ಹುಣಸಗಿ: ಎಡದಂಡೆ ಮುಖ್ಯ ಕಾಲುವೆಗೆ ಇಂದು ನೀರು ಬಿಡುಗಡೆ
Team Udayavani, Nov 18, 2018, 4:28 PM IST
ಹುಣಸಗಿ: ಕಳೆದ ಐದು ದಿನಗಳ ಹಿಂದೆ ಕುಸಿತಗೊಂಡಿದ್ದ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆ ತಾತ್ಕಾಲಿಕ ದುರಸ್ತಿ ಕಾರ್ಯ ಮುಕ್ತಾಯದ ಹಂತದಲ್ಲಿದ್ದು, ರವಿವಾರ ಸಂಜೆಯಿಂದಲೇ ಮುಖ್ಯ ಕಾಲುವೆಗೆ ನೀರು ಹರಿಸಲು ಅಧಿಕಾರಿಗಳೊಂದಿಗೆ ಮಾತನಾಡಿರು ವುದಾಗಿ ಶಾಸಕ ರಾಜುಗೌಡ ತಿಳಿಸಿದರು.
ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಬೆಳೆಗೆ ಇನ್ನೂ ಒಂದು ವಾರ ನೀರಿನ ಅಗತ್ಯವಿದೆ. ಆದರೆ ಎಡದಂಡೆ ಮುಖ್ಯ ಕಾಲುವೆ ಅಗ್ನಿ ಗ್ರಾಮದ ಬಳಿ 62ನೇ ಕಿಮೀಯಲ್ಲಿ ಕುಸಿತವಾ ಗಿದ್ದರಿಂದ ಕಾಲುವೆಗೆ ನೀರುಹರಿಸಲು ತೊಂದರೆಯಾಗಿತ್ತು. ಆದರೆ ಅಧಿಕಾರಿಗಳು ಸಮರೋಪಾದಿಯಲ್ಲಿ ತುರ್ತು ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.
ಆದ್ದರಿಂದ ನಾರಾಯಣಪುರ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ರೈತರಿಗೆ ಹರಿಸಲು ಕ್ರಮ ಕೈಗೊಳ್ಳಲಾಗಿದೆ. ಕೇವಲ ನಾಲ್ಕೈದು ದಿನಗಳವರೆಗೆ ನೀರು ಹರಿಸದರೇ ಮಾತ್ರ ಭತ್ತ ಬೆಳೆ ರೈತರ ಕೈಗೆ ಬರುತ್ತದೆ. ರೈತರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು
Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ