ಇಂಡೋನೇಶ್ಯ: ಭೂಕಂಪ, ಸುನಾಮಿ ಬಳಿಕ ಈಗ ಸಾಂಕ್ರಾಮಿಕ ರೋಗ ಭೀತಿ
Team Udayavani, Oct 6, 2018, 11:02 AM IST
ಪಾಲು, ಇಂಡೋನೇಶ್ಯ : ಭಾರೀ ಭೂಕಂಪ ಮತ್ತು ಸುನಾಮಿಗೆ ಅಪಾರ ಸಾವು ನೋವು, ನಾಶ ನಷ್ಟ ಅನುಭವಿಸಿರುವ ಇಂಡೋನೇಶ್ಯದ ಪಾಲು ನಗರದಲ್ಲೀಗ ಎಲ್ಲೆಂದರಲ್ಲಿ ಕೊಳೆತ ಶವಗಳು ಕಂಡು ಬರುತ್ತಿದ್ದು ನಾನಾ ಬಗೆಯ ಭೀಕರ ಸೋಂಕು ರೋಗಗಳು ಹರಡುವ ಭೀತಿ ಈಗ ತಲೆದೋರಿದೆ.
ಭೂಕಂಪ ಮತ್ತು ಸುನಾಮಿಗೆ ಬಲಿಯಾಗಿರುವವರ ಸಂಖ್ಯೆ ಈ ವರೆಗಿನ ಲಕ್ಕಾಚಾರದ ಪ್ರಕಾರ 1,571 ಆಗಿದೆ. ಸಮುದ್ರ ತಡಿಯ ನಗರವಾಗಿರುವ ಸುಲವೇಶಿ ದ್ವೀಪದಲ್ಲಿ ಸಾವಿರಕ್ಕೂ ಅಧಿಕ ಜನರು ಈಗಲೂ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭೂಕಂಪ, ಸುನಾಮಿ ದುರಂತ ಸಂಭವಿಸಿ ಎಂಟು ದಿನಗಳ ಬಳಿಕ ಇದೀಗ ಈಗಿನ್ನು ಬದುಕುಳಿದವವರ ಬಗ್ಗೆ ಯಾವುದೇ ಆಶಾಕಿರಣ ಇಲ್ಲವಾಗಿದೆ. ಹಾಗಿದ್ದರೂ ಇಂಡೋನೇಶ್ಯದ ಅಧಿಕಾರಿಗಳು ಈಗಿನ್ನೂ ತಾವು ಬದುಕುಳಿದವರ ಶೋಧ ಕಾರ್ಯ ನಿಲ್ಲಿಸಿದ್ದೇವೆ ಎಂದು ಅಧಿಕೃತವಾಗಿ ಪ್ರಕಟಿಸಿಲ್ಲ.
ನಗರದ ಪೆಟೋಬೋ ಮತ್ತು ಬಲರೋವಾ ಪ್ರದೇಶಗಳಲ್ಲೀಗ ಎಲ್ಲೆಂದರಲ್ಲಿ ಕೊಳೆತ ಶವಗಳೇ ಕಂಡು ಬರುತ್ತಿವೆ. ಹಾಗಾಗಿ ಭೀಕರ ಸಾಂಕ್ರಾಮಿಕ ರೋಗಗಳು ಹಬ್ಬುವ ಭೀತಿ ಇದೆ. ನೆಲ, ಜಲ, ವಾಯು ಮಾಲಿನ್ಯವಾಗದಂತೆ ನೋಡಿಕೊಳ್ಳಬೇಕಾದ ಗುರುತರ ಜವಾಬ್ದಾರಿ ಈಗ ನಮ್ಮ ಮೇಲಿದೆ ಎಂದು ಇಂಡೇಶ್ಯದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ವಕ್ತಾರ ಯೂಸುಫ್ ಲತೀಫ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ