ಆಸ್ಪತ್ರೆಯೊಳಗೆ ಗುಂಡಿನ ದಾಳಿ; ಪಾಕ್ ಟೆರರಿಸ್ಟ್ ಅಬು ಎಸ್ಕೇಪ್
Team Udayavani, Feb 6, 2018, 1:21 PM IST
ಜಮ್ಮು-ಕಾಶ್ಮೀರ:ಪೊಲೀಸರ ವಶದಲ್ಲಿದ್ದ ಉಗ್ರ ಪರಾರಿಯಾಗಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಮಂಗಳವಾರ ಬೆಳಗ್ಗೆ ಕೆಲವು ಉಗ್ರರು ಜಮ್ಮು ಕಾಶ್ಮೀರದ ಆಸ್ಪತ್ರೆಯ ಮೇಲೆ ದಾಳಿ ನಡೆಸಿದ ಘಟನೆ ನಡೆದಿದ್ದು, ಗುಂಡಿನ ಚಕಮಕಿಯಲ್ಲಿ ಓರ್ವ ಪೊಲೀಸ್ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ಪಾಕಿಸ್ತಾನ್ ಮೂಲದ ಲಷ್ಕರ್ ಎ ತೊಯ್ಬಾದ ಉಗ್ರ ಅಬು ಹನ್ ಝುಲ್ಲಾ ಹಾಗೂ ಇತರ ಐದು ಮಂದಿ ಬಂಧಿತರನ್ನು ಇಂದು ಬೆಳಗ್ಗೆ ಶ್ರೀನಗರದಲ್ಲಿರುವ ಶ್ರೀ ಮಹಾರಾಜ್ ಹರಿ ಸಿಂಗ್ ಸರಕಾರಿ ಆಸ್ಪತ್ರೆಗೆ ಕರೆತಂದ ಸಂದರ್ಭದಲ್ಲಿ, ಒಬ್ಬ ಕೈದಿ ಪೊಲೀಸ್ ಕೈಯಲ್ಲಿದ್ದ ರೈಫಲ್ ಅನ್ನು ಕಸಿದುಕೊಂಡು ಗುಂಡಿನ ದಾಳಿ ನಡೆಸಿದ್ದ ಎಂದು ಶ್ರೀನಗರ್ ಎಸ್ ಎಸ್ ಪಿ ಇಮ್ತಿಯಾಜ್ ಇಸ್ಮಾಯಿಲ್ ಪಾರೈ ತಿಳಿಸಿದ್ದಾರೆ.
ಅಬು ಅಲಿಯಾಸ್ ನಾವೀದ್ ನನ್ನು ಉದಾಂಪುರ್ ಸಮೀಪ ಬಿಎಸ್ ಎಫ್ ಪಡೆ 2015ರಲ್ಲಿ ಬಂಧಿಸಿತ್ತು. ಈತನನ್ನು ಶ್ರೀನಗರ್ ಸೆಂಟ್ರಲ್ ಜೈಲ್ ನಲ್ಲಿ ಇರಿಸಲಾಗಿತ್ತು. ಪರಾರಿಯಾದ ಉಗ್ರರರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು