ಹಿಂದೂ ಪದವನ್ನೇ ಅಸ್ಪೃಶ್ಯ ಎಂಬಂತೆ ಬಿಂಬಿಸಲಾಗುತ್ತಿದೆ
Team Udayavani, Sep 11, 2018, 10:09 AM IST
ಶಿಕಾಗೋ: “”ಕೆಲವರು ಹಿಂದೂ ಪದವನ್ನೇ “ಅಸ್ಪೃಶ್ಯ’ ಮತ್ತು “ಅಸಹನೀಯ’ ಎಂಬಂತೆ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಶಿಕಾಗೋದಲ್ಲಿ ನಡೆದ ವಿಶ್ವ ಹಿಂದೂ ಸಮ್ಮೇಳನದಲ್ಲಿ ಮಾತನಾಡಿರುವ ಅವರು, “”ಸ್ವಾಮಿ ವಿವೇಕಾನಂದರಂಥ ಸಂತರು ಕಲಿಸಿದ ಹಿಂದುತ್ವದ ನೈಜ ಮೌಲ್ಯಗಳನ್ನು ಸಂರಕ್ಷಿಸುವ ಅಗತ್ಯತೆ ತುಂಬಾ ಇದೆ. ವಿವೇಕಾನಂದರದ್ದು ನಿಜವಾದ ಹಿಂದೂ ಪ್ರೇಮ. ಹಿಂದೂ ಧರ್ಮ ಸಂರಕ್ಷಣೆಯಲ್ಲಿ ಅವರದ್ದು ಮೇರು ಕೊಡುಗೆ” ಎಂದು ಗುಣಗಾನ ಮಾಡಿದರು.
1983ರಂದು ಸ್ವಾಮಿ ವಿವೇಕಾನಂದರು ಮಾಡಿದ ಭಾಷಣದ ಬಗ್ಗೆಯೂ ಪ್ರಸ್ತಾವಿಸಿದರು.
ಇದೇ ವೇಳೆ, ಇಲಿನಾಯ್ಸ ಗವರ್ನರ್ ಸೆ.11, 2018 ಅನ್ನು “ಸ್ವಾಮಿ ವಿವೇಕಾನಂದ ದಿನ’ ಎಂದು ಘೋಷಿಸಿದರು. ಮುಂದಿನ ವಿಶ್ವ ಹಿಂದೂ ಸಮ್ಮೇಳನ 2022ರ ನವೆಂಬರ್ನಲ್ಲಿ ಬ್ಯಾಂಕಾಕ್ನಲ್ಲಿ ನಡೆಯಲಿದೆ.
ಬೆಳೆಯುತ್ತಿದೆ ಆರ್ಥಿಕತೆ
ಸಮ್ಮೇಳನದಲ್ಲಿ ಮಾತನಾಡಿದ ಮಣಿಪಾಲ್ ಗ್ಲೋಬಲ್ನ ನಿರ್ದೇಶಕ ಮಂಡಳಿ ಮುಖ್ಯಸ್ಥ ಮೋಹನ್ ದಾಸ್ ಪೈ, ಭಾರತ ಆರ್ಥಿಕ ಪ್ರಗತಿ ಕಾಣುತ್ತಿರುವ ದೇಶವಾಗಿದ್ದು, 2.6 ಲಕ್ಷಕೋಟಿ ಡಾಲರ್ನಷ್ಟು ಆರ್ಥಿಕತೆ ಹೊಂದಿದೆ. 2030ರ ವೇಳೆಗೆ ಭಾರತವು 10 ಲಕ್ಷಕೋಟಿ ಡಾಲರ್ನ ಆರ್ಥಿಕತೆಯಾಗಿ ಬೆಳೆಯಲಿದೆ. ಎಲ್ಲರಿಗೂ ಆಹಾರ, ವಸತಿ, ವಿದ್ಯುತ್, ನೀರು, ಆರೋಗ್ಯ ಮುಂತಾದ ಮೂಲಸೌಕರ್ಯಗಳು ಸಿಗಬೇಕು. 2030ರ ವೇಳೆಗೆ ಎಲ್ಲ ಸಮಸ್ಯೆಗಳಿಂದಲೂ ದೇಶ ಮುಕ್ತವಾಗಲಿದೆ ಎಂದರು. ಭಾಷಣದ ಆರಂಭದಲ್ಲಿ “ಎಲ್ಲರಿಗೂ ನಮಸ್ಕಾರಗಳು’ ಎಂದು ಕನ್ನಡದಲ್ಲೇ ಹೇಳಿದ್ದು ವಿಶೇಷವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ