ನನ್ನ ಹಣ ಸ್ವೀಕರಿಸುವಂತೆ ಮೋದಿ ಬ್ಯಾಂಕಿಗೆ ಏಕೆ ಹೇಳುತ್ತಿಲ್ಲ ? ಮಲ್ಯ
Team Udayavani, Feb 14, 2019, 5:40 AM IST
ಲಂಡನ್ : ‘ಕಿಂಗ್ಫಿಶರ್ ಬ್ಯಾಂಕ್ ಸಾಲ ತೀರಿಸಲು ನಾನು ಕೊಡಲು ಮುಂದಾಗಿರುವ ಹಣವನ್ನು ಸ್ವೀಕರಿಸುವಂತೆ ಪ್ರಧಾನಿ ಮೋದಿ ಬ್ಯಾಂಕುಗಳಿಗೆ ಏಕೆ ಸೂಚನೆ ನೀಡುತ್ತಿಲ್ಲ? ‘ ಎಂದು ದೇಶಭ್ರಷ್ಟ ಆರ್ಥಿಕ ಅಪರಾಧಿ ವಿಜಯ್ ಮಲ್ಯ ಪ್ರಶ್ನಿಸಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಅವರೋರ್ವ ಚತುರ ಮಾತುಗಾರ, ಭಾಷಣಕಾರ; ಆದರೆ ನಾನು ಕೊಡುವ ಹಣವನ್ನು ಸ್ವೀಕರಿಸುವಂತೆ ಅವರು ಬ್ಯಾಂಕುಗಳಿಗೆ ಯಾಕೆ ಸೂಚನೆ ನೀಡುತ್ತಿಲ್ಲ ‘ ಎಂದು ಮಲ್ಯ ಪ್ರಶ್ನಿಸಿದರು.
‘ಲೋಕಸಭೆಯಲ್ಲಿ ಕೊನೆ ದಿನದಂದು ಪ್ರಧಾನಿ ಮೋದಿ ಮಾಡಿರುವ ಭಾಷಣವನ್ನು ನನ್ನ ಗಮನಕ್ಕೆ ತರಲಾಗಿದೆ. ತಮ್ಮ ಭಾಷಣದಲ್ಲಿ ಮೋದಿ ಅವರು ಹೆಸರು ಬಹಿರಂಗಪಡಿಸದ ವ್ಯಕ್ತಿಯೋರ್ವ 9,000 ಕೋಟಿ ರೂ. ಗಳೊಂದಿಗೆ ದೇಶದಿಂದ ಪಲಾಯನ ಮಾಡಿರುವುದಾಗಿ ಹೇಳಿದ್ದಾರೆ. ಆ ವ್ಯಕ್ತಿ ನಾನೇ ಎಂಬುದನ್ನು ತಿಳಿಯಬಲ್ಲೆ’ ಎಂದು ಮಲ್ಯ ತಮ್ಮ ಟ್ವೀಟ್ ನಲ್ಲಿ ಬರೆದಿದ್ದಾರೆ.
ಬ್ರಿಟನ್ನ ಗೃಹ ಸಚಿವಾಲಯ ಕಾರ್ಯಾಲಯ ಕಳೆದ ಫೆ.4ರಂದು ಮಲ್ಯ ಅವರನ್ನು ಭಾರತಕ್ಕೆ ಗಡೀಪಾರು ಮಾಡುವುದಕ್ಕೆ ಅನುಮತಿ ನೀಡುವ ಆದೇಶಕ್ಕೆ ಸಹಿ ಹಾಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು
PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ