ಬೆಳೆಗೆ ಸೈನಿಕ ಹುಳುವಿನ ಬಾಧೆ
Team Udayavani, Dec 9, 2018, 1:22 PM IST
ಶಹಾಪುರ: ಕೃಷಿ ವಿಸ್ತೀರ್ಣ ಸಿಬ್ಬಂದಿ ತಾಲೂಕಿನ ದೋರನಹಳ್ಳಿ ಮತ್ತು ಗೋಗಿ ಗ್ರಾಮದ ಹಲವು ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಸೈನಿಕ ಹುಳುವಿನ ಕಾಟದಿಂದ ಜೋಳ, ಮುಸುಕಿನ ಜೋಳ, ಗೋಧಿ ಮತ್ತು ಭತ್ತದ ಬೆಳೆ ಹಾನಿಗೊಳಗಾದ ಕುರಿತು ಮಾಹಿತಿ ನೀಡಿದ್ದಾರೆ. ಅಮೇರಿಕಾದಿಂದ ಆರ್ಮಿ ವರ್ಮ ಅಂದರೆ ಸೈನಿಕ ಎಂಬ ಹೆಸರಿನ ಒಂದು ಹುಳು ದೇಶಕ್ಕೆ ನುಗ್ಗಿದೆ. ಇದು ಮೊಟ್ಟ ಮೊದಲ ಬಾರಿಗೆ ರಾಜ್ಯದ ಶಿವಮೊಗ್ಗದಲ್ಲಿ ಮೇ. 2018ರಂದು ಕಂಡು ಬಂದಿರುವ ಬಗ್ಗೆ ವರದಿಯಾಗಿತ್ತು.
ಪ್ರಸ್ತುತ ಆ ಹುಳು ಇತರೆ ಜಿಲ್ಲೆಗಳಿಗೂ ಬಂದಿದೆ. ಈ ಹುಳುವಿನಿಂದ ಬಹು ಬೆಳೆಗಳಿಗೆ ಹಾನಿ ಉಂಟಾಗುತ್ತಿದೆ. ಶೇ. 80ರಷ್ಟು ಬೆಳೆಗಳು ಹಾನಿಯಾಗುತ್ತಿದೆ.
ಮುಖ್ಯವಾಗಿ ಮುಸಕಿನ ಜೋಳ, ಭತ್ತ, ಗೋದಿ ಮತ್ತು ಕಬ್ಬು ಈ ಬೆಳೆಗಳಲ್ಲಿ ಸೈನಿಕ ಹುಳು ಬಾಧೆ ಉಂಟು ಮಾಡುತ್ತಿದೆ. ಪ್ರಸ್ತುತ ಈ ಹುಳು ಯಾದಗಿರಿ ಜಿಲ್ಲೆಗೂ ಬಂದಿದೆ ಎಂದು ಭೀಮರಾಯನ ಗುಡಿಯಲ್ಲಿರುವ ಕೃಷಿ ವಿಸ್ತೀರ್ಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ತಿಳಿಸಿದ್ದಾರೆ.
ಸೈನಿಕ ಹುಳು ಇದಕ್ಕೆ ಆಂಗ್ಲ ಭಾಷೆಯಲ್ಲಿ ಆರ್ಮಿ ವರ್ಮ ಎನ್ನುತ್ತಾರೆ. ಇದು ಅಮೇರಿಕದ ಸ್ಥಳೀಯ ಹುಳುವಾಗಿದ್ದು, ಪ್ರಪಂಚದ ಎಲ್ಲ ದೇಶಗಳಿಗೆ ಪಸರಿಸಿಕೊಂಡಿದೆ. ನಮ್ಮ ದೇಶಕ್ಕೂ ವಲಸೆ ಬಂದಿದೆ.
ಪ್ರೌಢ ಕೀಟವು ಪ್ರತಿ ರಾತ್ರಿ 100 ಕೀ.ಮೀಟರ್ ದೂರ ಕ್ರಮಿಸುತ್ತದೆ, ತನ್ನ ಜೀವನಕಾಲದಲ್ಲಿ 2000 ಕೀ.ಮೀಟರ್ ದೂರ ಕ್ರಮಿಸುತ್ತದೆ. ಈಗ ನಮ್ಮ ಯಾದಗಿರಿ ಜಿಲ್ಲೆಯಲ್ಲಿ ಹಿಂಗಾರಿ ಜೋಳದ ಎಲ್ಲ ಪ್ರದೇಶಗಳಲ್ಲಿ ಕಂಡು ಬರುತ್ತಿದೆ. ರೈತರು ಬೆಳೆ ಹಾನಿ ತಡೆಗೆ ಚಿಂತಿತರಾಗಿದ್ದಾರೆ.
ಸೈನಿಕ ಎಂಬ ಅಮೇರಿಕ ಮೂಲದ ಹುಳು ಪ್ರಸ್ತುತ ಯಾದಗಿರಿ ಜಿಲ್ಲೆಗೂ ಆಗಮಿಸಿದ್ದು, ಬೆಳೆಗಳಿಗೆ ಮಾರಕವಾಗಿದೆ. ಜೋಳದ ಸುಳಿಯಲ್ಲಿ ಬಾಧೆ. ಗೋಗಿ, ದೋರನಹಳ್ಳಿ ಗ್ರಾಮದಲ್ಲಿಯೂ ಕ್ಷೇತ್ರ ವೀಕ್ಷಣೆ ನಡೆಸಿದ್ದು, ಇಲ್ಲಿಯೂ ಈ ಹುಳುವಿನಿಂದ ಬಾಧೆ ಕಂಡು ಬಂದಿದೆ. ರೈತರು ಎಚ್ಚರಿಕೆ ವಹಿಸಿ ನಿರ್ವಹಣೆ ಮಾಡಬೇಕು. ಶಿವಾನಂದ ಹೊನ್ನಾಳಿ, ವಿಸ್ತರಣಾ ಮುಂದಾಳು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಭಿಮರಾಯನಗುಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು
Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ
Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ ಕಂದಕೂರು
Yadagiri; ವಂದೇ ಭಾರತ್ ರೈಲು ತಡೆಯಲು ಯತ್ನ: ಕರವೇ ಕಾರ್ಯಕರ್ತರ ಬಂಧನ
MUST WATCH
ಹೊಸ ಸೇರ್ಪಡೆ
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ