ನೀರು ಕುಡಿದೇ ಬದುಕಿದ್ದ ಬಾಲಕರು
Team Udayavani, Jul 19, 2018, 6:00 AM IST
ಚಿಯಾಂಗ್ ರಾಯ್(ಥಾಯ್ಲೆಂಡ್): ” ಗುಹೆಯೊಳಗೆ ಜಿನುಗುತ್ತಿದ್ದ ನೀರನ್ನೇ ಕುಡಿದು ಬದುಕಿದೆವು’ ಹೀಗೆಂದು ಹೇಳಿದ್ದು ಪ್ರವಾಹದ ನೀರಿನಿಂದ ಗುಹೆಯಲ್ಲಿ ಸಿಲುಕಿದ್ದ ಥಾಯ್ಲೆಂಡ್ನ 18 ಮಂದಿ ಮಕ್ಕಳು. ಬುಧವಾರ ಅವರು ಆಸ್ಪತ್ರೆಯಿಂದ ಡಿಸಾcರ್ಜ್ ಆದ ಬಳಿಕ ಸುದ್ದಿಗೋಷ್ಠಿ ನಡೆಸಿದರು. ಬದುಕಿ ಬಂದಿದ್ದು ಪವಾಡ ಸದೃಶ ಎಂದು ಬಾಲಕ ಹೇಳಿದ್ದಾನೆ. ರಕ್ಷಣಾ ಕಾರ್ಯಕರ್ತರು ನಮ್ಮನ್ನು ಪತ್ತೆ ಮಾಡುವವರೆಗೆ ಏನನ್ನೂ ತಿಂದಿರಲಿಲ್ಲ. ಗುಹೆಯಲ್ಲಿ ಜಿನುಗುತ್ತಿದ್ದ ನೀರನ್ನು ಕುಡಿದು ಪ್ರಾಣ ಉಳಿಸಿಕೊಂಡಿದ್ದೆವು ಎಂದು ಕೋಚ್ ಎಕ್ಕಾಪೋಲ್ ಚಾಂಟ್ವಾಂಗ್ ತಿಳಿಸಿದರು. ಒಳಗೆ ಸಿಲುಕಿದಾಗಿನಿಂದ ನಾವು ಹೊರ ಬರಲು ಮಾರ್ಗಕ್ಕಾಗಿ ಗುಹೆ ಕೊರೆಯುವ ಪ್ರಯತ್ನ ಮಾಡುತ್ತಿದ್ದೆವು ಎಂದು ಕೂಡ ಹೇಳಿದರು. ವೈದ್ಯರ ಮತ್ತು ಥಾಯ್ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಈ ಸುದ್ದಿಗೋಷ್ಠಿ ನಡೆಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ