ಗ್ರಂಥಾಲಯಕ್ಕೆ ಬನ್ನಿರಿ


Team Udayavani, Sep 28, 2018, 6:00 AM IST

d-9.jpg

ಆಗ ತಾನೆ ಸರಕಾರಿ ನೌಕರಿ ಸಿಕ್ಕಿ ಗ್ರಾಮಾಂತರ ಪ್ರದೇಶದ ಒಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಂಥಾಲಯ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಆರಂಭದ ದಿನಗಳು. ನಗರವಾಸಿಯಾಗಿದ್ದ ನಾನು ಪ್ರಾರಂಭದಲ್ಲಿ ಸಾಕಷ್ಟು ಯಾತನೆಯನ್ನು ಅನುಭವಿಸಿದರೂ, ವಿದ್ಯಾರ್ಥಿಗಳ ಒಡನಾಟ ಎಲ್ಲ ನೋವನ್ನು ಮರೆಸಿತ್ತು. ಗ್ರಂಥಾಲಯದಲ್ಲಿ ಇದ್ದುಕೊಂಡು ಬಹಳಷ್ಟು  ಗ್ರಂಥಗಳನ್ನು ಅಭ್ಯಸಿಸಿ ವಿದ್ಯಾರ್ಥಿಗಳಿಗೂ ಪುಸ್ತಕದ ಮಹತ್ವ , ಸಾಹಿತ್ಯದ ಬಗ್ಗೆ ಒಲವು ಬೆಳೆಸುವ ಮಹತ್ತರ ಜವಾಬ್ದಾರಿ ನನ್ನ ಮೇಲೆ ಇತ್ತು. ವಿದ್ಯಾರ್ಥಿಗಳು ಪಾಠ-ಪ್ರವಚನಗಳಿಗೆ ಪೂರಕವಾದ ಪುಸ್ತಕವನ್ನು ಎರವಲು ಪಡೆಯುವುದರ ಜೊತೆಗೆ, ವಾಚನಾಲಯದಲ್ಲಿ ಲಭ್ಯವಿರುವ ದಿನಪತ್ರಿಕೆ, ವಾರಪತ್ರಿಕೆ, ಇನ್ನಿತರ ಉಪಯುಕ್ತ ಜರ್ನಲ್‌, ನಿಯತಕಾಲಿಕಗಳು ಮುಂತಾದುವುಗಳನ್ನು ಓದಿಕೊಂಡು, ತಮ್ಮ ಬಿಡುವಿನ ವೇಳೆಯನ್ನು ಸದುಪಯೋಗ ಮಾಡಿಕೊಳ್ಳುತ್ತಿದ್ದರು. ಆ ದಿನಗಳಲ್ಲಿ ತಂತ್ರಜ್ಞಾನವು ಇಷ್ಟೊಂದು ಪ್ರಮಾಣದಲ್ಲಿ ಮುಂದುವರಿಯದ ಕಾರಣ, ವಿದ್ಯಾರ್ಥಿಗಳು ತರಹೇವಾರಿ ಪುಸ್ತಕ, ಪತ್ರಿಕೆ ಓದುವುದರಲ್ಲಿ ಅತೀವ  ಆನಂದ ಅನುಭವಿಸುತ್ತಿದ್ದರು. ವಿದ್ಯಾರ್ಥಿಗಳೊಂದಿಗೆ ಬೆರೆಯುತ್ತ¤, ಅವರ ಸಂತೋಷದಲ್ಲಿ ತೃಪ್ತಿಯನ್ನು ಅನುಭವಿಸುತ್ತಿದ್ದ ಆ ಖುಷಿ ಇಂದಿಗೂ ಜೀವಂತವಾಗಿದೆ. 

ಆದರೆ, ದಿನಗಳು ಉರುಳಿದಂತೆ, ಮಾಹಿತಿ ಹಾಗೂ ಸಂವಹನ ತಂತ್ರಜ್ಞಾನ ಕ್ಷೇತ್ರದಲ್ಲಿ ಉಂಟಾದ ಕ್ರಾಂತಿಯ ಪರಿಣಾಮದಿಂದ ಆಧುನಿಕ ಜಗತ್ತಿನ ಕೊಡುಗೆಗಳಾದ ಮೊಬೈಲ್‌ ಫೋನ್‌, ವಿಭಿನ್ನ ಟಿ.ವಿ. ಚಾನೆಲ್‌ಗ‌ಳು, ಹೈಟೆಕ್‌ ಕಂಪ್ಯೂಟರ್‌ಗಳು ಹಾಗೂ ಇನ್ನಿತರ ಗ್ಯಾಜೆಟ್‌ಗಳು ಜನರ ಖಾಸಗಿ ಬದುಕಿಗೆ ಲಗ್ಗೆ ಇಟ್ಟಿದ್ದವು. ಜಾಗತೀಕರಣ ಹಾಗೂ ಖಾಸಗೀಕರಣದ ನೆಪವೊಡ್ಡಿ ಮೊಬೈಲ್‌ ಫೋನುಗಳು ಮತ್ತು ಅಂತರ್ಜಾಲ ಸಂಪರ್ಕಗಳು ಅಗ್ಗದ ದರದಲ್ಲಿ ಜನಸಾಮಾನ್ಯರಿಗೆ ಎಟಕುವಂತಾಗಿತ್ತು. ಪರಿಣಾಮವಾಗಿ, ತಮ್ಮ ಅಮೂಲ್ಯ ಸಮಯವನ್ನು ಉತ್ತಮ ಹವ್ಯಾಸದೊಂದಿಗೆ ವಿನಿಮಯಗೊಳಿಸುತ್ತಿದ್ದ ಯುವಜನತೆ ಮೊಬೈಲ್‌ ದಾಸರಾಗಿ ಬಿಟ್ಟಿದ್ದರು. ಎತ್ತನೋಡಿದರೂ ಈ ಪೀಳಿಗೆಯ ಯುವಕ-ಯುವತಿಯರು, ಮಕ್ಕಳು ಮೊಬೈಲ್‌ ಹಾವಳಿಗೆ ಬಲಿಯಾಗಿರುವ ದೃಶ್ಯ ಸರ್ವೇಸಾಮಾನ್ಯವಾಗಿತ್ತು. ಎಲ್ಲಾ ರೀತಿಯ ಮಾಹಿತಿಗಳು, ಜ್ಞಾನಕೋಶದ ಭಂಡಾರಗಳು ಅಂಗೈಯಲ್ಲಿ ಲಭ್ಯವಾಗಿರುವಾಗ ಗ್ರಂಥಾಲಯಗಳ ಆವಶ್ಯಕತೆಯಾದರೂ ಎಲ್ಲಿದೆ? ಮಕ್ಕಳಲ್ಲಿ ಓದಿನ ಹವ್ಯಾಸದ ಬಗ್ಗೆ ನಿರಾಸಕ್ತಿ, ನಿರುತ್ಸಾಹ ಕಂಡು ನನ್ನ ಮನವು ಮರುಕಗೊಂಡಿದೆ. 

ಆದ್ದರಿಂದ ಪ್ರೀತಿಯ ಮಕ್ಕಳೆ, ನಿಮ್ಮಲ್ಲೊಂದು ನನ್ನ ಕಳಕಳಿಯ ಮನವಿ. ದಯವಿಟ್ಟು ಗ್ರಂಥಾಲಯಕ್ಕೆ ಬನ್ನಿ. ಅದು ನಿಮ್ಮ ಶೈಕ್ಷಣಿಕ ಗ್ರಂಥಾಲಯವಾಗಿರಬಹುದು ಅಥವಾ ಸಾರ್ವಜನಿಕ ಗ್ರಂಥಾಲಯವಾಗಿರಬಹುದು,  ಓದಿನ ಹವ್ಯಾಸವನ್ನು ಮುಂದುವರಿಸಿ. ಪುಸ್ತಕಗಳು ಎಂದೆಂದಿಗೂ ನಮ್ಮ ಬದುಕಿನ ದಾರಿದೀಪಗಳು. ಅದು ನಮ್ಮನ್ನು ಉಜ್ವಲ ಭವಿಷ್ಯದೆಡೆಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸುವುದು ಎಂಬ ಸತ್ಯವನ್ನು ಮರೆಯಬಾರದು.

ಪ್ರಸ್ತುತ ಕಾಲಘಟ್ಟದಲ್ಲಿ  ಗ್ರಂಥಾಲಯಗಳು ಹೊಸ ರೂಪ ಪಡೆದುಕೊಂಡಿವೆ. ಅನೇಕ ಶೈಕ್ಷಣಿಕ ಗ್ರಂಥಾಲಯಗಳು ಕಂಪ್ಯೂಟರೀಕೃತಗೊಂಡಿದ್ದು, ವಿಶಿಷ್ಟ ರೀತಿಯಲ್ಲಿ ಸೇವೆಯನ್ನು ನೀಡುತ್ತಿವೆ. ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ತಮ್ಮ ಕಾಲೇಜಿನ ವೆಬ್‌ಸೈಟ್‌ ಮೂಲಕ ಎಲ್ಲಿ ಬೇಕಾದಲ್ಲಿ ಮಾಹಿತಿ ಪಡೆಯಬಹುದಾದ ವ್ಯವಸ್ಥೆ ಇದೆ. ನಗರ ಕೇಂದ್ರ ಗ್ರಂಥಾಲಯಗಳೂ ಡಿಜಿಟಲೀಕರಣಗೊಂಡಿದ್ದು ಓದುಗರನ್ನು, ಸಾರ್ವಜನಿಕರನ್ನು ಆಕರ್ಷಿಸುತ್ತಿದೆ. ಆಧುನಿಕ ತಂತ್ರಜ್ಞಾನದ ಆವಿಷ್ಕಾರಗಳು ಓದುಗರ ಅಭಿರುಚಿಯನ್ನು ಕುಂಠಿತಗೊಳಿಸಿದರೂ, ಗ್ರಂಥಾಲಯಗಳು ತಮ್ಮ ಸ್ವರೂಪವನ್ನು ಬದಲಾಯಿಸಿಕೊಂಡು ಓದುಗರನ್ನು ತನ್ನತ್ತ ಸೆಳೆಯುವುದರಲ್ಲಿ ಯಶಸ್ವಿಯಾಗಿದೆ. ಆದರೆ, ಗತಕಾಲದ ಗ್ರಂಥಾಲಯದ ವೈಭವ, ಪುಸ್ತಕಗಳೇ ಸರ್ವಸ್ವ ಎಂಬಂತಿದ್ದ ಆ ದಿನಗಳನ್ನು ನೆನೆಯುವಾಗ ಮನಸ್ಸು ಮುದಗೊಳ್ಳುತ್ತದೆ. ಹಿಂದಿನ ನೆನಪುಗಳು ಪುಸ್ತಕವನ್ನು ತೆರೆಯುವಾಗ ಘಮ್ಮನೆ ಬರುವ ಪರಿಮಳ ಸದಾ ನನ್ನ ಹೃದಯದಲ್ಲಿ ಜೀವಂತವಾಗಿದೆ.

 ನಿಜಕ್ಕೂ ಪುಸ್ತಕಗಿಂತ ಮಿಗಿಲಾದ ಸ್ನೇಹಿತ ಬೇರೊಬ್ಬನಿಲ್ಲ. 

ಶೈಲಾರಾಣಿ ಬೋಳಾರ್‌
 

ಟಾಪ್ ನ್ಯೂಸ್

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.