ಭಾರತಕ್ಕೆ ತಟ್ಟುವುದೇ ಸುಂಕ ಸಮರ ಬಿಸಿ?
Team Udayavani, Sep 22, 2018, 6:00 AM IST
ಬೀಜಿಂಗ್/ವಾಷಿಂಗ್ಟನ್: ಅಮೆರಿಕ ಮತ್ತು ಚೀನ ನಡುವಿನ ಸುಂಕ ಸಮರದ ಬಿಸಿ ವಿಶ್ವವನ್ನೇ ವ್ಯಾಪಿಸುವ ಹಂತಕ್ಕೆ ಹೋಗುವ ಸಾಧ್ಯತೆ ಇದೆ. ಅದರಲ್ಲಿಯೂ ವಿಶೇಷವಾಗಿ ಭಾರತಕ್ಕೆ ಪ್ರತಿಕೂಲವಾಗಲಿದೆಯೇ ಎಂಬ ವಿಶ್ಲೇ ಷಣೆ ಶುರುವಾಗಿದೆ. ಗುರುವಾರ ನಡೆದ ಬೆಳವಣಿಗೆಯಲ್ಲಿ ರಷ್ಯಾದಿಂದ ಮಿಲಿಟರಿ ಆಯುಧ, ಶಸ್ತ್ರಾಸ್ತ್ರಗಳನ್ನು ಚೀನ ಖರೀದಿ ಮಾಡುವಂತಿಲ್ಲ ಎಂದು ಅಮೆರಿಕ ಫರ್ಮಾನು ಹೊರಡಿಸಿದೆ. ಅದರಲ್ಲಿ ಎಸ್-400 ಟ್ರೈಂಫ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯೂ ಸೇರಿದೆ. ಇದೇ ವ್ಯವಸ್ಥೆಯನ್ನು ಭಾರತವೂ ರಷ್ಯಾದಿಂದ ಖರೀದಿಸಲು ಮುಂದಾಗಿದ್ದು, ಅಮೆರಿಕ -ಚೀನ ಸಮರವು ಭಾರತದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ.
ಮುಂದಿನ ತಿಂಗಳು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತ ಪ್ರವಾಸ ಕೈಗೊಳ್ಳುವ ವೇಳೆ 40 ಸಾವಿರ ಕೋಟಿ ರೂ. ವೆಚ್ಚದ ರಕ್ಷಣಾ ಖರೀದಿ ಒಪ್ಪಂದಕ್ಕೆ ಸಹಿ ಹಾಕಲು ಸಿದ್ಧತೆ ನಡೆದಿರುವಾಗಲೇ ಈ ಬೆಳವಣಿಗೆ ನಡೆದಿದೆ. ಏಷ್ಯಾದ ಪ್ರಬಲ ರಾಷ್ಟ್ರವಾಗಿರುವ ಚೀನದ ಮಿಲಿಟರಿ ಡೀಲ್ಗೆ ಅಮೆರಿಕ ಸರಕಾರ ಆಕ್ಷೇಪ ವ್ಯಕ್ತಪಡಿಸಿದೆ. ಜತೆಗೆ “ಇತರೆ ರಾಷ್ಟ್ರಗಳು ಕೂಡ ರಷ್ಯಾ ಜತೆ ಒಪ್ಪಂದ ಮಾಡುವ ಮುನ್ನ ಎರಡು ಬಾರಿ ಯೋಚನೆ ಮಾಡುವುದು ಒಳಿತು’ ಎಂದು ಎಚ್ಚರಿಕೆಯ ಟಿಪ್ಪಣಿಯನ್ನೂ ನೀಡಿದೆ.
ಸೆ.6ರಂದು ದೆಹಲಿಯಲ್ಲಿ ಅಮೆರಿಕದ ವಿದೇಶಾಂಗ ಮತ್ತು ರಕ್ಷಣಾ ಸಚಿವರು ಭಾರತದ ವಿದೇಶಾಂಗ ಮತ್ತು ರಕ್ಷಣಾ ಸಚಿವರು ನಡೆಸಿದ್ದ 2+2 ಮಾತುಕತೆ ಯಲ್ಲಿ ಮೇಲ್ನೋಟಕ್ಕೆ ಮಾತ್ರ ಈ ಬಗ್ಗೆ ಪ್ರಸ್ತಾಪವಾಗಿತ್ತು. ಇದರ ಹೊರತಾ ಗಿಯೂ ರಷ್ಯಾದಿಂದ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿ ಮಾಡಿದರೆ ಪ್ರತಿಕೂಲ ಪರಿಣಾಮ ಎದುರಿಸಬೇಕಾದೀತು ಎಂದು ಭಾರತಕ್ಕೆ ಅಮೆರಿಕ ಈಗಾಗಲೇ ಸೂಚನೆ ರವಾನಿಸಿದೆ.
ಚೀನ, ರಷ್ಯಾ ಎಚ್ಚರಿಕೆ: ರಷ್ಯಾದಿಂದ ಸೇನೆಗೆ ಸಂಬಂಧಿಸಿದ ಖರೀದಿ ಪ್ರಸ್ತಾಪಕ್ಕೆ ತಡೆಯೊಡ್ಡಿ ಹೇರಲಾಗಿರುವ ನಿರ್ಬಂಧ ವನ್ನು ತಕ್ಷಣ ರದ್ದು ಮಾಡುವಂತೆ ಅಮೆರಿಕಕ್ಕೆ ಚೀನ ಹಾಗೂ ರಷ್ಯಾ ಎಚ್ಚರಿಕೆ ನೀಡಿವೆ. ಮಾಸ್ಕೋದಲ್ಲಿ ಮಾತನಾಡಿದ ಉಪ ವಿದೇಶಾಂಗ ಸಚಿವ ಸರ್ಗಿ ರ್ಯಬೊವ್ “ಬೆಂಕಿಯ ಜತೆಗೆ ಆಟವಾಡ ಬೇಡಿ’ ಎಂದು ಎಚ್ಚರಿಕೆ ನೀಡಿದ್ದಾರೆ.
ಅಮೆರಿಕ ಜಾಗತಿಕ ಸ್ಥಿರತೆ ಎಂಬ ವಿಚಾರ ಮರೆತು ವರ್ತಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಬೀಜಿಂಗ್ನಲ್ಲಿ ಪ್ರತಿ ಕ್ರಿಯಿಸಿದ ಚೀನ ವಿದೇಶಾಂಗ ಇಲಾಖೆ, ಅಮೆರಿಕ ಕೂಡಲೇ ನಿರ್ಧಾರ ಹಿಂಪಡೆ ಯಬೇಕು. ಇಲ್ಲದೇ ಇದ್ದಲ್ಲಿ ಪ್ರತಿಕೂಲ ಪರಿಣಾಮ ಉಂಟಾದೀತು. “ಅಮೆರಿಕದ ಘೋಷಣೆ ಅಂತಾರಾಷ್ಟ್ರೀಯವಾಗಿ ಎರಡು ರಾಷ್ಟ್ರಗಳು ಹೊಂದಿರಬೇಕಾದ ಬಾಂಧವ್ಯಕ್ಕೆ ಧಕ್ಕೆ ತರುವಂತಿದೆ. ಜತೆಗೆ ಎರಡು ಸೇನೆಯ ನಡುವಿನ ಸಂಬಂಧಕ್ಕೂ ಅಡ್ಡಿಯಾಗಲಿದೆ’ ಎಂದಿದ್ದಾರೆ. ಇದೇ ಮೊದಲ ಬಾರಿಗೆ ಟ್ರಂಪ್ ಆಡಳಿತ ಕಾಟ್ಸಾ ಕಾಯ್ದೆ(ದಿಗ್ಬಂಧ ಕಾಯ್ದೆ 2017) ಯನ್ವಯ ಮೂರನೇ ರಾಷ್ಟ್ರದತ್ತ ಕ್ರಮ ಕೈಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ