ಎಸ್ಎಸ್ಎಲ್ಸಿ ಬಳಿಕ?
Team Udayavani, Jun 15, 2018, 6:00 AM IST
ಎಸ್ಎಸ್ಎಲ್ಸಿ ಮುಗಿದಾಯಿತು. ಇನ್ನೇನಿದ್ದರೂ ಕಾಲೇಜು. ಈಗಂತೂ ತಮ್ಮ ಸ್ನೇಹಿತರು ಯಾವ ಕಾಲೇಜಿಗೆ ಸೇರುತ್ತಾರೊ ಅದೇ ಕಾಲೇಜಿಗೆ ಸೇರುವುದು ರೂಢಿಯಾಗಿ ಬಿಟ್ಟಿದೆ. ಆದರೆ, ಯಾವ ವಿಭಾಗಕ್ಕೆ ಹೋಗೋದು ಎಂಬ ಪ್ರಶ್ನೆ ಎಲ್ಲರಲ್ಲಿಯೂ. ವಿಜ್ಞಾನವೇ, ವಾಣಿಜ್ಯವೇ ಅಥವಾ ಕಲಾ ವಿಭಾಗವೇ ಎಂದು. ಪರೀಕ್ಷೆ ಮುಗಿದ ಆ ಎರಡು ತಿಂಗಳನ್ನು “ಕನ್ಫ್ಯೂಶನ್ ಮಂತ್’ ಎಂದೇ ಹೇಳಬಹುದು. ವಿಜ್ಞಾನವನ್ನೇ ಆರಿಸುತ್ತೇನೆ ಎಂದು ನಿರ್ಧರಿಸಿದ್ದ ನನಗೆ ಕೆಲವರು, “”ವಾಣಿಜ್ಯದಲ್ಲಿ ಒಳ್ಳೆ ಸ್ಕೋಪ್ ಇದೆ” ಎಂದಾಗ ಮನಸ್ಸು ಬದಲಾಗುತ್ತಿತ್ತು. ಇನ್ನು ಕೆಲವರು ಕಲಾ ವಿಭಾಗದಲ್ಲಿರುವ ಆಯ್ಕೆಗಳ ಬಗ್ಗೆ ವಿವರಿಸಿದಾಗ ಅದರ ಕಡೆಯೂ ಆಸಕ್ತಿ ಮೂಡಿದ್ದುಂಟು.
ಕೆಲವರು ಎಸ್ಎಸ್ಎಲ್ಸಿ ತನಕ ಡಾಕ್ಟರ್ ಆಗಬೇಕು ಅನ್ನುತ್ತಿದ್ದವರು ಜೀವಶಾಸ್ತ್ರವೇ ಬೇಡ ಎಂದದ್ದೂ ಇದೆ. ಹಾಗೆಯೇ ಇಂಜಿನಿಯರಿಂಗ್ ಕನಸನ್ನು ಬಿಟ್ಟು ಡಾಕ್ಟರ್ ಆಗಬೇಕೆಂಬ ಕನಸು ಕಂಡದ್ದೂ ಇದೆ. ಒಂದು ವೇಳೆ ನಿಮ್ಮ ಅಕ್ಕ ಅಧ್ಯಾಪಕರಾದರೆ, “ಟೀಚಿಂಗ್ ಪ್ರೊಫೆಶನ್ ಬೆಸ್ಟ್’ ಎಂದು, ಅಥವಾ ನಿಮ್ಮ ಮಾವ ಸಿ.ಎ. ಆದರೆ “ಈಗ ಕಾಮರ್ಸ್ಗೆ ತುಂಬಾ ಡಿಮ್ಯಾಂಡ್ ಇರೋದು’ ಎನ್ನುವರು. ಕೆಲವರು “ನಿಮ್ಮ ಮಗಳನ್ನು ಡಾಕ್ಟರ್ ಮಾಡ್ಸಿ’ ಎಂದರೆ, ಕೆಲವರು “ವಿಜ್ಞಾನ ತುಂಬಾ ಕಷ್ಟವಾಗುತ್ತದೆ’ ಎಂದು ನನ್ನ ಅಮ್ಮನ ಬಳಿ ಹೇಳಿದರು. ಹೀಗೆ ಎರಡು ತಿಂಗಳು ಅವರಿವರ ಮಾತು ಕೇಳಿ, ಮನಸ್ಸು ಚಕ್ರದಂತೆ ಒಂದು ಸುತ್ತು ತಿರುಗಿದರೂ ಕೊನೆಗೆ ವಿಜ್ಞಾನವನ್ನೇ ಆರಿಸುತ್ತೇನೆ ಎಂಬ ದೃಢ ನಿರ್ಧಾರಕ್ಕೆ ಬಂದೆ.
ನಮಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದನ್ನೇ ಆರಿಸುವುದು ಸೂಕ್ತ. ಆದರೆ ಒಂದನ್ನು ಆರಿಸಿದ ನಂತರ ಪಶ್ಚಾತ್ತಾಪ ಪಟ್ಟರೆ ಅದರಿಂದ ಯಾವುದೇ ಪ್ರಯೋಜನವಿಲ್ಲ.
ಖುಷಿ, ಪ್ರಥಮ ಪಿಯುಸಿ, ಗೋವಿಂದದಾಸ ಪಿಯು ಕಾಲೇಜು, ಸುರತ್ಕಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್