ಮುಟ್ಟಿದರೆ ಮುನಿಯೋದಿಲ್ಲ 


Team Udayavani, Aug 24, 2018, 6:00 AM IST

periods-aa.jpg

ನಾವು 21ನೆಯ ಶತಮಾನದಲ್ಲಿದ್ದೇವೆ. ಆದರೂ ನನಗೆ ಒಂದು ಸಂದೇಹವಿದೆ - ನಾವು 12ನೆಯ ಶತಮಾನದಲ್ಲಿದ್ದೇವೆಯೇ ಎಂದು! ವಿಜ್ಞಾನ, ತಂತ್ರಜ್ಞಾನ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ವೇಗವಾಗಿ ನಮ್ಮ ದೇಶ ಬೆಳೆಯುತ್ತಿದೆ. ಆದರೆ, ಮೂಢನಂಬಿಕೆ,
ಮೌಡ್ಯಗಳಿಂದ ಹೊರಬಾರದೇ ಇರುವುದು ನಗೆಪಾಟಲಿನ ವಿಷಯವಾಗಿದೆ. ಧರ್ಮ, ದೇವರ ಹೆಸರಿನಲ್ಲಿ ಹೆಣ್ಣನ್ನು ಪ್ರತಿಸ್ತರದಲ್ಲಿಯೂ ಶೋಷಣೆಗೆ ಗುರಿ ಮಾಡಿರುತ್ತಾರೆ. ಗರ್ಭ ಮತ್ತು ಮುಟ್ಟಿನ ಸಂದರ್ಭದಲ್ಲಿ ಹೆಣ್ಣನ್ನು ಮಡಿ-ಮೈಲಿಗೆಯ ಹೆಸರಿನಲ್ಲಿ ಈ ಸಮಾಜ ಈಗಲೂ ಕೀಳಾಗಿ ಕಾಣುತ್ತಿದೆ.

ಒಂದೊಂದು ಜಾತಿ-ಧರ್ಮದಲ್ಲಿ ಮುಟ್ಟಿನ ಸಂದರ್ಭದಲ್ಲಿ ಒಂದೊಂದು ರೀತಿಯ ಆಚರಣೆಯನ್ನು ಮಾಡುತ್ತಿದ್ದಾರೆ. ಮುಟ್ಟಾದ ಹೆಣ್ಣುಮಗಳನ್ನು ಯಾರೂ ಮುಟ್ಟುವಂತಿಲ್ಲ. ಆಕೆ ದೇವರ ಕೋಣೆ ಹಾಗೂ ಅಡುಗೆ ಮನೆಯನ್ನು ಪ್ರವೇಶಿಸುವಂತಿಲ್ಲ. ಇನ್ನೂ ಕೆಲವು ಪ್ರದೇಶಗಳಲ್ಲಿ ಆಕೆಯನ್ನು ಮನೆಯ ಹೊರಗೆ ಪ್ರತ್ಯೇಕವಾದ ಕೋಣೆಯಲ್ಲಿ ಇರಿಸಲಾಗುತ್ತಿದೆ. ಬಳ್ಳಾರಿ ಜಿಲ್ಲೆಯಲ್ಲಿ ಗೊಲ್ಲ ಸಮುದಾಯದ ಮಹಿಳೆಯರು ಮುಟ್ಟಾದಾಗ ಬಸ್ಸು ನಿಲ್ದಾಣಗಳಲ್ಲಿ ರಾತ್ರಿಯನ್ನು ಕಳೆಯುತ್ತಿದ್ದಾರೆ ಎನ್ನುವುದು ಮೌಡ್ಯದ ಪರಮಾವಧಿಯಾಗಿ ಕಾಣುತ್ತಿಲ್ಲವೆ?

ಇಂತಹ ಮೌಡ್ಯವನ್ನು ಕೇವಲ ಹಳ್ಳಿ ಪ್ರದೇಶಗಳಲ್ಲಿ ಮಾತ್ರವಲ್ಲ, ನಗರ ಪ್ರದೇಶಗಳಲ್ಲಿಯೂ ಆಚರಿಸುತ್ತಿದ್ದಾರೆ. ಅದರಲ್ಲಿಯೂ ವಿದ್ಯಾವಂತ ಹೆಣ್ಣು ಮಕ್ಕಳು ಇಂತಹ ಹೀನ ಸಂಪ್ರದಾಯವನ್ನು ಪಾಲಿಸುವುದು ಇನ್ನೂ ಆಶ್ಚರ್ಯಕರ ವಿಷಯವಾಗಿದೆ.
ಮುಟ್ಟು ಅಸಹ್ಯ ಅಥವಾ ಮೈಲಿಗೆಯಾಗಿದ್ದರೆ, ಆ ದೇವರು ಹೆಣ್ಣಿಗೆ ಅಂತಹ ಜೈವಿಕ ಕ್ರಿಯೆಯನ್ನು ಕೊಡುತ್ತಿರಲಿಲ್ಲ. ಮುಟ್ಟು ಹೆಣ್ಣಿಗೆ ಇರುವಂತಹ ವಿಶೇಷವಾದ ಶಕ್ತಿ. ಇದೊಂದು ಪ್ರಕೃತಿಯ ನಿಯಮ. ಹಸಿವು, ಬಾಯಾರಿಕೆ ಹಾಗೂ ವಿಸರ್ಜನೆ ಇದ್ದ ಹಾಗೆ ತಿಂಗಳ ಮುಟ್ಟು ಕೂಡ. ವೇದಗಳ ಕಾಲದಲ್ಲಿಯೂ ಯಾವುದೇ ಗ್ರಂಥದಲ್ಲಿಯೂ ಮುಟ್ಟನ್ನು ಮೈಲಿಗೆ ಎಂದಾಗಲಿ ಹಾಗೂ ಆ ದಿನಗಳಲ್ಲಿ ಆಕೆ ದೇವರ ಕಾರ್ಯವನ್ನು ಮಾಡಬಾರದು ಎಂದಾಗಲೀ ಉಲ್ಲೇಖಗೊಂಡಿಲ್ಲವೆಂದು ಹೇಳುತ್ತಾರೆ.

ಈ ಮಡಿ-ಮೈಲಿಗೆಯನ್ನು ಹುಟ್ಟಿಸಿಕೊಂಡವರು ಈ ಬುದ್ಧಿಹೀನ ಜನಗಳೇ ಹೊರತು ದೇವರು ಹಾಗೂ ಧರ್ಮಗ್ರಂಥಗಳು ಅಲ್ಲ. ದುರ್ಬಲ ಮನಸ್ಸಿನ ಹೆಂಗಸರು ಈ ಮೌಡ್ಯಗಳಿಗೆ ಬೇಗ ಶರಣಾಗುತ್ತಾರೆ.

ನಮ್ಮ ಪೂರ್ವಿಕರು ಹೆಣ್ಣನ್ನು ಮುಟ್ಟಿನ ಸಂದರ್ಭದಲ್ಲಿ ದೂರವಿಟ್ಟಿರಲು ಕೆಲವು ವೈಜ್ಞಾನಿಕ ಕಾರಣಗಳಿವೆ. ಹಿಂದಿನ ಕಾಲದಲ್ಲಿ ಹೆಣ್ಣುಮಕ್ಕಳಿಗೆ ಮೈನೆರೆಯುವ ಮೊದಲೇ ವಿವಾಹವನ್ನು ಮಾಡುತ್ತಿದ್ದರು. ಅವರು ತಮ್ಮ ಸಣ್ಣ ವಯಸ್ಸಿನಲ್ಲಿಯೇ ಪೂರ್ತಿ ಮನೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿದ್ದರು. ಹಾಗೂ ಹಿಂದೆ ಎಲ್ಲರೂ ವ್ಯವಸಾಯವನ್ನು ಮಾಡಿ ಜೀವನ ಸಾಗಿಸುತ್ತಿದ್ದರು. ಅವರಿಗೆ ವಿಶ್ರಾಂತಿ ಎಂಬುದೇ ಇರಲಿಲ್ಲ. ಅದರಲ್ಲಿ ಹೆಣ್ಣು ಮಕ್ಕಳಿಗಂತೂ ಗದ್ದೆ ಹಾಗೂ ಮನೆಯ ಕೆಲಸಗಳ ನಡುವೆ ಬಿಡುವು ಎಂಬುದೇ ಇರಲಿಲ್ಲ. ಮುಟ್ಟಿನ ಸಂದರ್ಭದಲ್ಲಿ ಹೆಣ್ಣಿಗೆ ಎಂದಿನಂತೆ ಕೆಲಸ ಮಾಡಲು ಸಾಧ್ಯವಾಗದು. ಆ ದಿನಗಳಲ್ಲಿ ಆಕೆಗೆ ವಿಶ್ರಾಂತಿಯ ಅಗತ್ಯವಿರುವುದರಿಂದ ಹಾಗೂ ಆಕೆ ದೈಹಿಕ ಸಂಪರ್ಕದಿಂದ ದೂರವಿರಲು ಪ್ರತ್ಯೇಕವಾಗಿ ಶುಚಿಯಾದ ಕೋಣೆಯ ಒಳಗೆ ಆಕೆ ಇರುವುದಕ್ಕೆ ಆಸ್ಪದವಿತ್ತು. ಬಹಳ ಹಿಂದೆ ಕಾಡುಗಳ ಮಧ್ಯೆಯೇ ಊರುಗಳು ಇದ್ದುವು. ಕಾಡಿನ ಕ್ರೂರ ಮೃಗಗಳ ಆಕ್ರಮಣವೂ ಜಾಸ್ತಿಯೇ ಇತ್ತು. ಮುಟ್ಟಿನ ಸಂದರ್ಭದಲ್ಲಿ ರಕ್ತದ ವಾಸನೆಯನ್ನು ಅರಸಿಕೊಂಡು ಕ್ರೂರ ಮೃಗಗಳು ಬಂದು ತೊಂದರೆ ಮಾಡದಿರುವಂತೆ ಆಕೆಯನ್ನು ಮನೆಯಿಂದ ಹೊರಬರಲು ನಿಷೇಧವನ್ನು ಮಾಡಿರಬಹುದು ಎಂಬ ಭಾವನೆಯೂ ಇದೆ.

ಯಾವುದೇ ಧರ್ಮಗ್ರಂಥದಲ್ಲಿ ಹೆಣ್ಣನ್ನು ಅಥವಾ ಹೆಣ್ಣಿನ ಯಾವುದೇ ಅಂಗವನ್ನು ಅಶುದ್ಧ ಎಂದು ಪರಿಗಣಿಸಿಲ್ಲ. ಕೆಲವು ಧಾರ್ಮಿಕ ಗ್ರಂಥ ಹಾಗೂ ಪುರಾಣ ಗ್ರಂಥಗಳಲ್ಲಿ ಹೆಣ್ಣು ದೇವರೆಂದು ಪೂಜಿಸಲ್ಪಡುತ್ತಾಳೆ.

ಅಸ್ಸಾಂನಲ್ಲಿರುವ ಕಾಮಾಖ್ಯ ದೇವಾಲಯದಲ್ಲಿ ದೇವಿಯ ಯೋನಿಯನ್ನು ಪೂಜಿಸುತ್ತಾರೆ ಹಾಗೂ ಆಕೆ ಆಷಾಢ ಮಾಸದಲ್ಲಿ ಮುಟ್ಟಾಗುತ್ತಾಳೆ, ಆಕೆಯ ಮುಟ್ಟಾದ ರಕ್ತದಿಂದ ಬ್ರಹ್ಮಪುತ್ರ ನದಿಯು ಕೆಂಪಾಗುತ್ತದೆ ಎಂಬ ನಂಬಿಕೆ ಇದೆ. ಹಾಗೂ ಈ ದೇವಾಲಯಕ್ಕೆ ಎಲ್ಲ ಮಹಿಳೆಯರಿಗೂ ಎಲ್ಲ ದಿನಗಳಲ್ಲಿ ದೇವಾಲಯಕ್ಕೆ ಪ್ರವೇಶ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹಾಗಿರುವಾಗ ಈ ಸಮಾಜವು ಮುಟ್ಟಿನ ಬಗ್ಗೆ ಇರುವ ವೈಜ್ಞಾನಿಕ ಕಾರಣಗಳನ್ನು ಪರಿಗಣಿಸದೆ, ಧರ್ಮ ಹಾಗೂ ದೇವರ ಹೆಸರಿನಲ್ಲಿ ಹೆಣ್ಣನ್ನು ಅಶುದ್ಧ ಎಂದು ಪರಿಗಣಿಸುತ್ತಿದೆ. ಈ ಮೂಢನಂಬಿಕೆಯನ್ನು ಬೇರು ಸಹಿತ ಕಿತ್ತು ಹಾಕಲು ಈ ಸಮಾಜ, ಸರ್ಕಾರ ಹಾಗೂ ದೇವಾಲಯಗಳ ಆಡಳಿತ ವರ್ಗ ಕೈಜೋಡಿಸಬೇಕು. ಬಹುತೇಕ ಹೆ‌ಣ್ಣು ಮಕ್ಕಳಿಗೆ ಮುಟ್ಟಿನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ, ಹಾಗೂ ಅವರು ಈ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಲು ನಾಚಿಕೆ ಹಾಗೂ ಅಸಹ್ಯ ಪಡುತ್ತಾರೆ. ನಮಗೆ ಇದು ದೇವರ ಶಾಪ ಹಾಗೂ ಕಾಯಿಲೆ ಎಂದೆಲ್ಲ ತಿಳಿದುಕೊಂಡಿರುವರು. ಹೆತ್ತವರು ಹಾಗೂ ಶಿಕ್ಷಕರು, ಹೆ‌ಣ್ಣು ಮಕ್ಕಳು ಹದಿಹರೆಯಕ್ಕೆ ಬರುವ ಮೊದಲೇ ಮುಟ್ಟಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿ ಅವರ ಅಂಜಿಕೆ ಹಾಗೂ ನಾಚಿಕೆಯನ್ನು ನಿವಾರಣೆ ಮಾಡಬೇಕು.

ಮುಟ್ಟಿನ ಬಗ್ಗೆ ಇರುವ ಕೀಳರಿಮೆಯನ್ನು ತೊರೆಯಲು ದೇವಾಲಯಗಳಲ್ಲಿ ಮಹಿಳೆಯರಿಗೆ ಎಲ್ಲ ದಿನಗಳಲ್ಲಿ ಬರಲು ಅನುಮತಿಯನ್ನು ಕಲ್ಪಿಸಬೇಕಾಗಿದೆ. ವಿದ್ಯಾವಂತರಾಗಿರುವ ನಾವು ಮನೆಯಲ್ಲಿ ಹೀನ ಸಂಪ್ರದಾಯವನ್ನು ಆಚರಿಸಬಾರದು ಹಾಗೂ ಮುಟ್ಟಿನ ಬಗ್ಗೆ ತಲೆಯಲ್ಲಿ ತುಂಬಿರುವ ಸುಳ್ಳು ಮಾಹಿತಿಯನ್ನು ಮನಸ್ಸಿನಿಂದ ಮೊದಲು ಕಿತ್ತು ಹಾಕಬೇಕು. ಎಲ್ಲರಲ್ಲೂ ಇಂತಹ ಮಾನಸಿಕ ದೃಢತೆ ಮತ್ತು ಧೈರ್ಯ ತುಂಬಬೇಕು. 

– ತನುಜಾ
ದ್ವಿತೀಯ ಎಂ. ಕಾಂ.
ಮಂಗಳೂರು ವಿಶ್ವವಿದ್ಯಾನಿಲಯ

ಟಾಪ್ ನ್ಯೂಸ್

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Shotgun

Shotgun ಶೂಟಿಂಗ್‌ ಅರ್ಹತಾ ಸುತ್ತಿನಲ್ಲಿ ಕರಣ್‌: ವಿವಾದ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.