ಒಂದು ವರ್ಷದ ಸುಂದರ ಪಯಣ!


Team Udayavani, Aug 24, 2018, 6:00 AM IST

college-life-55.jpg

ನನ್ನ ಎಸ್‌ಎಸ್‌ಎಲ್‌ಸಿ ಫ‌ಲಿತಾಂಶ ಬಂದ ತಕ್ಷಣ ನನ್ನ ತಂದೆಯವರು “ನೀನು ಯಾವ ಕಾಲೇಜಿಗೆ ಹೋಗುತ್ತಿಯಾ?’ ಎಂದು ಕೇಳದೆ “ನೀನು ಗೋವಿಂದದಾಸ ಕಾಲೇಜಿಗೆ ಹೋಗು’ ಎಂದು ಆದೇಶಿಸಿದ್ದರು. ನಾನು ಯಾವ ಕಾಲೇಜು ಹೋಗುವುದು ಎಂದಾಗ ಮೊದಲಿಗೆ ನೆನಪಾದದ್ದೇ ಈ ಕಾಲೇಜು. 

ಅಪ್ಪ ಸೂಚಿಸಿದ್ದೂ ಅದೇ ಕಾಲೇಜು. ಹತ್ತಿರವಿರುವ ಕಾಲೇಜಿಗೇ ಹೋಗುವುದು ಒಳ್ಳೆಯದೆಂದೆನಿಸಿ ಒಪ್ಪಿಕೊಂಡೆ. ಮೇ ತಿಂಗಳಲ್ಲಿ ಪ್ರವೇಶಾತಿ ಸಹ ಆಯಿತು. ಜೂನ್‌ 9ರಂದು ಕಾಲೇಜಿಗೆ ಬರಲು ಹೇಳಿದ್ದರು. ಅಂದು ಕಾಲೇಜಿಗೆ ಹೋದೆ. ಗೆಳತಿ ಶಿವರಂಜನಿಗೆ ಹಿಂದಿನ ದಿನವೇ ಫೋನ್‌ ಮಾಡಿ, ನನಗಾಗಿ ಕಾಯುವಂತೆ ತಿಳಿಸಿದ್ದೆ. ಆಕೆ ಅದನ್ನು ಚಾಚೂತಪ್ಪದೆ ಪಾಲಿಸಿದ್ದಳು. ನನಗೋಸ್ಕರ ಕಾಲೇಜಿನ ಗೇಟಿನ ಹತ್ತಿರ ಆಕೆ ಕಾಯುತ್ತಿದ್ದದ್ದನ್ನು ನೋಡಿ ನಿಧಾನವಾಗಿದ್ದ ನನ್ನ ಕಾಲುಗಳ ವೇಗ ಹೆಚ್ಚಾಯಿತು. ಆನಂತರ ನಾವಿಬ್ಬರೂ ಕಾಲೇಜಿನ ಒಳಬಂದೆವು. ಅಲ್ಲಿ ನಮಗೆ ಕಾಲೇಜಿನ ಬಗ್ಗೆ ಒಂದಷ್ಟು ವಿಷಯಗಳನ್ನು ತಿಳಿಸಿದ ಬಳಿಕ ನಾವು ಯಾವ ಸೆಕ್ಷನ್‌ ಸೇರಬೇಕೆಂದೂ ಹೇಳಿ ನಮ್ಮನ್ನು ಹೊರಬಿಟ್ಟರು.

ಮರುದಿನ ಎಲ್ಲರೂ ಸಮವಸ್ತ್ರ ಧರಿಸಿ ಬಂದಿದ್ದರು. ಗೆಳತಿ ಚಿರಶ್ರೀಯ ದರ್ಶನವೂ ಆಯಿತು. ಕ್ಲಾಸ್‌ಗೆ ಹೋಗಿ ನಾನು ಎಲ್ಲಿ ಕೂರಲಿ ಎಂದು ಅವಳಲ್ಲಿ ಕೇಳಿದಾಗ, “ಎಲ್ಲಿ ಬೇಕೋ ಅಲ್ಲಿ ಕೂರು’ ಎಂದು ಆಕೆಯ ಉತ್ತರ. ನಾನು ಅವಳ ಪಕ್ಕದಲ್ಲೇ ನನ್ನ ಬ್ಯಾಗ್‌ ಇಳಿಸಿ ಕುಳಿತೆ. ಎದುರಿನ ಬೆಂಚ್‌ನಲ್ಲಿ ಗೆಳತಿ ವಿಶಾಲಾಳೂ ಇದ್ದಳು. ಅವಳಲ್ಲಿ ಮಾತನಾಡಬೇಕು ಎಂದು ಕ್ಲಾಸ್‌ನಿಂದ ಹೊರಬಂದೆವು. ಅಷ್ಟರಲ್ಲಿ ಗಂಟೆಯ ಶಬ್ದ ಕಿವಿಗೆ ಬಿತ್ತು. ಎಲ್ಲರೂ ನಮ್ಮ ನಮ್ಮ ಜಾಗವನ್ನು ಅಲಂಕರಿಸಿದೆವು. 

ಮೊದಲ ದಿನ ನಗುಮುಖ ಇಟ್ಟುಕೊಂಡು ಬಂದದ್ದು ಸದಾ ನಗುಮುಖದ ಗಾಯತ್ರಿ ಮೇಡಂ. ಅಂದಿನ ಕ್ಲಾಸ್‌ಗಳೆಲ್ಲ ಮುಗಿದು ಸಂತೋಷದಿಂದಲೇ ಮನೆ ಸೇರಿದೆ. ಕೆಲವು ದಿನಗಳ ಬಳಿಕ ನಮ್ಮ ಕಾಲೇಜಿನಲ್ಲಿ ಮತದಾನ ನಡೆಯಿತು. ಇಲೆಕ್ಷನ್‌ಗೆ ಆಕಾಶ್‌ ಮತ್ತು ಅನ್ವಿತಾ ನಿಂತಿದ್ದರು. ಇವರಿಬ್ಬರೂ “ವೋಟ್‌ ಫಾರ್‌ ಅನ್ವಿತಾ, ವೋಟ್‌ ಫಾರ್‌ ಆಕಾಶ್‌’ ಎಂದು ಗುಂಪು ಮಾಡಿಕೊಂಡು ಕಾಲೇಜಿನ ಕ್ಯಾಂಪಸ್‌ನಲ್ಲಿ  ಓಡಾಡುತ್ತಾ ಮತಕ್ಕಾಗಿ ಯಾಚಿಸುತ್ತಿದ್ದರು. ಕಡೆಗೂ ಮತದಾನ ಮುಗಿಯಿತು. 

ಮತ್ತೆ ನಮ್ಮ ದಿನನಿತ್ಯದ ಚಟುವಟಿಕೆಗಳು ಎಂದಿನಂತೆ ಶುರುವಾದವು. ನನ್ನ ಸ್ನೇಹಿತರ ಬಳಗವೂ ದಿನೇದಿನೇ ಹೆಚ್ಚಾಗುತ್ತಾ ಹೋಯಿತು. ನಿಧಿ, ಜೀವಿತಾ, ರಚನಾ ಎಲ್ಲರೂ ನನಗೆ ತುಂಬಾ ಹತ್ತಿರವಾದರು. ನಾವು ಯಾವುದೇ ಸ್ಪರ್ಧೆಯಿದ್ದರೂ ಒಟ್ಟಿಗೆ ಭಾಗವಹಿಸುತ್ತಿದ್ದೆವು. ಎಲ್ಲರೂ ಸೇರಿ ತಮಾಷೆ ಮಾಡುತ್ತಿದ್ದೆವು. ಅವರೊಂದಿಗೆ ಕಳೆದ ಒಂದೊಂದು ಕ್ಷಣಗಳೂ ಅತಿ ಮಧುರ! ಹೀಗೆ ಒಂದು ವರ್ಷ ಹೇಗೆ ಕಳೆಯಿತು ಎಂದೇ ತಿಳಿಯಲಿಲ್ಲ. ವಾರ್ಷಿಕ ಪರೀಕ್ಷೆಯೂ ಆಯಿತು.  ಇನ್ನು ಮುಂದೆ ನಾವೇ ಸೀನಿಯರ್ ! ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳಿಗೆಲ್ಲ ಬೈ ಬೈ ಹೇಳಿ ಅವರ ಸ್ಥಾನ ತುಂಬಿದ್ದೆವು. ಈ ಒಂದು ವರ್ಷದ ಸುಂದರ ಪಯಣ ಮರೆಯಲಾಗದ ಒಂದು ಸುಮಧುರ ನೆನಪು.

– ಅಪೇಕ್ಷಾ ಶೆಟ್ಟಿ
ದ್ವಿತೀಯ ಪಿಯುಸಿ
ಗೋವಿಂದದಾಸ ಪ.ಪೂ. ಕಾಲೇಜು, ಸುರತ್ಕಲ್‌

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.