ನು ಸೆರೆಹಿಡಿದಿತ್ತು. ಇದೇ ರೀತಿಯ ಸನ್ನಿವೇಶ ಕೆನಡಿಯನ್ ಬಫಿನ್ ಐಲ್ಯಾಂಡ್ನಲ್ಲಿ ಸೆರೆಯಾಗಿದೆ. ಅತ್ಯಂತ ಕೃಶವಾಗಿ, ಆಹಾರವೂ ಸಿಗದ ಸ್ಥಿತಿಯಲ್ಲಿರುವ ಹಿಮಕರಡಿ ಜಾಗತಿಕ ತಾಪಮಾನ ಏರಿಕೆಯ ಕ್ರೌರ್ಯಕ್ಕೆ ಸಾಕ್ಷಿಯಾಗಿದೆ.
ಫೋಟೋಗ್ರಾಫರ್ ಪಾಲ್ ನಿಕೆಲನ್ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಪಾಲ್ ಹಾಗೂ ಸೀ ಲೆಗಸಿ ಸಂಸ್ಥೆಯ ಇತರರು ಕೆನಡಿಯನ್ ದ್ವೀಪಕ್ಕೆ ತೆರಳಿದ್ದಾಗ ಈ ದೃಶ್ಯ ಕಂಡುಬಂದಿದೆ. ಬಿಳಿ ಕೂದಲನ್ನು ಇಳಿಬಿಟ್ಟುಕೊಂಡು, ಅತ್ಯಂತ ಕೃಶವಾದ ಮತ್ತು ಕಣ್ಣಿಂದ ನೀರು ಸುರಿಸುತ್ತಿರುವ ಹಿಮಕರಡಿಗಳು ಪಾಲ್ ಮತ್ತು ತಂಡದವರನ್ನು ನಿಬ್ಬೆರಗಾಗಿಸಿದೆ. ಸಾಮಾನ್ಯವಾಗಿ ಕೆನಡಾದಲ್ಲಿ ಬೆಳೆದ ನಾನು ದಷ್ಟಪುಷ್ಟವಾದ ಹಿಮಕರಡಿಗಳನ್ನು ನೋಡಿದ್ದೇನೆ. ಆದರೆ ಈ ದೃಶ್ಯ ನನ್ನ ಮನಸು ಕಲಕಿತು ಎಂದು ಪಾಲ್ ಹೇಳಿದ್ದಾರೆ.
ಹೆಚ್ಚುತ್ತಿರುವ ತಾಪಮಾನದಿಂದಾಗಿ ಹಿಮಕರಡಿಗಳು ಅವನತಿಯ ಅಂಚಿಗೆ ಸಾಗಲಿವೆ ಎಂದು ವಿಜ್ಞಾನಿಗಳು ಹಿಂದಿನಿಂದಲೂ ಹೇಳುತ್ತಿದ್ದಾರೆ. ಆದರೆ ಇದನ್ನು ಸಾಕ್ಷೀಕರಿಸುವಂತಹ ದೃಶ್ಯ ಇದಾಗಿದೆ. ಸಾಮಾನ್ಯವಾಗಿ ಹಿಮಕರಡಿಗಳಿಗೆ ಹಿಮದ ಗಡ್ಡೆಗಳ ಅಡಿಯಲ್ಲಿರುವ ಸೀಲ್ಗಳೇ ಆಹಾರ. ಆದರೆ ತಾಪಮಾನ ಹೆಚ್ಚುತ್ತಿರುವುದರಿಂದ ಹಿಮಗಡ್ಡೆಗಳು ಕರಗಿದ್ದು, ಸೀಲ್ಗಳು ಸಮುದ್ರದ ಮಧ್ಯಭಾಗಕ್ಕೆ ತೆರಳಿವೆ. ಹೀಗಾಗಿ ಹಿಮಕರಡಿಗಳಿಗೆ ಸೀಲ್ಗಳು ಸಿಗುತ್ತಿಲ್ಲ. ಇನ್ನೊಂದೆಡೆ ಹಿಮಕರಡಿಗಳು ಸೀಲ್ಗಳನ್ನು ಗುರುತಿಸಲು ಗಾಳಿಯನ್ನೇ ಬಳಸು ತ್ತವೆ. ಗಾಳಿಯಲ್ಲಿ ಬರುವ ಸೀಲ್ಗಳ ವಾಸನೆಯನ್ನು ಹಿಡಿದು ಅವುಗಳಿದ್ದಲ್ಲಿಗೆ ಹಿಮಕರಡಿಗಳು ದಾಳಿಯಿಡುತ್ತವೆ. ಆದರೆ ಈಗ ತಾಪಮಾನ ವೈಪರೀತ್ಯದಿಂದಾಗಿ ಗಾಳಿಯ ವೇಗ ಹೆಚ್ಚಿದ್ದು, ಸೀಲ್ಗಳ ಸುಳಿವೂ ಅವುಗಳಿಗೆ ಸಿಗುವುದಿಲ್ಲ ಎಂದು ಅಧ್ಯಯನವೊಂದರಲ್ಲಿ ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
MUST WATCH
ಹೊಸ ಸೇರ್ಪಡೆ
Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್ ಕಾನ್ಸ್ಟೆಬಲ್ ಗೆ ಗಾಯ
Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ
Brahmavara: ವಿದ್ಯುತ್ ಕಂಬ ಮುರಿದು ಬಿದ್ದು ಯುವಕ ಮೃತ್ಯು
Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ
Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್