ಸಂಭ್ರಮದ ಮಲ್ಲಯ್ಯನ ಬಂಡಿ ಉತ್ಸವ
Team Udayavani, Oct 23, 2018, 4:14 PM IST
ಕೆಂಭಾವಿ: ಪಟ್ಟಣದಲ್ಲಿ ದಸರಾ ಮಹೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು. ಸಂಪ್ರದಾಯದಂತೆ ಪಟ್ಟಣದ ಮಾಲಿಗೌಡರು, ಪೊಲೀಸ್ಗೌಡರು, ಕುಲಕರ್ಣಿ ಹಾಗೂ ಜೋಶಿ ಮನೆತನದ ಪ್ರಮುಖರು ಸೇರಿದಂತೆ ಪಟ್ಟಣದ ಜನತೆ ಭೋಗೇಶ್ವರ ದೇವಸ್ಥಾನದಲ್ಲಿ ಬನ್ನಿ
ಮರಕ್ಕೆ ಪೂಜೆ ಸಲ್ಲಿಸಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು.
ಐತಿಹಾಸಿಕ ಜಾತ್ರೆ: ಐತಿಹಾಸಿಕ ಮಲ್ಲಯ್ಯನ ಬಂಡಿ ಉತ್ಸವ ಶನಿವಾರ ಪಟ್ಟಣದಲ್ಲಿ ಜಸಾಗರದ ಮಧ್ಯೆ ವಿಜೃಂಭಣೆಯಿಂದ ನಡೆಯಿತು. ಸಿಂಗರಿಸಿದ್ದ ರಥದಲ್ಲಿ ಕೂಡಿಸಿದ ಮಲ್ಲಯ್ಯ ದೇವರ ಬಂಡಿಯನ್ನು ಯುವಕರು ಎಳೆಯುವ ಮೂಲಕ ಉತ್ಸವಕ್ಕೆ ಮೆರಗು ನೀಡಿದರು.
ಮಲ್ಲಯ್ಯನ ಬಂಡಿ ಜಾತ್ರೆಯ ಅಂಗವಾಗಿ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಪಂದ್ಯಾವಳಿಯನ್ನು ಪಿಎಸ್ಐ ಅಜೀತಕುಮಾರ, ಉದ್ಯಮಿ ಶಿವಶರಣಪ್ಪ ಸೊನ್ನದ ಹಾಗೂ ಕಾಳಪ್ಪ ಪತ್ತಾರ ಉದ್ಘಾಟಿಸಿದರು. ಕುಸ್ತಿ ಪಂದ್ಯಾವಳಿಯಲ್ಲಿ ಪಟ್ಟಣ ಸೇರಿದಂತೆ ಸುತ್ತಮತ್ತಲಿನ ಗ್ರಾಮದ ಕುಸ್ತಿ ಪಟುಗಳಲ್ಲದೇ, ಕಲಬುರಗಿ, ವಿಜಯಪುರ, ಸೋಲಾಪುರ ಜಿಲ್ಲೆಯ ನೂರಾರು ಕುಸ್ತಿಪಟುಗಳು ಭಾಗವಹಿಸಿ ಪಟ್ಟಣದ ಜನರಿಗೆ ಕುಸ್ತಿ ಪಂದ್ಯಗಳ ಸವಿರುಚಿ ಉಣ ಬಡಿಸಿದರು.
ಅರುಣೋದಯ ಸೊನ್ನದ, ಮಲಕನಗೌಡ ಪೊಲೀಸ್ ಪಾಟೀಲ, ದೇವಿಂದ್ರಪ್ಪ ಜಾಲಿಬೆಂಚಿ, ಸುಭಾಸ ಮ್ಯಾಗೇರಿ, ಚನ್ನಯ್ಯಸ್ವಾಮಿ ಚಿಕ್ಕಮಠ, ಮೋಹನರೆಡ್ಡಿ ಡಿಗ್ಗಾವಿ, ಶಿವಪುತ್ರಪ್ಪ ಸೊನ್ನದ, ಶರಣಪ್ಪ ಗುಗ್ಗರಿ, ಗುರುಮೂರ್ತಿ ಪತ್ತಾರ, ಈರಣ್ಣ ಸೊನ್ನದ, ಪ್ರಭು ಅಂಗಡಿ, ಪ್ರಕಾಶ ಸೊನ್ನದ, ರಮೇಶ ಸೊನ್ನದ, ಶರಣಪ್ಪ ನಗನೂರ, ಸಂಗಣ್ಣ ತುಂಬಗಿ, ನಾಗರಾಜ ಮಾಲಗತ್ತಿ, ಮಹಿಪಾಲರೆಡ್ಡಿ ಡಿಗ್ಗಾವಿ, ವಿಶ್ವನಾಥ ಲೋಣಿ, ಮಲ್ಲನಗೌಡ ಪಾಟೀಲ, ಮಲ್ಲು ಸೊನ್ನದ, ರೆಹಮಾನ ಪಟೇಲ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು
Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ
Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ ಕಂದಕೂರು
Yadagiri; ವಂದೇ ಭಾರತ್ ರೈಲು ತಡೆಯಲು ಯತ್ನ: ಕರವೇ ಕಾರ್ಯಕರ್ತರ ಬಂಧನ
CHC; ದಿಢೀರ್ ಭೇಟಿ ನೀಡಿ ಸಿಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಕಂದಕೂರ
MUST WATCH
ಹೊಸ ಸೇರ್ಪಡೆ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು