ಇಂಡೋನೇಷ್ಯಾಕ್ಕೆ ನೆರವು
Team Udayavani, Oct 4, 2018, 8:40 AM IST
ವಾನಿ/ಹೊಸದಿಲ್ಲಿ: ಇಂಡೋನೇಷ್ಯಾದ ಸುಲೇವಾಸಿಯಲ್ಲಿ ಸಂಭವಿಸಿದ ಭೂಕಂಪ-ಸುನಾಮಿಯಿಂದ ತೊಂದರೆಗೀಡಾದವರಿಗೆ ನೆರವು ನೀಡಲು ಭಾರತ ಸರಕಾರ ನಿರ್ಧರಿಸಿದೆ. ನೌಕಾಪಡೆಯ ಮೂರು ಹಡಗುಗಳಲ್ಲಿ ಮತ್ತು ಎರಡು ವಿಮಾನಗಳ ಮೂಲಕ ಅಗತ್ಯ ವಸ್ತುಗಳನ್ನು ಕಳುಹಿಸಿಕೊಡಲು ವಿದೇಶಾಂಗ ಇಲಾಖೆ ನಿರ್ಧರಿಸಿದೆ. ಪ್ರಧಾನಿ ಮೋದಿ ಮತ್ತು ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡೂಡು ಫೋನ್ನಲ್ಲಿ ಮಾತುಕತೆ ನಡೆಸಿದ ಬಳಿಕ ‘ಆಪರೇಷನ್ ಸಮುದ್ರ ಮೈತ್ರಿ’ ಎಂಬ ಶಿರೋನಾಮೆಯ ಯೋಜನೆಯಡಿ ಪರಿಹಾರ ಮತ್ತು ನೆರವು ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಈ ನಡುವೆ ಬುಧವಾರದ ವೇಳೆಗೆ ಭೂಕಂಪ-ಸುನಾಮಿಯಲ್ಲಿ ಅಸುನೀಗಿದವರ ಸಂಖ್ಯೆ 1,400ನ್ನು ದಾಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ