ಗೂಗಲ್ನಲ್ಲಿ ಪ್ರಳಯ ಭವಿಷ್ಯ?
Team Udayavani, Jul 22, 2018, 6:00 AM IST
ವಾಷಿಂಗ್ಟನ್: ಜಗತ್ ಪ್ರಳಯದ ಸಂದೇಶವೊಂದು ಗೂಗಲ್ ಟ್ರಾನ್ಸ್ಲೇಷನ್ ಟೂಲ್ನಲ್ಲಿ ಅಚಾನಕ್ ಆಗಿ ಕಂಡುಬಂದಿದ್ದು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಆಸ್ತಿಕರ ಹಾಗೂ ನಾಸ್ತಿಕರ ನಡುವಿನ ವೈಚಾರಿಕ ಸಮರಕ್ಕೆ ನಾಂದಿ ಹಾಡಿದೆ. ಮನುಷ್ಯನು ಇಂದು ತಂತ್ರಜ್ಞಾನದ ಮೇಲೆಯೇ ಅವಲಂಬಿತವಾಗಿರುವುದರಿಂದ ಭಗವಂತ ತಂತ್ರಜ್ಞಾನದ ಮೂಲಕವೇ ಎಚ್ಚರಿಕೆಯ ಸಂದೇಶವೊಂದು ರವಾನಿಸಿದ್ದಾನೆ. ಈಗಲಾದರೂ ಅರ್ಥ ಮಾಡಿಕೊಳ್ಳಿರೆಂದು ಆಸ್ತಿಕರು ಪ್ರಲಾಪಿಸುತ್ತಿದ್ದರೆ, ನಾಸ್ತಿಕರು ಈ ವಾದವನ್ನು ತಳ್ಳಿಹಾಕಿದ್ದಾರೆ.
ಏನಿದು ಗೊಂದಲ?: ಸಾಮಾನ್ಯವಾಗಿ ಗೂಗಲ್ ಟ್ರಾನ್ಸ್ಲೇಷನ್ನ ವೆಬ್ಪುಟದಲ್ಲಿ ಎರಡು ಅಂಕಣಗಳಿರುತ್ತವೆ. ಮೊದಲನೆ ಯದರಲ್ಲಿ ನಮಗೆ ಅರ್ಥವಾಗದ ಭಾಷೆಯ ಶಬ್ದ ಅಥವಾ ವಾಕ್ಯ ಟೈಪಿಸಿದರೆ, ಎರಡನೆಯದರಲ್ಲಿ ನಮ್ಮ ಆಯ್ಕೆಯ ಭಾಷೆಯಲ್ಲಿ ಅದರ ಅರ್ಥ ಮೂಡುತ್ತದೆ. ಮೊದಲನೆಯ ಅಂಕಣದಲ್ಲಿ ಪಶ್ಚಿಮ ಆಫ್ರಿಕಾದ ಯೊರುಬಾ ಭಾಷೆ ಆಯ್ಕೆ ಮಾಡಿಕೊಂಡು ಅಲ್ಲಿ, ಛಟಜ ಎಂದು 18 ಬಾರಿ ಟೈಪಿಸಿದರೆ, ಬಲಭಾಗದ ಭಾಷಾಂತರ ರೂಪವಾಗಿ, “”ಜಗತ್ ಪ್ರಳಯಕ್ಕೆ ಕ್ಷಣಗಣನೆ ಶುರುವಾಗಿದೆ. ಜಗತ್ತು ಅಂತ್ಯವಾಗುವ ಮೂಲಕ ಯೇಸುಕ್ರಿಸ್ತನು ಮತ್ತೆ ಹುಟ್ಟಿ ಬರಲಿದ್ದಾನೆ” ಎಂದು ಮೂಡಿ ಬರುತ್ತದೆ. ಇದೇ ಈಗ ಆಸ್ತಿಕರ ನಿದ್ದೆಗೆಡಿಸಿರುವ ವಿಚಾರ.
ಗೂಗಲ್ ಹೇಳ್ಳೋದೇನು?: ಈ ಬಗ್ಗೆ ಸ್ಪಷ್ಟನೆ ನೀಡಿರುವ ಗೂಗಲ್, ಟ್ರಾನ್ಸ್ಲೇಷನ್ ಟೂಲ್, ಕೃತಕ ಬುದ್ಧಿಮತ್ತೆ (ಎ.ಐ) ಆಧಾರ ದಲ್ಲಿ ಕೆಲಸ ಮಾಡುತ್ತಿದೆ. ಇದಕ್ಕೆ ಅಸಂಬದ್ಧ ಇನ್ಪುಟ್ ನೀಡಿದರೆ ಔಟ್ಪುಟ್ ಕೂಡ ಅಸಂಬದ್ಧವಾಗಿ ಇರುತ್ತದೆ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
MUST WATCH
ಹೊಸ ಸೇರ್ಪಡೆ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?