ಅಂತರಿಕ್ಷ ಗೆದ್ದರೂ ಅಂತರಂಗ ಗೆಲ್ಲಲು ಸಾಧ್ಯವಾಗಿಲ್ಲ: ಸ್ವಾಮೀಜಿ
Team Udayavani, Jan 12, 2018, 2:41 PM IST
ಕೆಂಭಾವಿ: ಮನುಷ್ಯ ಆಧುನಿಕ ಜೀವನ ಶೈಲಿ ಅಳವಡಿಸಿಕೊಳ್ಳುವ ತವಕದಲ್ಲಿ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಯೋಚಿಸುತ್ತಿಲ್ಲ. ಅಂತರೀಕ್ಷವನ್ನೆ ಗೆದ್ದಿರುವ ನಮಗೆ ನಮ್ಮ ಅಂತರಂಗವನ್ನು ಗೆಲ್ಲಲು ಸಾಧ್ಯವಾಗಿಲ್ಲ ಎಂದು ಶಾಂತರುದ್ರಮುನಿ ಸ್ವಾಮೀಜಿ ಹೇಳಿದರು.
ಸಮೀಪದ ಕರಡಕಲ ಗ್ರಾಮದ ಕೋರಿಸಿದ್ದೇಶ್ವರ ಶಾಖಾಮಠದಲ್ಲಿ ಈಚೆಗೆ ನಡೆದ ಸಿದ್ದಪರ್ವತದ ಬಗಳಾಂಬದೇವಿಯ ಜಾತ್ರೋತ್ಸವದ ನಿಮಿತ್ಯ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಯುವ ಸಮೂಹ ಆಧುನಿಕತೆಯ ಭರಾಟೆಯಲ್ಲಿ ಧಾರ್ಮಿಕ ಚಟುವಟಿಕೆಗಳತ್ತ ಗಮನ ಕಡಿಮೆಗೊಳಿಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಕಲಬುರಗಿಯ ವರ್ಣಸಿಂದು ನೃತ್ಯ ಕಲಾ ಕೇಂದ್ರ ನಡೆಸಿಕೊಟ್ಟ ನವದುರ್ಗೆಯರ ನೃತ್ಯರೂಪಕ, 1008 ಜನ ರೈತರಿಗೆ ತಲೆಗೆ ಪೇಟ ಸುತ್ತುವುದು, 203ನೇ ಶಿವಾನುಭವ ಗೋಷ್ಠಿ ಕಣ್ಮನ ಸೆಳೆಯಿತು.
ಮುದನೂರ ಮಲ್ಲಿಕಾರ್ಜುನ ದೇವರು ನೇತೃತ್ವ ವಹಿಸಿದ್ದರು. ಮಾಜಿ ಸಚಿವ ಶರಣಬಸಪ್ಪಗೌಡ ದರ್ಶಾನಪೂರ, ಜಿಪಂ
ಮಾಜಿ ಅಧ್ಯಕ್ಷ ಸಿದ್ದನಗೌಡ ಪೊಲೀಸ್ ಪಾಟೀಲ, ಸಂಗನಗೌಡ ವಜ್ಜಲ, ರಾಜಕುಮಾರ ನಾಯಕ ಸುರಪುರ, ಶರಣಬಸವ ಡಿಗ್ಗಾವಿ, ವಾಮನರಾವ ದೇಶಪಾಂಡೆ, ಹಣಮಂತ್ರಾಯ ನಿಲವಂಜಿ, ಸಂಗನಗೌಡ ಮರಡ್ಡಿ, ಡಾ| ಅನ್ನದಾನಯ್ಯ ಹಿರೇಮಠ, ನಾನಾಗೌಡ ಮೇಟಿ, ಸಿದ್ದನಗೌಡ ಮಾಳಳ್ಳಿ, ಮಾನಶೆಪ್ಪ ಘಂಟಿ, ಅಣ್ಣೆಪ್ಪಗೌಡ ಪಾಟೀಲ, ಬಸನಗೌಡ ಮರಡ್ಡಿ ಇದ್ದರು. ಮಠದ ವಕ್ತಾರ ಶಿವಪ್ರಕಾಶ ಸ್ವಾಗತಿಸಿದರು. ಮಲ್ಲಿಕಾರ್ಜುನ ಪರಸನಹಳ್ಳಿ ನಿರೂಪಿಸಿದರು. ರವಿರಾಜ ಕಂದಳ್ಳಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ
Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ