ಕನಕ ಭವನ ನಿರ್ಮಾಣಕ್ಕೆ 50 ಲಕ್ಷ ನೆರವು: ಕಂದಕೂರ
Team Udayavani, Nov 27, 2018, 2:28 PM IST
ಸೈದಾಪುರ: ಹಾಲಿನಂತೆ ಪಾವಿತ್ರ್ಯತೆಯುಳ್ಳ ಹಾಲುಮತ ಸಮಾಜದ ಋಣ ತಮ್ಮ ಮೇಲಿದ್ದು, ಸೈದಾಪುರ ಪಟ್ಟಣದಲ್ಲಿ ಕನಕ ಭವನ ನಿರ್ಮಾಣಕ್ಕೆ ಶಾಸಕರ ಮನವೊಲಿಸಿ 50 ಲಕ್ಷ ರೂಪಾಯಿ ನೀಡುವುದಾಗಿ ಜೆಡಿಎಸ್ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಶರಣಗೌಡ ಕಂದಕೂರ ಭರವಸೆ ನೀಡಿದರು.
ಇಲ್ಲಿನ ಪ್ರಭುಲಿಂಗ ವಾರದ್ ಲೇ ಔಟ್ನಲ್ಲಿ ಭಕ್ತ ಕನಕದಾಸರ 531ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಮಾಜದ ಅಭಿವೃದ್ಧಿಗೆ ತಾವು ಕಂಕಣ ಬದ್ಧರಾಗಿದ್ದು, ಯಾವುದೇ ಸಮಸ್ಯೆಗಳಿರಲಿ ಗಮನಕ್ಕೆ ತಂದಲ್ಲಿ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಮುಂದಿನ ವರ್ಷದಿಂದ ಹಾಲುಮತ ಸಮಾಜದ ಮುಖಂಡರು ಸಾಧ್ಯವಾದಷ್ಟು ಬಡ ಕುಟುಂಬಗಳನ್ನು ಗುರುತಿಸಿ ಅವರ ಆರ್ಥಿಕ, ಶೈಕ್ಷಣಿಕ ಹಾಗೂ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗೋಣ, ಕನಕದಾಸರ ಜಯಂತ್ಯುತ್ಸವದ ಮೂಲಕ ಅವರ ಜೀವನಾದರ್ಶಗಳನ್ನು ಪಾಲಿಸುವ ಮೂಲಕ ಮುಂದಿನ ದಿನಗಳಲ್ಲಿ ಉತ್ತಮ ಶಿಕ್ಷಣ ಪಡೆದು ಪ್ರತಿ ಮನೆಯಿಂದ ಕನಕದಾಸರು ಹುಟ್ಟಿ ಬರಲಿ ಎಂದು ಆಶಿಸಿದರು. ಕನಕದಾಸರು ಕೇವಲ ಹಾಲುಮತ ಸಮಾಜಕ್ಕೆ ಮಾತ್ರವಲ್ಲದೆ ಮಾನವ ಕುಲಕ್ಕೆ ಮಾದರಿ ಎಂದರು.
ಪ್ರತಿಭಾವಂತ ವಿದ್ಯಾರ್ಥಿ ಹಾಗೂ ನೂತನವಾಗಿ ಸರಕಾರಿ ನೌಕರಿ ಪಡೆದ ಹಾಲುಮತ ಸಮಾಜದ ಸಾಧಕರನ್ನು ಸನ್ಮಾನಿಸಲಾಯಿತು. ಹಂದರಿಕಿ ಭೋಜಲಿಂಗೇಶ್ವರ ಮಠದ ಲಿಂಗಪ್ಪ ತಾತನವರು ಸಾನ್ನಿಧ್ಯ ವಹಿಸಿದ್ದರು. ಪರಮೇಶ ವಾರದ ಅಧ್ಯಕ್ಷತೆ ವಹಿಸಿದ್ದರು. ಶಿವುಕುಮಾರ ಮುನಗಾಲ ಪ್ರಾಸ್ತಾವಿಕ ಮಾತನಾಡಿದರು. ಶ್ರೀಶೈಲ ಪೂಜಾರಿ ಉಪನ್ಯಾಸ ನೀಡಿದರು.
ಹಾಲುಮತ ಸಮಾಜದ ಜಿಲ್ಲಾಧ್ಯಕ್ಷ ವಿಶ್ವನಾಥ ನೀಲಹಳ್ಳಿ, ಚಂದ್ರಶೇಖರ ವಾರದ, ಪ್ರಭುಲಿಂಗ ವಾರದ, ತಾಪಂ ಉಪಾಧ್ಯಕ್ಷೆ ರಾಮಲಿಂಗಮ್ಮ ಕವಡೆ, ಸಿದ್ದಪ್ಪ ಕಡೇಚೂರ, ಸಣ್ಣ ಭೀಮಶಪ್ಪ ಜೇಗರ್, ಶೇಷಪ್ಪ ಜೇಗರ್, ಶಾಮಲಾ ವಾರದ, ಹೊನ್ನಪ್ಪ ಮುಷ್ಟೂರ, ಜೆಡಿಎಸ್ ಪಕ್ಷದ ಸೈದಾಪುರ ವಲಯ ಅಧ್ಯಕ್ಷ ಸುದರ್ಶನ ಜೈಗ್ರಾಂ, ಗ್ರಾಪಂ ಅಧ್ಯಕ್ಷೆ ರಾಮಲಿಂಗಮ್ಮ ಬಾಲಚೇಡ, ಸಾಯಿಬಣ್ಣ ಎಎಸ್ಐ, ವೆಂಕಣ್ಣ ಮೇಟಿ, ದೇವೆಂದ್ರಪ್ಪ ಮುನಮುಟಗಿ ಸೇರಿದಂತೆ ಮುಂತಾದವರಿದ್ದರು. ಅರುಣಕುಮಾರ ಜೇಗರ ಸ್ವಾಗತಿಸಿದರು. ಸಿದ್ದು ಪೂಜಾರಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು
Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ
MUST WATCH
ಹೊಸ ಸೇರ್ಪಡೆ
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ
Vote ಮಾಡದಿದ್ದರೆ ಬ್ಯಾಂಕ್ ಖಾತೆಯಿಂದ 350 ರೂ. ಕಡಿತ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್ ವಿರುದ್ಧ ಮುಖಾಮುಖಿ
ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ