ಎಸೈನ್‌ಮೆಂಟ್‌ ನೆನಪು 


Team Udayavani, Jun 22, 2018, 6:00 AM IST

finance-college.jpg

ತಪ್ಪು ಮಾಡುವುದು ಸಹಜ ಕಣೊ, ತಿದ್ದಿ ನಡೆಯೋದು ಮನುಜ ಕಣೊ’ ಎಂಬುದು ಜನಪ್ರಿಯ ಮಾತು. ಮನುಷ್ಯನ ಜೀವನವೇ ಹಾಗೆ. ಇದರಲ್ಲಿ ಸರಿ-ತಪ್ಪುಗಳ ಸಮ್ಮಿಶ್ರವೇ ಜೀವನ. ಜೀವನದಲ್ಲಿ ಎಲ್ಲವನ್ನೂ ಸರಿ ಮಾಡಲು ಸಾಧ್ಯವಿಲ್ಲ. ಆದರೆ, ತಪ್ಪನ್ನು ಅರಿತುಕೊಂಡು ತಿದ್ದಿ ನಡೆಯುವುದು ಜೀವನದ ಧರ್ಮವಾಗಿದೆ. ನಾನು ಕೂಡ ನನ್ನ ಕಾಲೇಜು ಬದುಕಿನಲ್ಲಿ ಒಂದು ತಪ್ಪು ಮಾಡಿದ್ದೆ. ಅದು ಈಗಲೂ ನನಗೆ ನೆನಪಾಗಿ ಪಶ್ಚಾತ್ತಾಪವಾಗುತ್ತಿದೆ.

ನಾನು ಕಾಲೇಜು ಜೀವನದ ದ್ವಿತೀಯ ವರ್ಷದಲ್ಲಿದ್ದೆ. ನಮಗೊಬ್ಬ ಭೌತಶಾಸ್ತ್ರ ಪ್ರಾಧ್ಯಾಪಕಿ ಇದ್ದರು. ಬಹಳ ಒಳ್ಳೆಯವರು. ಆದರೆ ಬಹಳ ಶಿಸ್ತನ್ನು ಅಪೇಕ್ಷಿಸುವವರು. ಅವರು ನಮಗೊಂದು ಅಸೈನ್‌ಮೆಂಟ್‌ ಕೊಟ್ಟಿದ್ದರು. ನಾನು ಅದನ್ನು ಮಾಡಿರಲಿಲ್ಲ. ಷವರ ಟೇಬಲ್‌ ಮೇಲೆ ಅಸೈನ್‌ಮೆಂಟ್‌ ಇಡದಿದ್ದಲ್ಲಿ ಲ್ಯಾಬ್‌ಗ ಪ್ರವೇಶವಿಲ್ಲ ಎಂದು ನಿಯವನ್ನು ಹಾಕಿದರು. ಛೆ! ನಾನು ಸೋಮಾರಿತನದಿಂದ ಅಸೈನ್‌ಮೆಂಟ್‌ ಬರೆದಿರಲಿಲ್ಲ. ಅಯ್ಯೋ! ಯಾರು ಈ ಕೆಲಸವನ್ನು ಮಾಡುವುದು ಎಂಬ ಉದಾಸೀನಭಾವ‌ ನನ್ನಲ್ಲಿ ಕಾಡುತ್ತಿತ್ತು. ಒಂದು ವೇಳೆ ಬರೆಯದಿದ್ದರೆ ಗೇಟ್‌ಪಾಸ್‌ ಖಂಡಿತ ಎಂದು ನನಗೆ ತಿಳಿಯಿತು. ಅವರ ಮುಂದೆಯೇ ಅಸೈನ್‌ಮೆಂಟ್‌ ಇಡದೇ ಹೋದರೆ ನಾನು ಲ್ಯಾಬ್‌ಗ ಹೋಗುವ ಹಾಗೆ ಇರಲಿಲ್ಲ. ಲ್ಯಾಬ್‌ಗ ಹೋಗದೆ ಮಾರ್ಕು ಸಿಗುವುದಿಲ್ಲ. ಏನು ಮಾಡುವುದು?

ನಾನು ಎಲ್ಲರೊಂದಿಗೆ ಹೋಗಿ ಬಂದು ಖಾಲಿ ಪುಸ್ತಕವನ್ನು ಟೇಬಲ್‌ ಮೇಲೆ ಇಟ್ಟು ಬಂದೆ. ಅದು ಅಸೈನ್‌ಮೆಂಟ್‌ ಪುಸ್ತಕವಲ್ಲ. ಸುಮಾರು ಇಪ್ಪತ್ತು ಪುಸ್ತಕಗಳ ರಾಶಿಯಲ್ಲಿ ನಾನು ಇಟ್ಟದ್ದು ಯಾವ ಪುಸ್ತಕ ಎಂದು ಯಾರಾದರೂ ತೆರೆದು ನೋಡುವ ಹಾಗಿರಲಿಲ್ಲ.

ನನಗೆ ಲ್ಯಾಬ್‌ಗ ಪ್ರವೇಶ ಸಿಕ್ಕಿತು. ಆಮೇಲೆ ಯಾರಿಗೂ ಗೊತ್ತಾಗದಂತೆ ಆ ಪುಸ್ತಕವನ್ನು ಹಾರಿಸಿಕೊಂಡು ಬಂದೆ. ಆ ಕ್ಷಣಕ್ಕೆ ತುಂಬ ಸಂತೋಷವಾಯಿತು. ಮೇಡಂದು ಕಣ್ಣು ತಪ್ಪಿಸಿದೆನಲ್ಲ, ಲ್ಯಾಬ್‌ಗ ಪ್ರವೇಶ ಮಾಡಿದೆನಲ್ಲ ಎಂದು ನನ್ನೊಳಗೆ ನಾನು ಅಭಿಮಾನ ಪಟ್ಟುಕೊಂಡೆ.

ಆದರೆ, ಮೇಡಂಗೆ ಇದು ಗೊತ್ತಾಗಲಿಲ್ಲ. ಅವರು ನನ್ನನ್ನು ಎಂದಿನ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ನಾನು ಕೂಡ ಅವರಿಗೆ ಕಣ್ಣಿಗೆ ಮಣ್ಣೆರಚಿದ್ದು ಗೊತ್ತಾಗದಂತೆ ವರ್ತಿಸುತ್ತಿದ್ದೆ.ಈಗ ಮಾತ್ರ ಅದನ್ನು ನೆನಪಿಸಿಕೊಂಡರೆ ತುಂಬ ಬೇಸರವಾಗುತ್ತದೆ. ನಮ್ಮ ಮೇಡಂ ತುಂಬ ಒಳ್ಳೆಯವರು. ಅವರು ಯಾವತ್ತೂ ತಪ್ಪು ಎಣಿಸುವವರಲ್ಲ. ನಮ್ಮ ಒಳ್ಳೆಯದಕ್ಕಾಗಿಯೇ ಅಸೈನ್‌ಮೆಂಟ್‌ ಕೊಟ್ಟಿದ್ದರು. ನಾನು ಮಾತ್ರ ಮಾಡಲಿಲ್ಲ. ಮಾಡದಿರುವುದು ನನ್ನ ಒಂದನೆಯ ತಪ್ಪು. ಅವರಿಗೆ ಮೋಸ ಮಾಡಿದ್ದು ಎರಡನೆಯ ತಪ್ಪು. ಹೀಗೆ ಭಾವಿಸುತ್ತ ತುಂಬ ಸಂಕಟ ಅನುಭವಿಸಿದ್ದೇನೆ.

ಆ ಮೇಡಂ ನಮಗೆಲ್ಲ ತುಂಬ ಬೈಯ್ಯುತ್ತಿದ್ದರು. ಹಾಗಾಗಿ, ಅವರ ಬಗ್ಗೆ ತುಂಬ ಬೇಸರವಿತ್ತು. ಆದರೆ, ಅವರು ಯಾಕೆ ಬೈಯ್ಯುತ್ತಿದ್ದಾರೆಂದು ಈಗ ಗೊತ್ತಾಗುತ್ತಿದೆ. ಗೊತ್ತಾಗುವಾಗ ಅವರ ಜೊತೆ ಮಾತನಾಡೋಣವೆಂದರೆ ಅವರ ಎಲ್ಲಿದ್ದಾರೋ ಗೊತ್ತಿಲ್ಲ. “ನಾನು ತಪ್ಪು ಮಾಡಿದ್ದೆ ಮೇಡಂ, ಕ್ಷಮಿಸಿ’ ಎಂದು ಈ ಮೂಲಕವೇ ನನ್ನ ತಪ್ಪೊಪ್ಪಿಗೆಯನ್ನು ಕಳುಹಿಸುತ್ತಿದ್ದೇನೆ, ಮೇಡಂ.

ನಿರ್ಮಲಾ
ಮಿಲಾಗ್ರಿಸ್‌ ಕಾಲೇಜು, ಕಲ್ಯಾಣಪುರ

ಟಾಪ್ ನ್ಯೂಸ್

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.