ಗುರುಮಠಕಲ್‌ ಪುರಸಭೆ ಆಡಳಿತ ಕೈ ಹಿಡಿದ ಕಾಂಗ್ರೆಸ್‌


Team Udayavani, Sep 4, 2018, 12:02 PM IST

yad-4.jpg

ಗುರುಮಠಕಲ್‌: ಜಿದ್ದಾಜಿದ್ದಿನಲ್ಲಿ ನಡೆದ ಪುರಸಭೆ ಚುನಾವಣೆ ಫಲಿತಾಂಶ ಹೊರಬಿದಿದ್ದು, ಬಹುತೇಕ ಹೊಸಬರಿಗೆ ಜೈಕಾರ ಹಾಕಿ ಹಳೆಯಬರಿಗೆ ಮಣ್ಣುಮುಕ್ಕಿಸಿ ಹೊಸ ಮನ್ವಂತರಕ್ಕೆ ತೆರೆ ಎಳೆದಿರುವ ಘಟನೆಗೆ ಸಾಕ್ಷಿಯಾಗಿ ಗುರುಮಠಕಲ್‌ ಪುರಸಭೆ ಫಲಿತಾಂಶ ಮೂಡಿ ಬಂದಿದೆ.

ವಿಧಾನಸಭೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನು ಗೆಲ್ಲಿಸಿ ಹೊಸಪರ್ವಕ್ಕೆ ನಾಂದಿಹಾಡಿದ ಮತದಾರರು, ಈ ಸಲ ಪುರಸಭೆಗೆ ಮಾತ್ರ ಕಾಂಗ್ರೆಸ್‌ಗೆ ಕೈ ಎತ್ತಿ ಸುಲಭವಾಗಿ ಪಟ್ಟ ಅಲಂಕರಿಸಿ ಜಾಣ ನಡೆ ತೋರಿದ್ದಾರೆ.

ಪುರಸಭೆ ಚುನಾವಣೆ ಇರುವ ಹೊತ್ತಿನಲ್ಲಿ ಮಾಜಿ ಶಾಸಕ ಬಾಬುರಾವ್‌ ಚಿಂಚನಸೂರ ಬಿಜೆಪಿ ಸೇರ್ಪಡೆ ತಕ್ಷಣ ಇಲ್ಲಿನ ಬಿಜೆಪಿ ನಾಯಕರು ತೆರೆಮೆರೆ ಸರಿದು ಆ ಪಕ್ಷಕ್ಕೆ ಅನೆಬಲ ಬರುವ ಬದಲು ನಾಯಕತ್ವದ ಶೂನ್ಯ ಅವರಿಸಿಕೊಂಡಿತು. ಶಾಸಕ ನಾಗನಗೌಡ ಹಾಗೂ ಕಾಂಗ್ರೆಸ್‌ ವಿಧಾನಸಭೆ ಭಾವಿ ಟಿಕೆಟ್‌ ಆಕಾಂಕ್ಷಿ ಎಂದೇ ಬಿಂಬಿತರಾಗಿರುವ ಬಸರೆಡ್ಡಿ ಅನಪುರ ಮಧ್ಯ ಪೈಪೋಟಿ ನಡೆಯಿತು ಎನ್ನಬಹುದು.

ಆಡಳಿತ ಪಕ್ಷ ಪುರಸಭೆ ಗದ್ದುಗೆ ವಶಪಡಿಸಿಕೊಳ್ಳುವುದರಲ್ಲಿ ಸಂಪೂರ್ಣ ವಿಫಲವಾಯಿತು. ಮತ್ತು ಸಮಸ್ಯೆಗೆ ಸ್ಪಂದಿಸದ
ದರ್ಪದಿಂದ ನಡೆದ ಹಳೇ ಪುರಸಭೆ ಸದಸ್ಯರನ್ನು ಒಬ್ಬರನ್ನು ಬಿಟ್ಟು ಎಲ್ಲರನ್ನು ಮನೆಗೆ ಕಳಿಸಿ ಮತದಾರ ತನ್ನ ಮತದಾನದ ಶಕ್ತಿಯ ಅಸ್ತ್ರವನ್ನು ಉಪಯೋಗಿಸಿಕೊಂಡಿದ್ದಾನೆ.
 
ಒಟ್ಟು 23 ಸ್ಥಾನಗಳನ್ನು ಹೊಂದಿರುವ ಪುರಸಭೆಯಲ್ಲಿ ಕಾಂಗ್ರೆಸ್‌ ಪಕ್ಷವು 12 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಇನ್ನು ಆಡಳಿತರೂಡ ಜೆಡಿಎಸ್‌ ಪಕ್ಷ 8 ಸ್ಥಾನಗಳು ಬಿಜೆಪಿ ಪಕ್ಷ 2 ಸ್ಥಾನಗಳಲ್ಲಿ ಪಕ್ಷೇತರರಾಗಿ ಒಬ್ಬರು ಆಯ್ಕೆಯಾಗಿದ್ದು, ಇಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಕಾಂಗ್ರೆಸ್‌ ಪಕ್ಷಕ್ಕೆ ಸಂಪೂರ್ಣವಾದ ಬಹುಮತವನ್ನು ಕಾಂಗ್ರೆಸ್‌ ಪಕ್ಷ ಪಡೆದಿದೆ. 

ಒಂದೇ ಕುಟುಂಬವರು ಇಬ್ಬರ ಗೆಲುವು: ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್‌ ಪಕ್ಷದಿಂದ ತಾಯಿ-ಮಗ ಹಾಗೂ ಜೆಡಿಎಸ್‌ ಪಕ್ಷದಿಂದ ಭಾವ-ಸೊಸೆ ಗೆಲುವು ಸಾಧಿಸಿದ್ದಾರೆ. 7ನೇ ವಾರ್ಡ್‌ನಲ್ಲಿ ಮಗ ಅನ್ವರ್‌ ಪಾಶಾ ಹಾಗೂ 21ನೇ ವಾರ್ಡಿನಲ್ಲಿ ತಾಯಿ ಮೈಲಾನಭೀ ಗೆದ್ದರೇ 6ನೇ ವಾರ್ಡಿನಲ್ಲಿ ಭಾವ ನವಾಜರೆಡ್ಡಿ ಪಾಟೀಲ 11ನೇ ವಾರ್ಡಿನಲ್ಲಿ ಸೊಸೆ ಜಯಶ್ರೀ ರೆಡ್ಡಿ ಗೆಲುವು ಪಡೆದು ಸಂಭ್ರಮಿಸಿದ್ದಾರೆ.
 
ಹ್ಯಾಟ್ರಿಕ್‌ ಗೆಲುವು: ಗುರುಮಠಕಲ್‌ ಪುರಸಭೆಯಲ್ಲಿ ಹ್ಯಾಟ್ರಿಕ್‌ ಗೆಲುವು ಪಡೆದ ಇತಿಹಾಸವೇ ಇಲ್ಲ. ಪ್ರಸ್ತುತ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನವಿತಾ ಲಾಲಪ್ಪ ಹ್ಯಾಟ್ರಿಕ್‌ ಗೆಲುವು ತಮ್ಮದಾಗಿಸಿಕೊಳ್ಳುವುದರ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಅಷ್ಟೇ ಅಲ್ಲ, ಕಳೆದ 17 ಪುರಸಭೆ ಸದಸ್ಯರಲ್ಲಿ ಇವರೊಬ್ಬರೇ ಗೆಲುವು ಸಾಧಿಸಿದ್ದಾರೆ.

 ಆಡಳಿತ ಪಕ್ಷದ ವಿಫಲತೆ: ಕಳೆದ 5 ದಶಕಗಳಿಂದ ಗುರುಮಠಕಲ್‌ ಮತಕ್ಷೇತ್ರವು ಕಾಂಗ್ರೆಸ್‌ ಪಕ್ಷದ ಅಧಿಧೀನದಲ್ಲಿದ್ದು, ಈಚೆಗೆ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಬದಲಾವಣೆ ಬಯಸಿದ್ದ ಮತದಾರರು ಜೆಡಿಎಸ್‌ಗೆ ಜೈಕಾರ ಹಾಕಿದ್ದರು. ಆದರೆ ಪುರಸಭೆ ಚುನಾವಣೆಯಲ್ಲಿ ಮಾತ್ರ ಆಡಳಿತ ಪಕ್ಷ ಜೆಡಿಎಸ್‌ಗೆ ಜೈಕಾರ ಹಾಕಿಲ್ಲ, ಕೇವಲ 8 ಸ್ಥಾನಗಳನ್ನು ಪಡೆದು ಪುರಸಭೆ ಗದ್ದುಗೆ ಉಳಿಸಿಕೊಳ್ಳುವಲ್ಲಿ ಎಡವಿದೆ. ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಒಗ್ಗಟ್ಟು ಆಗಿ 12 ಸ್ಥಾನಗಳನ್ನು ಪಡೆದು ಪುರಸಭೆ ಗದ್ದುಗೆ ಉಳಿಸಿಕೊಂಡು ವಿಧಾನಸಭೆಯಲ್ಲಿ ಆಗಿದ್ದ ಸೋಲಿನ ಸೇಡನ್ನು ತೀರಿಸಿಕೊಂಡು ಕಾಂಗ್ರೆಸ್‌ ಮತ್ತೆ ಶಕ್ತಿ ಪ್ರದರ್ಶಿಸಿದೆ. 

ಮೊಗುಲಪ್ಪ ಬಿ. ನಾಯಕಿನ್‌

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು

Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು

Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ

Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ

Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ‌ ಕಂದಕೂರು

Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ‌ ಕಂದಕೂರು

Attempt to stop Vande Bharat train: Ka.ra.ve activists arrested

Yadagiri; ವಂದೇ ಭಾರತ್ ರೈಲು ತಡೆಯಲು ಯತ್ನ: ಕರವೇ ಕಾರ್ಯಕರ್ತರ ಬಂಧನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.