ಶರಣರನ್ನು ಆಯಾ ಜಾತಿಗೆ ಸೀಮಿತಗೊಳಿಸಬೇಡಿ: ಶಾಸಕ ನಾಯಕ
Team Udayavani, Jan 22, 2018, 4:49 PM IST
ಸುರಪುರ: ಶರಣ ಸಂಕುಲದಲ್ಲಿಯೇ ನೇರ ನುಡಿ, ದಿಟ್ಟ ನಡೆಯ ಶರಣ ಎಂಬ ಅಭಿಧಾನಕ್ಕೆ ಪಾತ್ರನಾಗಿರುವ ಅಂಬಿಗರ ಚೌಡಯ್ಯನ ವಚನಗಳು ಚಾಟಿ ಏಟಿನಂತ್ತಿವೆ. ಅವರ ವಚನ ಮತ್ತು ತತ್ವಾದರ್ಶಗಳು ಸಮಾಜ ಬದಲಾವಣೆಯಲ್ಲಿ ಪೂರಕವಾಗಿವೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ತಹಶೀಲ್ದಾರ್ ಕಚೇರಿ ಆವರಣದಲ್ಲಿ ರವಿವಾರ ತಾಲೂಕು ಆಡಳಿತ ಏರ್ಪಡಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ
ಜಯಂತ್ಯುತ್ಸವದಲ್ಲಿ ಅವರು ಮಾತನಾಡಿ, ಸಮಾಜದಲ್ಲಿ ಬೇರೂರಿದ್ದ ಮೂಢನಂಬಿಕೆ ಕಿತ್ತೂಗೆಯಲು ಚೌಡಯ್ಯನವರು
ಶ್ರಮಿಸಿದ್ದರು. ಹೀಗಾಗಿ ಅವರೊಬ್ಬ ಶ್ರೇಷ್ಠ ಮತ್ತು ನಿಜಶರಣ ಎಂಬ ಅಭಿಧಾನಕ್ಕೆ ಪಾತ್ರರಾಗಿದ್ದಾರೆ. ಅವರ ವಚನ
ಮತ್ತು ತತ್ವದಾರ್ಶಗಳು ಸಾರ್ವಕಾಲಿಕ ಶ್ರೇಷ್ಠವಾಗಿವೆ ಎಂದರು. ಸರಕಾರ ಕೂಡ ಜಾತಿಗೊಬ್ಬ ಶರಣರನ್ನು ಗುರುತಿಸಿ ಅವರ ಹೆಸರಲ್ಲಿ ಜಯಂತಿ ಆಚರಣೆ ಜಾರಿಗೆ ತಂದು ಪರೋಕ್ಷವಾಗಿ ಜಾತಿಯತೇ ಪ್ರತಿಪಾದಿಸುತ್ತಿದೆ. ಶರಣರನ್ನು ಆಯಾ ಜಾತಿಗೆ ಸೀಮಿತಗೊಳಸದೆ ಸಮಾಜದ ಆಸ್ತಿಯನ್ನಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಹಶೀಲ್ದಾರ್ ಸುರೇಶ ಅಂಕಲಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಗಸಭೆ ಅಧ್ಯಕ್ಷೆ ಕವಿತಾ ಎಲಿಗಾರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸೂಗೂರೇಶ ವಾರದ, ಎಪಿಎಂಸಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ, ಪಿಐ ಟಿ.ಆರ್.
ರಾಘವೇಂದ್ರ ವೇದಿಕೆಯಲ್ಲಿದ್ದರು.
ಸಮಾಜದ ಪ್ರಮುಖರಾದ ಶಿವಪ್ಪ ಕಟ್ಟಿಮನಿ, ಮಾನಪ್ಪ ಸೂಗೂರು ವೆಂಕಟೇಶ ಪರಾಶಿ, ಪಾರಪ್ಪ ಗುತ್ತೇದಾರ, ಮಾನಪ್ಪ ಚಳ್ಳಗಿಡ, ವೆಂಕಟರೆಡ್ಡಿ ಬೋವಿ, ಹಿನ್ನಪ್ಪ ತಳವಾರ, ಮಲ್ಲು ಬಿಲ್ಲವ್, ರಮೇಶಗೌಡ, ರಾಮುನಾಯಕ ಅರಳಳ್ಳಿ, ಮಲ್ಲಪ್ಪ ವಗ್ಗಾ, ರವಿ ಗುತ್ತೇದಾರ, ರಾಘವೇಂದ್ರ ಗೋಡೆಕಾರ, ನಾಗರೆಡ್ಡಿ ರತ್ತಾಳ, ಯಲ್ಲಪ್ಪ ರತ್ತಾಳ, ಖಾಲೀದಹ್ಮದ್ ತಾಳಿಕೋಟ ಇದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಹಣಮಂತ ಪೂಜಾರಿ
ನಿರೂಪಿಸಿ, ವಂದಿಸಿದರು.
ಕಾಮಗಾರಿ ವಿಳಂಬವಾದಲ್ಲಿ ಕ್ರಮ ಖಚಿತ: ತಾಲೂಕಿನಲ್ಲಿ ವಿವಿಧ ಭವನಗಳ ಕಾಮಗಾರಿ ಆಮೆಗತಿಯಲ್ಲಿ ನಡೆದಿವೆ. ಚುಣಾವಣೆ ಒಳಗಾಗಿ ಎಲ್ಲಾ ಭವನಗಳ ಕಾಮಗಾರಿ ಪೂರ್ಣಗೊಳಿಸುವಂತೆ ಭೂ ಸೇನಾ ನಿಗಮದ ಅಭಿಯಂತರರಿಗೆ ಮತ್ತು ನಿರ್ದೇಶಕರಿಗೆ ಸೂಚೆನೆ ನೀಡಿದ್ದೇನೆ. ವಿಳಂಬವಾದಲ್ಲಿ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಎಚ್ಚರಿಸಿದ್ದೇನೆ. ಯಾವ ಸಮುದಾಯ ಬಾಂಧವರು ಆತಂಕಗೊಳ್ಳುವ ಅಗತ್ಯವಿಲ್ಲ.
ರಾಜಾ ವೆಂಕಟಪ್ಪ ನಾಯಕ, ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು
Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ
MUST WATCH
ಹೊಸ ಸೇರ್ಪಡೆ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ