ಚೀನಾ ಉದ್ಧಟತನ; ಭಾರತದ್ದೇ ತಪ್ಪಂತೆ
Team Udayavani, Jan 20, 2018, 12:02 PM IST
ಬೀಜಿಂಗ್/ನವದೆಹಲಿ: ಡೋಕ್ಲಾಂ ನಮಗೆ ಸೇರಿದ್ದು. ಹೀಗಾಗಿ ಅಲ್ಲಿ ನಾವು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿಯೇ ತೀರುತ್ತೇವೆ. ಈ ಬಗ್ಗೆ ಯಾರೂ ಮಾತನಾಡುವುದೇ ಬೇಡ’. ಈ ರೀತಿ ಹೇಳುವ ಮೂಲಕ ಚೀನಾವು ಭಾರತದ ಮುಂದೆ ಮತ್ತೆ ಉದ್ಧಟತನ ತೋರಿಸಿದೆ. ವಿವಾದಿತ ಡೋಕ್ಲಾಂ ಪ್ರದೇಶದಲ್ಲಿ ನೆರೆಯ ರಾಷ್ಟ್ರ ವ್ಯವಸ್ಥಿತ ರೀತಿಯಲ್ಲಿ ಸೇನೆಯ ಮೂಲ ಸೌಕರ್ಯ ಅಭಿವೃದ್ಧಿಪಡಿಸುವ ಬಗ್ಗೆ ಮಾಧ್ಯಮಗಳು ವರದಿ ಮಾಡಿದ ಬೆನ್ನಲ್ಲೇ ಚೀನಾ ಎಚ್ಚರಿಕೆ ನೀಡುವ ಧ್ವನಿಯಲ್ಲಿ ಮಾತನಾಡಿದೆ.
ಕಳೆದ ವರ್ಷ 73 ದಿನಗಳ ಕಾಲ ಎರಡು ರಾಷ್ಟ್ರಗಳ ನಡುವೆ ಇದೇ ವಿವಾದಕ್ಕೆ ಸಂಬಂಧಿಸಿ ಭಾರೀ ವಿವಾದ ಸೃಷ್ಟಿಯಾಗಿತ್ತು. ಈ ಘಟನೆ ನಡೆದು ಐದು ತಿಂಗಳ ಬಳಿಕ ಮತ್ತೆ ಅದೇ ಪ್ರದೇಶದಲ್ಲಿ ಬಿಕ್ಕಟ್ಟು ಉಂಟಾಗಿದೆ.
ಬೆಳವಣಿಗೆಗಳ ಬಗ್ಗೆ ಬೀಜಿಂಗ್ನಲ್ಲಿ ಶುಕ್ರವಾರ ಪ್ರತಿಕ್ರಿಯೆ ನೀಡಿದ ಚೀನಾ ವಿದೇಶಾಂಗ ಇಲಾಖೆ ವಕ್ತಾರ, “ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳನ್ನು ನೋಡಿದೆ. ಆದರೆ, ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ಯಾರು ನೀಡಿದರು ಎಂದು ಗೊತ್ತಿಲ್ಲ’ ಎಂದು ಹೇಳಿದ್ದಾರೆ. ಡೋಕ್ಲಾಂ ವಿಚಾರದಲ್ಲಿ ತಮ್ಮ ದೇಶದ ಅಭಿಪ್ರಾಯ ಸ್ಪಷ್ಟವಾಗಿದೆ. ಅದು ಯಾವತ್ತೂ ಚೀನಾಕ್ಕೇ ಸೇರಿದ್ದು. ಅದಕ್ಕೆ ಸಂಬಂಧಿಸಿದಂತೆ ಯಾವುದೇ ವಿವಾದ ಇಲ್ಲ. ನಮ್ಮ ಭೂಪ್ರದೇಶದಲ್ಲಿನ ಜನರ ಹಾಗೂ ಸೇನೆಗಳ ಸಂಚಾರಕ್ಕೆ ಅನುಕೂಲವಾಗುವಂತೆ ಆ ಪ್ರದೇಶದಲ್ಲಿ ರಸ್ತೆ
ಸೇರಿದಂತೆ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಡೋಕ್ಲಾಂ ನಮ್ಮದೇ ಆಗಿರುವಾಗ ಕಾಮಗಾರಿ ನಡೆಸುವ ಎಲ್ಲ ಹಕ್ಕು ಇದೆ. ಇದನ್ನು, ಭಾರತವಾಗಲೀ, ಬೇರೆ ದೇಶವಾಗಲೀ ಪ್ರಶ್ನಿಸಬಾರದು ಎಂದೂ ವಕ್ತಾರರು ಹೇಳಿದ್ದಾರೆ.
ಪರಿಹಾರಕ್ಕೆ ಮಾರ್ಗಗಳಿವೆ: ಚೀನಾ ಸೇನೆ ಮತ್ತೆ ತಳವೂರಿರುವ ಬಗ್ಗೆ ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್, ಬಿಕ್ಕಟ್ಟು ಸರಿಪಡಿಸಲು ಎರಡೂ ದೇಶಗಳು ಮಾರ್ಗೋಪಾಯಗಳನ್ನು ರೂಪಿಸಿವೆ ಎಂದು ಹೇಳಿದ್ದಾರೆ. ಆ ಪ್ರದೇಶದಲ್ಲಿ ಉಂಟಾಗುತ್ತಿರುವ ಬೆಳವಣಿಗೆಗಳ ಬಗ್ಗೆ ನಿಗಾ ಇರಿಸಿದ್ದೇವೆ. ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ಉಂಟಾಗುವುದಿದ್ದರೆ, ಅದನ್ನು ತಡೆಯಲು ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಭಾರತದ್ದೇ ತಪ್ಪಂತೆ:
ಎರಡನೇ ಬಾರಿಗೆ ಕಳೆದ ಆಗಸ್ಟ್ನಲ್ಲಿ ಉಂಟಾಗಿದ್ದಂತೆಯೇ ವಿವಾದ ನಡೆಸಲು ಚೀನಾ ಸಿದ್ಧವಾಗಿದೆಯೇ ಎಂದು ಪ್ರಶ್ನಿಸಿ
ದಾಗ, “ಚಿಕನ್ ನೆಕ್ (ಪಶ್ಚಿಮ ಬಂಗಾಳದ ಸಿಲಿಗುರಿ ಮತ್ತು ಸಿಕ್ಕಿಂ ನಡುವಿನ ಸಣ್ಣ ಸ್ಥಳ) ಪ್ರದೇಶದ ಹೊರ ಭಾಗದಲ್ಲಿ ನಾವು ನಡೆಸು ತ್ತಿರುವ ಕಾಮಗಾರಿಗೆ ಭಾರತವೇ ಅಡ್ಡಿಪಡಿಸುತ್ತಿದೆ. ಇದರಿಂದಾಗಿ ಎರಡೂ ರಾಷ್ಟ್ರಗಳ ನಡುವಿನ ಸಂಬಂಧಕ್ಕೆ ಧಕ್ಕೆ ಬರಬಹುದು’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು