ನ್ಯೂಜಿಲ್ಯಾಂಡ್ ಶಂಕಿತ ಉಗ್ರನ 2 ಮನೆ ಮೇಲೆ ಆಸೀಸ್ ಪೊಲೀಸ್ ದಾಳಿ
Team Udayavani, Mar 18, 2019, 6:22 AM IST
ಮೆಲ್ಬೋರ್ನ್ : ಕ್ರೈಸ್ಟ್ ಚರ್ಚ್ನ ಎರಡು ಮಸೀದಿಗಳಲ್ಲಿ ನರಮೇಧ ನಡೆಸಿ ಐವರು ಭಾರತೀಯರ ಸಹಿತ 50 ಜನರನ್ನು ಬಲಿಪಡೆದಿದ್ದ ಆರೋಪಿ ಬಂದೂಕುಧಾರಿಯ ಕುಟುಂಬ ಸದಸ್ಯರ ಎರಡು ಮನೆಗಳಿಗೆ ಆಸ್ಟ್ರೇಲಿಯದ ಉಗ್ರ ನಿಗ್ರಹ ಪೊಲೀಸರು ಇಂದು ಸೋಮವಾರ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ.
ನ್ಯೂಜೀಲ್ಯಾಂಡ್ ಪೊಲೀಸರಿಗೆ ನರಮೇಧದ ತನಿಖೆಗೆ ನೆರವಾಗುವಲ್ಲಿ ಯಾವುದಾದರೂ ಪ್ರಮುಖ ಮಾಹಿತಿ, ಸಾಕ್ಷ್ಯಗಳು ದೊರಕಬಹುದು ಎಂಬ ಕಾರಣಕ್ಕೆ ಪೊಲೀಸರು ಈ ದಾಳಿ ನಡೆಸಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.
50 ಅಮಾಯಕರನ್ನು ಬಲಿ ಪಡೆದಿರುವ ಬಂದೂಕುಧಾರಿಯನ್ನು ಪೊಲೀಸರು ಆಸ್ಟ್ರೇಲಿಯ ಸಂಜಾತ, 28ರ ಹರೆಯದ ಬ್ರೆಂಟನ್ ಟ್ಯಾರಾಂಟ್ ಎಂದು ಗುರುತಿಸಿದ್ದಾರೆ. ಶುಕ್ರವಾರದ ಪ್ರಾರ್ಥನೆಯ ವೇಳೆ ಈತ ವಲಸಿಗರನ್ನು ಗುರಿ ಇರಿಸಿ ಗುಂಡಿನ ದಾಳಿ ನಡೆಸಿದ್ದ. ಈತನು ಪ್ರಾರ್ಥನೆಯಲ್ಲಿ ನಿರತರಾಗಿದ್ದವರನ್ನು ತೀರ ಸನಿಹದಿಂದ ಗುಂಡಿಟ್ಟು ಕೊಂದಿದ್ದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.
ಎರಡು ಮಸೀದಿಯೊಳಗೆ ಐವರು ಭಾರತೀಯರು ಸೇರಿದಂತೆ 50 ಜನರ ಮಾರಣ ಹೋಮ ನಡೆದ ಒಡನೆಯೇ ಘಟನೆ ನಡೆದಿದ್ದ ಎರಡು ಮಸೀದಿಗಳನ್ನು ಪ್ರವೇಶಿಸಿದ್ದ ಪೊಲೀಸರು ಆತನನ್ನು ಜೀವಂತ ಸೆರೆ ಹಿಡಿಯುವಲ್ಲಿ ಸಫಲರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ