ನುಡಿಸಿರಿಯತ್ತ ನಡೆಸಿದರು!
Team Udayavani, Dec 14, 2018, 6:00 AM IST
ಕಲೆಗಳಿಲ್ಲದೆ ಜೀವನವಿಲ್ಲ. ನಮ್ಮ ಯಾಂತ್ರಿಕ ಜೀವನದಲ್ಲಿ ಸಂತೋಷಕ್ಕೆ ಕಾರಣವಾಗುವ ವಿಶಿಷ್ಟ ಮಾಧ್ಯಮ ಕಲೆ. ವೈವಿಧ್ಯಮಯ ಕಲೆಗಳು ಯಾವ ದೇಶದ್ದೇ ಆಗಿರಲಿ ಆಸ್ವಾದಿಸಲು ಸ್ವಾಗತಾರ್ಹ.
ಅದು ನಾಲ್ಕು ವರ್ಷ ಹಿಂದಿನ ನೆನಪಿನ ಪಯಣ. ಸರ್ಕಾರಿ ಕಾಲೇಜು ಅರಸಿನಮಕ್ಕಿಯಲ್ಲಿ ದ್ವಿತೀಯ ಪಿಯುಸಿ ಕಲಿಯುತ್ತಿದ್ದ ಸಮಯ. ಕಲಿಕೆಯ ನಡುವೆ ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ವಾಸ್ತುಶಿಲ್ಪದಂತಹ ವೈವಿಧ್ಯ ಕಲೆಗಳನ್ನು ಆಸ್ವಾದಿಸಲು ನಮಗೆ ಸಿಕ್ಕ ಅವಕಾಶವೆಂದರೆ ಮೂರು ದಿನಗಳ ಆಳ್ವಾಸ್ ನುಡಿಸಿರಿಯ ವೈಭವ. ಇದು ನಡೆದದ್ದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದಿರೆಯಲ್ಲಿ. ನಾವು 19 ಜನ ವಿದ್ಯಾರ್ಥಿಗಳು ಆಸಕ್ತರಾಗಿ ಉಪನ್ಯಾಸಕರ ಹಾಗೂ ಹಿರಿಯರ ಒಪ್ಪಿಗೆಯಂತೆ ನುಡಿಸಿರಿಯ ಮೊದಲನೆಯ ದಿನ ಆಳ್ವಾಸ್ಗೆ ತೆರಳಿದೆವು. ಆ ಶಿಕ್ಷಣ ಸಂಸ್ಥೆಯಲ್ಲಿ ನಮ್ಮ ಕಾಲೇಜಿನಿಂದ ಕಳುಹಿಸಿದ ಅರ್ಜಿಯನ್ನು ಸಲ್ಲಿಸಿದಾಗ ಮೂರು ದಿನಗಳಿಗಾಗಿ ನೀಲಗಿರಿ ವಸತಿಗೃಹದ ಮೂರು ಕೊಠಡಿಗಳ ವ್ಯವಸ್ಥೆಯೂ ಲಭಿಸಿತು.
ನುಡಿಸಿರಿಯ ವೈಭವ ಕೇವಲ ಕಾರ್ಯಕ್ರಮಗಳಿಂದ ಕೂಡಿರದೆ ಸಾಹಿತ್ಯ ಸಿರಿಯ ಅಂಗಳದಲ್ಲಿ ಸಾವಿರಾರು ಬಗೆಯ ವನಸಿರಿಯ ವೈಭೋಗ ಕಂಡುಬಂದದ್ದು ಕೃಷಿ ಮತ್ತು ವನಸಿರಿ ಪ್ರದರ್ಶನದಲ್ಲಿ. ಇವುಗಳನ್ನು ಕಣ್ತುಂಬಿಕೊಂಡ ನಂತರ ನಾವು ಹತ್ತು ಜನ ಸಾವಿರ ಕಂಬದ ಬಸದಿ ನೋಡಲು ತೆರಳಿದೆವು. ನುಡಿಸಿರಿಯಲ್ಲಿ ಯಾವ ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮ ನೋಡುವುದೆಂಬುದೇ ಮನಸ್ಸಿಗೆ ಗೊಂದಲ, ಯಾಕೆಂದರೆ, ಎಲ್ಲ ವೇದಿಕೆಗಳಲ್ಲೂ ಮನತಣಿಸುವಂತಹ ಸಾಂಸ್ಕೃತಿಕ ವೈಭವ ನಡೆಯುತ್ತಿತ್ತು. ಅಲ್ಲಿ ಕಳೆದ ನೆನಪಂತೂ ಅವಿಸ್ಮರಣೀಯ.
ಮುಕೇಶ್ ನೆಕ್ಕರಡ್ಕ
ಪ್ರಥಮ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ,
ಮಂಗಳೂರು ವಿಶ್ವವಿದ್ಯಾನಿಲಯ, ಕೋಣಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?