ಮತ್ತೆ ನಾಲ್ವರು ಬಾಲಕರ ರಕ್ಷಣೆ
Team Udayavani, Jul 10, 2018, 6:00 AM IST
ಬ್ಯಾಂಕಾಕ್: ಕಳೆದ ಹದಿನೈದು ದಿನಗಳಿಂದ ಥಾಯ್ಲೆಂಡ್ನ ಗುಹೆಯಲ್ಲಿ ಸಿಲುಕಿಕೊಂಡಿದ್ದ ಬಾಲಕರ ಫುಟ್ಬಾಲ್ ತಂಡದ 12 ಸದಸ್ಯರು ಹಾಗೂ ಕೋಚ್ ಪೈಕಿ ಸೋಮವಾರ ನಾಲ್ವರನ್ನು ರಕ್ಷಿಸಲಾಗಿದೆ. ಇದರಿಂದಾಗಿ ಒಟ್ಟು ಎಂಟು ಬಾಲಕರನ್ನು ಗುಹೆಯಿಂದ ಹೊರಕರೆತಂದಂತಾಗಿದೆ. ಇನ್ನೂ ನಾಲ್ಕು ಬಾಲಕರು ಹಾಗೂ ಕೋಚ್ ಗುಹೆಯಲ್ಲೇ ಇದ್ದಾರೆ. ಬಾಲಕರ ಆರೋಗ್ಯ ಸ್ಥಿತಿ ಉತ್ತಮವಾಗಿದ್ದು, ಸೋಮವಾರ ಹೊರಕರೆತಂದ ನಾಲ್ವರು ಬಾಲಕರನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ. 90ಕ್ಕೂ ಹೆಚ್ಚು ಮುಳುಗುತಜ್ಞರು ಇದ್ದರು.
ವಿನಾಯಿತಿ: ಮುಂದಿನ ವಾರ ಶಾಲೆಗಳಲ್ಲಿ ಪರೀಕ್ಷೆ ನಡೆಯಲಿದ್ದು, ಇದರಿಂದ ಮಕ್ಕಳಿಗೆ ವಿನಾಯಿತಿ ನೀಡಲಾಗಿದೆ. 15 ದಿನಗಳವರೆಗೆ ಶಾಲೆಯ ಪಾಠ ತಪ್ಪಿದ್ದಕ್ಕಾಗಿ ವಿಶೇಷ ಟ್ಯೂಷನ್ ನೀಡಲು ಶಾಲೆಗಳು ನಿರ್ಧರಿಸಿವೆ.
ಬಾಲಕಿ ಶೋಧಕ್ಕೆ 700 ಮಂದಿ
ಹಿಮಾಚಲ ಪ್ರದೇಶದ ಸಿಮೌìರ್ ಜಿಲ್ಲೆ ಯಲ್ಲಿ ಒಂದು ವಾರದಿಂದ ಕಳೆದು ಹೋಗಿ ರುವ ಆರು ವರ್ಷದ ಬಾಲಕಿಗಾಗಿ ಭಾರಿ ಶೋಧ ಕಾರ್ಯ ನಡೆದಿದೆ. ಭಾನುವಾರದಿಂದ 15 ಗ್ರಾಮಗಳ ಸುಮಾರು 700ಕ್ಕೂ ಹೆಚ್ಚು ಜನರು ಚುರ್ಧರ್ ಪರ್ವತದಲ್ಲಿ ಹುಡುಕಾಟ ನಡೆಸಿದ್ದಾರೆ. ಸುಮಾರು 12 ಕಿ.ಮೀ ವ್ಯಾಪ್ತಿಯಲ್ಲಿ ಹುಡುಕಾಟ ನಡೆದಿದೆ. ಜನರು ಈ ಹುಡಕಾಟಕ್ಕೆ ಯಾವ ಪರಿ ಪ್ರತಿಸ್ಪಂದಿಸಿದ್ದಾರೆಂದರೆ ಜನರೆಲ್ಲರೂ ತಮ್ಮ ಬೇರೆಲ್ಲ ಕೆಲಸವನ್ನು ಬಿಟ್ಟು ಬೆಟ್ಟವೇರಿದ್ದಾರೆ. ರವಿವಾರದಿಂದ ಇಲ್ಲಿನ ಮಾರುಕಟ್ಟೆಯಲ್ಲೂ ಜನಸಂಚಾರವಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್