ಪ್ರವಾಸದ ನೆನಪು
Team Udayavani, Feb 15, 2019, 12:30 AM IST
ಕೆಲವೊಂದು ಘಟನೆಗಳೇ ಹಾಗೆ ವರ್ಷಗಳವರೆಗೂ ಮನಸ್ಸಿನಲ್ಲಿ ಹಾಗೆಯೇ ಉಳಿದುಬಿಡುತ್ತವೆ. ಮನಸ್ಸಿನಲ್ಲಿ ಉಳಿದ ಅಂತಹ ಘಟನೆಗಳಲ್ಲಿ ನಾನು ಹೋದ ಶೈಕ್ಷಣಿಕ ಪ್ರವಾಸಗಳಲ್ಲೊಂದು ಕಣ್ಣೂರಿನ ಸಾಧು ವಾಟರ್ ಪಾರ್ಕ್ಗೆ ಹೋದದ್ದು.
ಅದು ನಾನು ಹತ್ತನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭ. ಈ ಬಾರಿ ಸೈಂಟ್ ಮೇರೀಸ್ ದ್ವೀಪಕ್ಕೆ ಪ್ರವಾಸ ತೆರಳಲಿದ್ದೇವೆ, ಆಸಕ್ತರು ಹೆಸರು ನೊಂದಾಯಿಸಿಕೊಳ್ಳಬೇಕು ಎಂಬ ಸೂಚನೆ ಲಭಿಸಿದ್ದರಿಂದ ಸ್ನೇಹಿತರೊಂದಿಗೆ ಸೇರಿ ಹೆಸರು ನೊಂದಾಯಿಸಿದೆ. ಆದರೆ, ಆ ಸಮಯದಲ್ಲಿ ನಾವು ತೆರಳಬೇಕಿದ್ದ ಪ್ರದೇಶದಲ್ಲಿ ಕೆಲವು ಸಮಸ್ಯೆಗಳು ಎದ್ದ ಕಾರಣ ಪ್ರವಾಸದ ಸ್ಥಳವನ್ನು ಕಣ್ಣೂರಿನ ಸಮೀಪದ ಸಾಧು ವಾಟರ್ ಪಾರ್ಕ್ಗೆ ಬದಲಾಯಿಸಲಾಯಿತು. ಅಲ್ಲಿ ಭಾಷೆ ಬಾರದೇ ಮಲಯಾಳಂ ಮಾತನಾಡಲು ಹೋಗಿ ಪೇಚಾಟಕ್ಕೆ ಸಿಲುಕಿದ್ದೆವು. ಎರಡು ಬಸ್ಸಿನಲ್ಲಿ ಪ್ರವಾಸ ತೆರಳಿದ ಕಾರಣ ಮುಂದಿನ ಬಸ್ಸನ್ನು ಹಿಂದಿಕ್ಕಿದಾಗ ದೊರಕಿದ ಸಂತೋಷ ಅದ್ಭುತ.
ಅಕ್ಷಯಕೃಷ್ಣ ಪಿ.
ಪತ್ರಿಕೋದ್ಯಮ ವಿಭಾಗ, ಮಂಗಳೂರು ವಿಶ್ವವಿದ್ಯಾಲಯ, ಕೊಣಾಜೆ