ಗಡೇ ದುರ್ಗಮ್ಮ ಭಾವಚಿತ್ರ ದೇವಿ ಪುರಾಣ ಗ್ರಂಥ ಮೆರವಣಿಗ
Team Udayavani, Dec 1, 2018, 1:34 PM IST
ಸುರಪುರ: ನಗರದ ಕಬಾಡಗೇರಾ ಹತ್ತಿರದ ಗಡೇ ದುರ್ಗಮ್ಮ ದೇವಿ ಭಾವಚಿತ್ರ ಮತ್ತು ದೇವಿ ಪುರಾಣ ಗ್ರಂಥದ ಮೆರವಣಿಗೆ
ಶುಕ್ರವಾರ ನಗರದಲ್ಲಿ ಸಂಭ್ರಮದಿಂದ ಜರುಗಿತು. ಪೂರ್ಣ ಕುಂಭ ಕಳಸ ಹೊತ್ತ ನೂರಾರು ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕಾರ್ತಿಕೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ನ. 20ರಿಂದ ದೇವಿ ಪುರಾಣ ಆಯೋಜಿಸಲಾಗಿತ್ತು. ಕಳೆದ ಒಂಬತ್ತು ದಿನಗಳಿಂದ ಪ್ರವಚನಕಾರ ರಮೇಶ ಯಾಳಗಿ ಪುರಾಣ ಪ್ರವಚನ ನಡೆಸಿಕೊಟ್ಟಿದ್ದರು. ಶುಕ್ರವಾರ ಪುರಾಣ ಮಂಗಲೋತ್ಸವ ಅಂಗವಾಗಿ ಮೆರವಣಿಗೆ ಏರ್ಪಡಿಸಲಾಗಿತ್ತು.
ದೇವಸ್ಥಾನ ಪ್ರಾಂಗಣದಿಂದ ಹೊರಟ ಮೆರವಣಿಗೆ ಅರಮನೆ ಮಾರ್ಗವಾಗಿ ಭಾಜಾ ಭಜಂತ್ರಿ ಡೊಳ್ಳಿನೊಂದಿಗೆ ನಗರದ ವೇಣೂಗೋಪಾಲ ಸ್ವಾಮಿ ದೇವಸ್ಥಾನದವರೆಗೆ ಮೆರವಣಿಗೆ ಜರುಗಿತು. ಮಾರ್ಗದ ಉದ್ದಕ್ಕೂ ಭಕ್ತರು ಮನೆ ಮುಂದೆ ಚಿತ್ತಾರದ ರಂಗೋಲಿ ಬಿಡಿಸಿ ದೇವಿಗೆ ಸ್ವಾಗತ ಕೋರಿದರು.
ನಂತರ ದೇವಸ್ಥಾನದಲ್ಲಿ ಸಮಂಗಲಿಯರಿಗೆ ಉಡಿ ತುಂಬುವುದು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ. ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಪುಷ್ಪಾರ್ಚನೆ, ದೇವಿ ಅಷ್ಟೋತ್ತರ ಪಾರಾಯಣ ಹಾಗೂ ನಂತರ ಮಹಾ ಪ್ರಸಾದ ನರವೇರಿತು.
ದೇವಸ್ಥಾನ ಅರ್ಚಕ ಛತ್ರಪ್ಪ ಪೂಜಾರಿ, ಕಮಿಟಿ ಅಧ್ಯಕ್ಷ ರತ್ನಾಕರ ಜಗತಾಪ, ಹುಲಗಪ್ಪ ಕಲಬುರಗಿ, ರತನಸಿಂಗ ಠಾಕೂರ, ಮರೆಪ್ಪ ಮಾಸ್ಟರ್ ದಾಯಿ, ಮಾಳಪ್ಪ ಕವಡಿಮಟ್ಟಿ, ಬಸಪ್ಪ ಗುಡಿಹಾಳ, ಸತ್ಯಪ್ಪ ಗುಡಿಹಾಳ, ಭೀಮಣ್ಣ ಕುಲಕರ್ಣಿ, ಕಾಶಪ್ಪ ದೊರೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು
Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ
MUST WATCH
ಹೊಸ ಸೇರ್ಪಡೆ
O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ