ಪ್ರೀತಿಯ ಪ್ರತಿಫ‌ಲ ಪ್ರೀತಿಯೇ !


Team Udayavani, Jul 6, 2018, 6:00 AM IST

u-11.jpg

ಮನುಷ್ಯನೆಂದರೆ ವಿಚಿತ್ರ ಜೀವಿ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೂ ಅವನಲ್ಲಿವೆ. ಪ್ರೀತಿ, ಕರುಣೆ, ಸಹನೆಗಳೂ ಅವನಲ್ಲಿ ತುಂಬಿರುತ್ತವೆ. ಪ್ರತಿಯೊಬ್ಬರ ಮನಸ್ಸೂ ಒಂದೇ ರೀತಿ ಇರುವುದಿಲ್ಲ. ಎಲ್ಲರೂ ದುಷ್ಟರೂ ಅಲ್ಲ ಎಲ್ಲರೂ ಸಜ್ಜನರೂ ಅಲ್ಲ. ಕೆಲವರು ಸುರರಾದರೆ ಇನ್ನು ಕೆಲವರು ಅಸುರೀ ಪ್ರವೃತ್ತಿಯವರು.

ಒಬ್ಬ ಮನುಷ್ಯ ಯಾಕೆ ಕೆಟ್ಟವನಾಗುತ್ತಾನೆ ಅಥವಾ ಒಬ್ಬ ಮನುಷ್ಯ ಯಾಕೆ ಒಳ್ಳೆಯವನಾಗಿರುತ್ತಾನೆ ಎಂಬುದು ಬಹಳ ಕುತೂಹಲಕರವಾದ ಸಂಗತಿಯಾಗಿದೆ. ಮನುಷ್ಯನ ನಡವಳಿಕೆಗಳಿಗೆಲ್ಲ ಕಾರಣ ಹುಟ್ಟಿನಲ್ಲಿಯೇ ಇರುತ್ತದೆಯೋ, ಹುಟ್ಟಿದ ಬಳಿಕ ಸಿಗುವ ಪರಿಸರದಲ್ಲಿಯೇ ಇರುತ್ತದೆಯೋ ಎಂಬುದು ನಿಖರವಾಗಿ ಹೇಳಲಾಗದಂಥ ವಿಚಾರವಾಗಿದೆ.

ಬಾಲ್ಯದಲ್ಲಿ ಒಬ್ಬನು ಬೆಳೆಯುವ ಪರಿಸರದಲ್ಲಿ ಒಳ್ಳೆಯ ಗುಣಗಳ ವ್ಯಕ್ತಿಗಳ ಸಂಪರ್ಕ ಆಗಬಹುದು. ಆದ್ದರಿಂದ ಅದೇ ಅವನನ್ನು ಒಳ್ಳೆಯವನನ್ನಾಗಿ ಬೆಳೆಸಬಹುದು. ಬಾಲ್ಯದಲ್ಲಿ ಕೆಟ್ಟವರ ಸಹವಾಸ ಸಿಕ್ಕಿದರೆ ಅದು ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ.

ಒಬ್ಟಾತ ಕುಡುಕನಿದ್ದಾನೆ ಎಂದು ಭಾವಿಸಿ. ಆತ ಕೆಟ್ಟವನಾಗಿದ್ದಾನೆಂದು ಹೇಳಲಾಗದು. ವ್ಯಸನಿಗಳು ಅವರವರಿಗೆ ಶತ್ರುಗಳೇ ಹೊರತು ಹೊರಗಿನವರಿಗೆ ದುಷ್ಟರೇನೂ ಅಲ್ಲ. ಕೆಲವರು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಆದರೆ, ಅವರು ಸಜ್ಜನರೆಂದು ಹೇಳಲಾಗದು. ಕೆಲವರು ಬಾಹ್ಯದಲ್ಲಿ ಹೇಗಿರುತ್ತಾರೋ ಅವರು ಅಂತರಂಗದಲ್ಲಿಯೂ ಇರುತ್ತಾರೆಂದು ಹೇಳಲಾಗದು. ಬಹಿರಂಗದಲ್ಲಿ ಶುದ್ಧಿ ಇಲ್ಲದಿದ್ದರೂ ಅಂತರಂಗದಲ್ಲಿ ಶುದ್ಧಿ ಇಲ್ಲದಿದ್ದರೆ ಅದರಿಂದ ಏನೂ ಪ್ರಯೋಜನ ಇಲ್ಲ. ಅಂತರಂಗಶುದ್ಧಿ, ಬಹಿರಂಗ ಶುದ್ಧಿ ಎರಡೂ ಇರುವವರು ನಿಜವಾದ ಶ್ರೇಷ್ಠರು.

ಅದೇ ರೀತಿ ನೋವು-ನಲಿವಿನ ವಿಚಾರಗಳೂ ಇರುತ್ತವೆ. ಕೆಲವರು ಒಳಗೆ ತುಂಬಾ ನೋವನ್ನು ಅನುಭವಿಸುತ್ತಾರೆ. ಆದರೆ ಹೊರಗೆ ನಗುನಗುತ್ತ ವ್ಯವಹರಿಸುತ್ತಾರೆ. ಕೆಲವರು ಹೊರಗಿನ ಲೋಕಕ್ಕೆ ಅಳುಮೋರೆಯನ್ನು ಪ್ರದರ್ಶಿಸುತ್ತಾರೆ. ಒಳಗಿರುವ ಸಂತೋಷವನ್ನು ಬಚ್ಚಿಡುತ್ತಾರೆ.

ಇವೆಲ್ಲವನ್ನು ನಾವು ನಮ್ಮ ಕಾಲೇಜು ದಿನಗಳಲ್ಲಿ ಕಂಡವರೇ ಇದ್ದೇವೆ. ಕೆಲವರು ಅನಿವಾರ್ಯವಾಗಿ ದುಷ್ಟರಾಗಿರುತ್ತಾರೆ. ಆದರೆ, ಅವರ ದುಷ್ಟತನದಿಂದ ನಾಲ್ಕು ಮಂದಿಗೆ ಪ್ರಯೋಜನ ಆಗುತ್ತದೆ. ಉಳಿದವರಿಗೆ ಒಳಿತಾಗುವ ರೀತಿಯಲ್ಲಿ ಕೆಲವೊಮ್ಮೆ ಅವರು ದುಷ್ಟರಾಗಿರುವುದಿಲ್ಲ. ಆದರೆ, ಅವರನ್ನು ಅಪಾರ್ಥ ಭಾವಿಸಿರುತ್ತೇವೆ.

ಹಾಗೆ ನೋಡಿದರೆ, ಯಾರೂ ಉದ್ದೇಶಪೂರ್ವಕವಾಗಿ ಕೆಟ್ಟವರಾಗಿರಲೂ ಬಯಸುವುದಿಲ್ಲ , ಒಳ್ಳೆಯವರಾಗಿರಲೂ ಬಯಸುವುದಿಲ್ಲ. ಅದು ಅವರವರ ಸಂದರ್ಭಕ್ಕೆ ಸರಿಯಾದ ಪ್ರತಿಕ್ರಿಯೆ ಅಷ್ಟೆ . “ಈವನ್‌ ಎ ಡೆವಿಲ್‌ ಕ್ಯಾನ್‌ ಹ್ಯಾವ್‌ ಎ ಗುಡ್‌ ಹಾರ್ಟ್‌’ ಎಂಬ ಮಾತಿದೆ. ಭೂತದಲ್ಲೂ ಸದ್ಗುಣವಿರಬಹುದು. ಪಿಶಾಚಿಗಳು ಒಳಿತನ್ನು ಉಂಟುಮಾಡುವ ಕತೆಗಳನ್ನು ನಾವು ಓದಿದವರೇ ಇದ್ದೇವೆ. ಕೊನೆಯದಾಗಿ ಒಂದು ಮಾತು, ಮಾನವೀಯತೆ ಎಂಬುದು ಬಹಳ ಎತ್ತರವಾದ ಒಂದು ಪದ. ನಾವು ಸಜ್ಜನರಾಗಿದ್ದೇವೆಯೊ, ದುಷ್ಟರಾಗಿದ್ದೇವೆಯೊ ಎಂಬುದಕ್ಕಿಂತ ಮಾನವೀಯತೆಯನ್ನು ಹೊಂದಿದ್ದೇವೆ ಎಂದು ಹೇಳಬಲ್ಲಿರಾದರೆ ಅದಕ್ಕಿಂತ ದೊಡ್ಡದು ಬೇರಾವುದೂ ಇಲ್ಲ.  

ರಕ್ಷಿತಾ ಕೋಟ್ಯಾನ್‌, ದ್ವಿತೀಯ ಬಿ.ಎಸ್ಸಿ., ಎಸ್‌ಡಿಎಂ ಕಾಲೇಜು, ಉಜಿರೆ

ಟಾಪ್ ನ್ಯೂಸ್

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.