ಗುಲಾಮಗಿರಿ ಅಳಿಸಲು ಶ್ರಮಿಸಿದ್ದ ಬಸವಣ್ಣ: ಅಜೇಂದ್ರ ಸ್ವಾಮೀಜಿ
Team Udayavani, Jul 30, 2018, 3:16 PM IST
ಶಹಾಪುರ: ಗುಲಾಮಗಿರಿಗೆ ತುತ್ತಾಗಿ ಮಾನಸಿಕ ಹಿಂಸೆ ಅನುಭವಿಸುತ್ತಿದ್ದ ಅಂದಿನ ಜನ ಸಾಮಾನ್ಯರಲ್ಲಿ ಆತ್ಮ ವಿಶ್ವಾಸ ತುಂಬುವ ಮೂಲಕ ಅವರನ್ನೆಲ್ಲ ಶರಣರನ್ನಾಗಿ ಮಾಡಿದ ಕೀರ್ತಿ ವಿಶ್ವ ಗುರು ಬಸವಣ್ಣನವರಿಗೆ ಸಲ್ಲುತ್ತದೆ ಎಂದು ಏಕದಂಡಗಿ ಮಠದ ಅಜೇಂದ್ರ ಸ್ವಾಮೀಜಿ ಹೇಳಿದರು.
ನಗರದ ಬಸವಮಾರ್ಗ ಪ್ರತಿಷ್ಠಾನ ಸತ್ಯಂಪೇಟೆ ಪ್ರತಿ ತಿಂಗಳು ಹಮ್ಮಿಕೊಳ್ಳುವ ತಿಂಗಳ ಬಸವ ಬೆಳಕು -77ರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶರಣ ಚಳುವಳಿಯಂತ ಸಮಗ್ರ ಚಳುವಳಿ ಜಗತ್ತಿನ ಯಾವ ಮೂಲೆಯಲ್ಲೂ ಇದುವರೆಗೆ ನಡೆದಿಲ್ಲ ಎಂದರು.
ಭಕ್ತ ಮತ್ತು ದೇವರ ಮಧ್ಯೆ ಮಧ್ಯವರ್ತಿಗಳಿದ್ದರು. ದೇವರ ಪೂಜೆ ದಂಧೆಯಾಗಿರುವ ಸಂದರ್ಭದಲ್ಲಿ ಸಜ್ಜಳಾಗಿ,
ಶಾಂತಳಾಗಿ ಪೂಜೆಯನ್ನು ಮಾಡುವುದೆ ಶ್ರೇಷ್ಠ ಎಂದು ಅರುಹಿದವರು ಬಸವಣ್ಣನವರು ಎಂದು ತಿಳಿಸಿದರು.
ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆ ದೇವಸ್ಥಾನದಲ್ಲಿ ಪ್ರವೇಶ ಪಡೆಯಬಹುದು ಎಂಬುದನ್ನು ಇತ್ತೀಚೆಗೆ ಸುಪ್ರಿಂಕೋರ್ಟ್ ತೀರ್ಪು ನೀಡಿದೆ. ಆದರೆ ಹನ್ನೆರಡನೆಯೇ ಶತಮಾನದಲ್ಲಿ ಶರಣರು ಜಾತಿ-ಮತ ಹೆಣ್ಣು-ಗಂಡು ಎಂಬ ಭೇದ ಭಾವ ಇಲ್ಲದೆ ಎಲ್ಲರಿಗೂ ಇಷ್ಟಲಿಂಗ ಪೂಜೆ ಮಾಡಲು ಅವಕಾಶ ಕಲ್ಪಿಸಿದ್ದರು ಎಂದು ಹೇಳಿದರು.
ವೇದಿಕೆ ಮೇಲೆ ಏಕದಂಡಗಿ ಮಠದ ಕಾಳಹಸ್ತೆಂದ್ರ ಸ್ವಾಮೀಜಿ, ಕಾಳಮ್ಮ ಸುಭಾಷ ಕನ್ಯಾಕೋಳೂರು, ಶ್ರೀದೇವಿ ಕನ್ಯಾಕೋಳೂರ ಉಪಸ್ಥಿತರಿದ್ದರು. ಬಸವರಾಜ ಸಿನ್ನೂರ ಸ್ವಾಗತಿಸಿದರು. ಶಿವಣ್ಣ ಇಜೇರಿ ನಿರೂಪಿಸಿದರು.ಸಂಗೀತ ಶಿಕ್ಷಕ ಚಂದ್ರಶೇಖರ ಗೋಗಿ, ಅಲ್ಲಮಪ್ರಭು ಸತ್ಯಂಪೇಟೆ, ಸೃಜನ ಬಿರಾದಾರ ವಚನ ಗಾಯನ ಮಾಡಿದರು. ಕೊನೆಯಲ್ಲಿ ಶಿವರುದ್ರ ಉಳ್ಳಿ ವಂದಿಸಿದರು.
ಸಭೆಯಲ್ಲಿ ಮಾನಪ್ಪ ಹೂಗಾರ, ಶರಣಪ್ಪ ಮುಂಡಾಸ, ಶಿವಯೋಗಪ್ಪ ಮುಡಬೂಳ, ನಿಂಗಣ್ಣ ಮುಡಬೂಳ, ಯಂಕಪ್ಪ ಅಲೆಮನಿ, ವಿಶ್ವನಾಥರೆಡ್ಡಿ ಗೊಂದಡಗಿ, ಭಾರತಿ ಪಾಟೀಲ, ರೇಣುಕಾ ಚಟ್ರಿಕಿ, ಶಶಿಕಲಾ ತುಂಬಗಿ, ಸಂಗಮ್ಮ ಶೆಟ್ಟರ, ಸಂಗಮ್ಮ ಹರನೂರ, ಮಹಾದೇವಪ್ಪ ಗಾಳಿ, ಹೊನ್ನಾರೆಡ್ಡಿ ವಕೀಲರು, ಎಂ.ಬಿ. ನಾಡಗೌಡ, ಶಿವಕುಮಾರ ಕರದಳ್ಳಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ
Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ