ಎಸ್‌ಎಸ್‌ಎಲ್‌ಸಿ ಬಳಿಕ?


Team Udayavani, Jun 15, 2018, 6:00 AM IST

bb-15.jpg

ಎಸ್‌ಎಸ್‌ಎಲ್‌ಸಿ ಮುಗಿದಾಯಿತು. ಇನ್ನೇನಿದ್ದರೂ ಕಾಲೇಜು. ಈಗಂತೂ ತಮ್ಮ ಸ್ನೇಹಿತರು ಯಾವ ಕಾಲೇಜಿಗೆ ಸೇರುತ್ತಾರೊ ಅದೇ ಕಾಲೇಜಿಗೆ ಸೇರುವುದು ರೂಢಿಯಾಗಿ ಬಿಟ್ಟಿದೆ. ಆದರೆ, ಯಾವ ವಿಭಾಗಕ್ಕೆ ಹೋಗೋದು ಎಂಬ ಪ್ರಶ್ನೆ ಎಲ್ಲರಲ್ಲಿಯೂ. ವಿಜ್ಞಾನವೇ, ವಾಣಿಜ್ಯವೇ ಅಥವಾ ಕಲಾ ವಿಭಾಗವೇ ಎಂದು. ಪರೀಕ್ಷೆ ಮುಗಿದ ಆ ಎರಡು ತಿಂಗಳನ್ನು “ಕನ್‌ಫ್ಯೂಶನ್‌ ಮಂತ್‌’ ಎಂದೇ ಹೇಳಬಹುದು. ವಿಜ್ಞಾನವನ್ನೇ ಆರಿಸುತ್ತೇನೆ ಎಂದು ನಿರ್ಧರಿಸಿದ್ದ ನನಗೆ ಕೆಲವರು, “”ವಾಣಿಜ್ಯದಲ್ಲಿ ಒಳ್ಳೆ ಸ್ಕೋಪ್‌ ಇದೆ” ಎಂದಾಗ ಮನಸ್ಸು ಬದಲಾಗುತ್ತಿತ್ತು. ಇನ್ನು ಕೆಲವರು ಕಲಾ ವಿಭಾಗದಲ್ಲಿರುವ ಆಯ್ಕೆಗಳ ಬಗ್ಗೆ ವಿವರಿಸಿದಾಗ ಅದರ ಕಡೆಯೂ ಆಸಕ್ತಿ ಮೂಡಿದ್ದುಂಟು.

ಕೆಲವರು ಎಸ್‌ಎಸ್‌ಎಲ್‌ಸಿ ತನಕ ಡಾಕ್ಟರ್‌ ಆಗಬೇಕು ಅನ್ನುತ್ತಿದ್ದವರು ಜೀವಶಾಸ್ತ್ರವೇ ಬೇಡ ಎಂದದ್ದೂ ಇದೆ. ಹಾಗೆಯೇ ಇಂಜಿನಿಯರಿಂಗ್‌ ಕನಸನ್ನು ಬಿಟ್ಟು ಡಾಕ್ಟರ್‌ ಆಗಬೇಕೆಂಬ ಕನಸು ಕಂಡದ್ದೂ ಇದೆ. ಒಂದು ವೇಳೆ ನಿಮ್ಮ ಅಕ್ಕ ಅಧ್ಯಾಪಕರಾದರೆ, “ಟೀಚಿಂಗ್‌ ಪ್ರೊಫೆಶನ್‌ ಬೆಸ್ಟ್‌’ ಎಂದು, ಅಥವಾ ನಿಮ್ಮ ಮಾವ ಸಿ.ಎ. ಆದರೆ  “ಈಗ ಕಾಮರ್ಸ್‌ಗೆ ತುಂಬಾ ಡಿಮ್ಯಾಂಡ್‌ ಇರೋದು’ ಎನ್ನುವರು. ಕೆಲವರು “ನಿಮ್ಮ ಮಗಳನ್ನು ಡಾಕ್ಟರ್‌ ಮಾಡ್ಸಿ’ ಎಂದರೆ, ಕೆಲವರು “ವಿಜ್ಞಾನ ತುಂಬಾ ಕಷ್ಟವಾಗುತ್ತದೆ’ ಎಂದು ನನ್ನ ಅಮ್ಮನ ಬಳಿ ಹೇಳಿದರು. ಹೀಗೆ ಎರಡು ತಿಂಗಳು ಅವರಿವರ ಮಾತು ಕೇಳಿ, ಮನಸ್ಸು ಚಕ್ರದಂತೆ ಒಂದು ಸುತ್ತು ತಿರುಗಿದರೂ ಕೊನೆಗೆ ವಿಜ್ಞಾನವನ್ನೇ ಆರಿಸುತ್ತೇನೆ ಎಂಬ ದೃಢ ನಿರ್ಧಾರಕ್ಕೆ ಬಂದೆ.

ನಮಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದನ್ನೇ ಆರಿಸುವುದು ಸೂಕ್ತ. ಆದರೆ ಒಂದನ್ನು ಆರಿಸಿದ ನಂತರ ಪಶ್ಚಾತ್ತಾಪ ಪಟ್ಟರೆ ಅದರಿಂದ ಯಾವುದೇ ಪ್ರಯೋಜನವಿಲ್ಲ.
 
ಖುಷಿ, ಪ್ರಥಮ ಪಿಯುಸಿ, ಗೋವಿಂದದಾಸ ಪಿಯು ಕಾಲೇಜು, ಸುರತ್ಕಲ್‌

ಟಾಪ್ ನ್ಯೂಸ್

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೆಟಿಯಾದ ಜಗದೀಶ್ ಶೆಟ್ಟರ್

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.