ದಿಲ್ಲಿಯಲ್ಲಿ ಕಿರುಕುಳ? ತನ್ನ ರಾಯಬಾರಿಯನ್ನು ಕರೆಸಿಕೊಂಡ ಪಾಕ್
Team Udayavani, Mar 15, 2018, 3:43 PM IST
ಇಸ್ಲಾಮಾಬಾದ್ : ಭಾರತದ ರಾಜಧಾನಿ ದಿಲ್ಲಿಯಲ್ಲಿನ ಪಾಕ್ ದೂತಾವಾಸದ ಸಿಬಂದಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪದ ಬಗ್ಗೆ ಸಮಾಲೋಚನೆ ನಡೆಸಲು ಇಸ್ಲಾಮಾಬಾದ್ ದಿಲ್ಲಿಯಲ್ಲಿನ ತನ್ನ ರಾಯಭಾರಿಯನ್ನು ಕರೆಸಿಕೊಂಡಿದೆ ಎಂದು ಪಾಕ್ ವಿದೇಶ ಕಾರ್ಯಾಲಯವನ್ನು ಉಲ್ಲೇಖೀಸಿ ವರದಿಗಳು ತಿಳಿಸಿವೆ.
ಪಾಕ್ ವಿದೇಶ ಕಾರ್ಯಾಲಯದ ಮೂಲಗಳಿಂದು ತಿಳಿದು ಬಂದಿರುವಂತೆ ದಿಲ್ಲಿಯಲ್ಲಿನ ಪಾಕ್ ಹೈಕಮಿಶನರ್ ಸೊಹೇಲ್ ಮಹಮೂದ್ ಅವರನ್ನು ಇಸ್ಲಾಮಾಬಾದ್ಗೆ ಕರೆಸಿಕೊಳ್ಳಲಾಗಿದೆ.
ಪಾಕ್ ವಿದೇಶ ಕಾರ್ಯಾಲಯದ ವಕ್ತಾರ ಮೊಹಮ್ಮದ್ ಫೈಸಲ್ ಅವರು ಇಸ್ಲಾಮಾಬಾದಿನಲ್ಲಿ ನಡೆಸಿದ ಸಾಪ್ತಾಹಿಕ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಹೊಸದಿಲ್ಲಿಯಲ್ಲಿನ ಪಾಕ್ ರಾಜತಂತ್ರಜ್ಞರಿಗೆ ಈಚೆಗೆ ಕಿರುಕುಳ ನೀಡಲಾದ ಘಟನೆಗಳ ಬಗ್ಗೆ ಸಮಾಲೋಚನೆ ನಡೆಸಲು ಪಾಕ್ ಸರಕಾರ ತನ್ನ ಹೈಕಮಿಶನರ್ ಅವರನ್ನು ಇಸ್ಲಾಮಾಬಾದ್ಗೆ ಕರೆಸಿಕೊಂಡಿದೆ ಎಂದು ವಕ್ತಾರ ಫೈಸಲ್ ತಿಳಿಸಿದರು.
ಭಾರತದಲ್ಲಿರುವ ಪಾಕ್ ರಾಜತಂತ್ರಜ್ಞರು ಮತ್ತು ಅವರ ಕುಟುಂಬದವರಿಗೆ ಭಾರತೀಯ ಸರಕಾರ ಸೂಕ್ತ ರಕ್ಷಣಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು. ಪಾಕ್ ಸರಕಾರ ಈ ಬಗ್ಗೆ ಭಾರತೀಯ ಉಪ ಹೈಕಮಿಶನರ್ಗೆ ಮತ್ತು ವಿದೇಶ ಸಚಿವಾಲಯಕ್ಕೆ ಹಲವು ಬಾರಿ ಪ್ರತಿಭಟನೆ ಸಲ್ಲಿಸಿದ ಹೊರತಾಗಿಯೂ ಅದು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಫೈಸಲ್ ಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ