ಇಂಡೋನೇಷ್ಯಾದಲ್ಲಿ ಸುನಾಮಿ: 222 ಬಲಿ


Team Udayavani, Dec 24, 2018, 6:00 AM IST

ap12232018000071a.jpg

ಜಕಾರ್ತ: ಇದೇ ವರ್ಷ ಐದು ಬಾರಿ ಭೂಕಂಪಕ್ಕೆ ತುತ್ತಾಗಿರುವ ಇಂಡೋನೇಷ್ಯಾದಲ್ಲಿ ನಿಸರ್ಗ ಮತ್ತೂಮ್ಮೆ ರುದ್ರತಾಂಡವವಾಡಿದೆ. ಸುಮಾತ್ರಾ ಹಾಗೂ ಜಾವಾ ದ್ವೀಪಗಳ ನಡುವಿನ ಸುಂಡಾ ಜಲಸಂಧಿಯಲ್ಲಿ ಶನಿವಾರ ರಾತ್ರಿ ಸ್ಥಳೀಯ ಕಾಲಮಾನ 9:27ರ ಸುಮಾರಿಗೆ ಉಂಟಾದ ಸುನಾಮಿಗೆ 222 ಮಂದಿ ಸಾವನ್ನಪ್ಪಿದ್ದು, 800ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಅಂದಾಜು 50 ಜನರು ಕಾಣೆಯಾಗಿದ್ದಾರೆ. ಪರಿಹಾರ ಕಾರ್ಯಾಚರಣೆಗಳು ಸಮರೋಪಾದಿಯಲ್ಲಿ ಸಾಗುತ್ತಿವೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಆತಂಕವಿದೆ.
 
ಹೇಗಾಯ್ತು ಸುನಾಮಿ?
ಸುಂಡಾ ಜಲಸಂಧಿಯಲ್ಲಿ ಅನಕ್‌ ಕ್ರಟಾಟೌ ಎಂಬ ದ್ವೀಪವಿದೆ. ಇದಕ್ಕೆ ಜ್ವಾಲಾಮುಖೀಗಳ ದ್ವೀಪವೆಂದೇ ಹೆಸರು. ಇದರಲ್ಲಿನ ಕ್ರಟಾಟೌ ಜ್ವಾಲಾಮುಖೀ ಏಕಾಏಕಿ ಭುಗಿಲೆದ್ದಿದ್ದರಿಂದ ಅದರ ಪಕ್ಕದಲ್ಲಿದ್ದ ಸಾಗರದಲ್ಲಿ ಭೂಕಂಪವಾಗಿದೆ. ಸಾಗರ ತಳದಲ್ಲಿ ಹಠಾತ್ತನೆ ಏರುಪೇರಾಗಿದ್ದರಿಂದ ಸಮುದ್ರದ ನೀರು ಮುಗಿಲೆತ್ತರಕ್ಕೆ ಚಿಮ್ಮಿ ಸುನಾಮಿ ಉಂಟಾಗಿದೆ. ಶನಿವಾರ ಹುಣ್ಣಿಮೆಯೂ ಇದ್ದಿದ್ದರಿಂದ ಸಾಗರದಲ್ಲಿ ಅಲೆಗಳ ಏರಿಳಿತ ಸಾಮಾನ್ಯ ದಿನಗಳಿಗಿಂತಲೂ ಹೆಚ್ಚಾಗಿಯೇ ಇತ್ತು. ಸುನಾಮಿ ಸಂಭವಿಸುತ್ತಲೇ ಅಲೆಗಳು ರಕ್ಕಸ ಸ್ವರೂಪ ಪಡೆದು ಬಂದು ಸಾಗರ ತೀರಗಳಿಗೆ ಅಪ್ಪಳಿಸಿದೆ ಎಂದು ಹೇಳಲಾಗಿದೆ.  

ರಸನಿಮಿಷಗಳ ಜಲಸಮಾಧಿ
ಸುಮಾತ್ರಾ, ಜಾವಾ ದ್ವೀಪಗಳ ನಡುವಿನ ಜಾಗದಲ್ಲಿ ಹಿಂದೂ ಮಹಾ ಸಾಗರ ಹಾಗೂ ಜಾವಾ ಸಮುದ್ರಗಳು ಪರಸ್ಪರ ಒಂದನ್ನೊಂದು ಸೇರುತ್ತವೆ. ಇದನ್ನೇ ಸುಂಡಾ ಜಲಸಂಧಿ ಎಂದು ಕರೆಯುತ್ತಾರೆ. ಇಲ್ಲಿ ಚಿಕ್ಕಪುಟ್ಟ ದ್ವೀಪಗಳಿದ್ದು, ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿವೆ. ಈ ದ್ವೀಪಗಳ ತುಂಬೆಲ್ಲಾ ರೆಸ್ಟೋರೆಂಟ್‌ಗಳು, ಬಾರ್‌-ಪಬ್‌ಗಳು ಸೇರಿದಂತೆ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ. ಈ ಬಾರಿಯ ವೀಕೆಂಡ್‌ ಹಾಗೂ ಕ್ರಿಸ್‌ಮಸ್‌ ರಜಾದಿನಗಳ ಹಿನ್ನೆಲೆಯಲ್ಲಿ ಹೆಚ್ಚು ಜನರು ಇಲ್ಲಿ ಜಮಾಯಿಸಿದ್ದರು. ಹಾಗಾಗಿಯೇ ಸಾವಿನ ಸಂಖ್ಯೆ ಏರುವ ಭೀತಿ ಎದುರಾಗಿದೆ.

ವರ್ಷಾಂತ್ಯಕ್ಕೂ ಭೂಕಂಪಕ್ಕೂ ವಿಚಿತ್ರ ನಂಟು!
ವರ್ಷಾಂತ್ಯಕ್ಕೂ ಇಂಡೋನೇಷ್ಯಾ ಸುನಾಮಿಗೂ ನಂಟು ಇದ್ದಂತಿದೆ. 2004ರ ಡಿ. 26ರಂದು ಸುಮಾತ್ರಾದ ಸಾಗರದಾಳದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಉಂಟಾದ ಮಹಾಸುನಾಮಿಯಿಂದ ಹಿಂದೂ ಮಹಾಸಾಗರಕ್ಕೆ ಆತುಕೊಂಡಿರುವ ಎಲ್ಲಾ ದೇಶಗಳಲ್ಲಿ ಒಟ್ಟಾರೆ 2,20,000 ಜನರು ಸಾವನ್ನಪ್ಪಿದ್ದರು. ಇಂಡೋನೇಷ್ಯಾದಲ್ಲೇ 1,68,000 ಜನ ಸಾವಿಗೀಡಾಗಿದ್ದರು. 

ನೇಪಾಳದಲ್ಲಿ ಲಘು ಭೂಕಂಪ 
ಇಂಡೋನೇಷ್ಯಾದಲ್ಲಿ ಸುನಾಮಿ ಸಂಭವಿಸಿದ ಬೆನ್ನಲ್ಲೇ, ಭಾರತದ ನೆರೆ ದೇಶ ನೇಪಾಳದ ರಾಜಧಾನಿ ಕಠ್ಮಂಡುವಿನಿಂದ 80 ಕಿ.ಮೀ. ದೂರದಲ್ಲಿರುವ ಸಿಂಧುಪಾಲ್‌ ಚೌಕ್‌ ಎಂಬ ಜಿಲ್ಲೆಯಲ್ಲಿ ಭಾನುವಾರ ಬೆಳಗಿನ ಜಾವ 5:06ರ ಹೊತ್ತಿಗೆ ಲಘು ಭೂಕಂಪ ಸಂಭವಿಸಿದೆ. ರಿಕ್ಟರ್‌ ಮಾಪಕದಲ್ಲಿ ಇದರ ತೀವ್ರತೆ 4.7ರಷ್ಟಿತ್ತು ಎಂದು ಹೇಳಲಾಗಿದೆ. 

50ರಿಂದ 70 ಅಡಿಯ ಅಲೆ!
ಅಲ್ಲಿನ ಬೀಚ್‌ ರೆಸ್ಟೋರೆಂಟ್‌ ಒಂದರಲ್ಲಿ ಸಂಗೀತ ಬ್ಯಾಂಡ್‌ ಒಂದರಿಂದ ಸಂಗೀತ ಕಾರ್ಯಕ್ರಮ ನಡೆಯುತ್ತಿರುವಾಗಲೇ ಸುನಾಮಿ ಅಪ್ಪಳಿಸಿದ್ದು ಈ ಕಾರ್ಯಕ್ರಮದ ವಿಡಿಯೋ ಚಿತ್ರೀಕರಿಸುತ್ತಿದ್ದ ಪ್ರವಾಸಿಗರೊಬ್ಬರ ಮೊಬೈಲಿನಲ್ಲಿ ದಾಖಲೆಯಾಗಿದೆ. ಆ ವಿಡಿಯೋ ಕ್ಲಿಪ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸುನಾಮಿಯಿಂದ ಎದ್ದ ದೈತ್ಯ ಅಲೆ ಸುಮಾರು 50ರಿಂದ 70 ಅಡಿಗಳಷ್ಟಿತ್ತು. ಆ ಅಲೆಯ ಬಡಿತಕ್ಕೆ ಇಡೀ ದ್ವೀಪದ ಅಂದ-ಚೆಂದ, ಪ್ರವಾಸಿಗರ ಸಡಗರ, ಗಾನ-ಪಾನಗಳೆಲ್ಲವೂ ಕ್ಷಣಾರ್ಧದಲ್ಲಿ ಕೊಚ್ಚಿ ಹೋದವು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. 

ಅಂಕಿ-ಅಂಶ: 
800 – ಗಂಭೀರವಾಗಿ ಗಾಯಗೊಂಡವರ ಸಂಖ್ಯೆ 
50 – ಸುನಾಮಿಯಲ್ಲಿ ಕಾಣೆಯಾದವರ ಸಂಖ್ಯೆ 
50ರಿಂದ 70 ಅಡಿ – ಸುನಾಮಿ ಅಲೆಯ ಅಂದಾಜು ಎತ್ತರ 
6 – ಈ ವರ್ಷ ಇಂಡೋನೇಷ್ಯಾದಲ್ಲಿ ಸಂಭವಿಸಿದ ಭೂಕಂಪಗಳ ಸಂಖ್ಯೆ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

Israel-Iran ಅಣುಯುದ್ಧ? ಇರಾನ್‌ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ

Israel-Iran ಅಣುಯುದ್ಧ? ಇರಾನ್‌ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.