ದೇಶ ಕಾಯುವ ಯೋಧರಿಗೆ ಸಲಾಂ!


Team Udayavani, Feb 22, 2019, 12:30 AM IST

16.jpg

ದೇಶ ಕಾಯುವ ಸೈನಿಕರನ್ನು ಸೆಲೆಬ್ರೆಟಿಯಂತೆ ಕಾಣುವುದನ್ನು ನಮ್ಮ ಶಾಲೆ-ಕಾಲೇಜುಗಳಲ್ಲಿ ಮಕ್ಕಳಿಗೆ ಪಠ್ಯದಲ್ಲೇ ಬೋಧಿಸಬೇಕಿದೆ. ಅವರು ಗಣ್ಯರು ಎಂದು ತಿಳಿದುಕೊಳ್ಳಬೇಕಿದೆ. ಯಾವ ತ್ಯಾಗ, ದೇಶಪ್ರೇಮ ಇಲ್ಲದ ಎಸಿ ಕಾರಲ್ಲಿ ಹಾಯಾಗಿ ಸಂಚರಿಸುವ ರಾಜಕಾರಣಿ, ಸಿನೆಮಾ ನಟರನ್ನು ಕಾರ್ಯಕ್ರಮಗಳಿಗೆ ಕರೆಸಿ ಪಟಾಕಿ ಸಿಡಿಸಿ ಸ್ವಾಗತಿಸುವುದಕ್ಕಿಂತ ಪ್ರತಿ ರಾಜ್ಯೋತ್ಸವ ಹಾಗೂ ಇತರ ಸಮಾರಂಭಗಳಿಗೆ ಒಬ್ಬ ಸೈನಿಕರನ್ನು ಅತಿಥಿಯಾಗಿ ಕರೆಸಿ ಗೌರವಿಸಿ ಅವರ ಬಲವನ್ನು ಹೆಚ್ಚಿಸಬೇಕಾಗಿದೆ. ನನ್ನನ್ನು ಇಷ್ಟು ಗೌರವಿಸುವ ಈ ಜನರಿಗೆ ನಾನು ನನ್ನ ಜೀವವನ್ನೇ ಕೊಡಬೇಕು- ಎನ್ನುವ ಮನಸ್ಸಾಗುವುದು ಸೈನಿಕರಿಗೆ ಮಾತ್ರವೇ ಹೊರತು ರಾಜಕಾರಣಿಗಳಿಗಲ್ಲ. ರಾಜಕಾರಣಿಗಳು ಅಧಿಕಾರದ ಗದ್ದುಗೆ ಹಿಡಿದ ಮೇಲೆ ಜನರನ್ನು ಮರೆತುಬಿಡುತ್ತಾರೆ. ಸಿನೆಮಾ ನಟ ಏನು ಮಾಡಿದರೂ ಜನ ನೋಡುತ್ತಾರೆ, ಏನೇ ಅಂದರೂ ಚಪ್ಪಾಳೆ ಹೊಡೆಯುತ್ತಾರೆ! ಆದರೆ, ಸೈನಿಕರು ಈ ಯಾವ ಅಭಿಲಾಷೆಯೂ ಇಲ್ಲದೆ ದೇಶಕ್ಕಾಗಿ ದುಡಿಯುತ್ತಾರೆ.

ಫೆ. 14 ಗುರುವಾರ ಜೈಶ್‌ ಉಗ್ರನೋರ್ವ ನಡೆಸಿದ ಭಯೋತ್ಪಾದಕರ ದಾಳಿಯಲ್ಲಿ 40ಕ್ಕೂ ಹೆಚ್ಚು ನಮ್ಮ ಸೈನಿಕರು ಹುತಾತ್ಮರಾಗಿದ್ದಾರೆ. ಹಲವು ಯೋಧರು ಗಾಯಗೊಂಡಿದ್ದಾರೆ. ಸುಮಾರು 350 ಕೆಜಿ ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ಬಸ್ಸಿಗೆ ಢಿಕ್ಕಿ ಹೊಡೆಸುವ ಮೂಲಕ ಈ ಭೀಕರ ದಾಳಿ ನಡೆಯಿತು. “ದೇಶಕ್ಕಾಗಿ ನನ್ನ ಇನ್ನೊಬ್ಬ ಮಗನನ್ನು ತ್ಯಾಗ ಮಾಡಲು ಸಿದ್ಧªನಿದ್ದೇನೆ’- ಹೀಗೆಂದು ಪುಲ್ವಾಮದಲ್ಲಿ ನಡೆದ ಭೀಕರ ಉಗ್ರ ದಾಳಿಯಲ್ಲಿ ಹುತಾತ್ಮರಾದ ನಮ್ಮ ಯೋಧ ರತನ್‌ ಠಾಕೂರ್‌ ತಂದೆ ಹೇಳಿದರು. 

ಸೈನಿಕರು ತಮ್ಮ ತಂದೆ-ತಾಯಿ, ಮಕ್ಕಳು, ಪತ್ನಿ ಕುಟುಂಬಸ್ಥರನ್ನು ಬಿಟ್ಟು ನಮ್ಮ ದೇಶವನ್ನು ಕಾಯಲು ಹೊರಡುತ್ತಾರೆ. ನಮ್ಮ ಯೋಧರು ನಮ್ಮ ದೇಶವನ್ನು ಹಗಲು-ರಾತ್ರಿ ಎನ್ನದೆ ಕಾಯುತ್ತಾರೆೆ. ಆದರೆ, ನಮ್ಮ ಯೋಧರನ್ನು ಕಾಯುವ ವ್ಯವಸ್ಥೆ ಬಹಳ ಕಡಿಮೆ. ಜೀವದ ಹಂಗು ತೊರೆದು ಹೋರಾಡುವ ಈ ನಮ್ಮ ಯೋಧರು ಬದುಕಿ ಬಂದ ಮೇಲೆ ತಾನು ಕಾಪಾಡಿದ ಈ ದೇಶದ ಜನ ತನಗೊಂದು ಗೌರವ ಕೊಡಲಿ, ಸನ್ಮಾನಿಸಲಿ, ತನ್ನ ಅನುಭವ ಕೇಳಲಿ, ಅದನ್ನು ಚಿತ್ರೀಕರಿಸಲಿ, ಧ್ವನಿ ಮುದ್ರಿಸಿಕೊಳ್ಳಲಿ ಅಂತ ಕಾಯುತ್ತಿರುತ್ತಾರೆಯೆ?

ಇನ್ನು ಮುಂದಾದರೂ ನಾವು ನಮ್ಮ ಯೋಧರನ್ನು ನಮ್ಮ ಕಾರ್ಯಕ್ರಮಗಳಿಗೆ ಕರೆಸಿಕೊಂಡು ಗೌರವಿಸೋಣ. ಅವರಿಗೆ ಗೌರವ-ಮಾನ್ಯತೆ ಕೊಡೋಣ. ದೇಶವನ್ನು ಕಾಯುವ ಸೈನ್ಯದಲ್ಲಿ ನಮ್ಮ ದೇಶದ ಬೇರೆ ಬೇರೆ ರಾಜ್ಯಗಳ ಸೈನಿಕರು ಇದ್ದಾರೆ. ನಮ್ಮ ಕರ್ನಾಟಕದಿಂದಲೂ ಹಲವಾರು ವೀರ ಯೋಧರು ಇದ್ದಾರೆ ಎನ್ನುವಾಗ ನಮಗೆ ಹೆಮ್ಮೆ ಎನಿಸುತ್ತದೆ. ದೇಶದ ರಕ್ಷಣೆಗೆ ಹೋರಾಡಿ ಯೋಧರು ಹುತಾತ್ಮರಾದರೆ ಅವರ ಮೃತ ದೇಹದ ಮೇಲೆ ರಾಷ್ಟ್ರದ ತ್ರಿವರ್ಣ ಧ್ವಜ ಹೊದಿಸಿ ಶ್ರದ್ಧಾಂಜಲಿ ಸಲ್ಲಿಸುತ್ತಾರೆ. ದೇಶ ಕಾಯುವ ನಮ್ಮ ಯೋಧರಿಗೆ ನನ್ನದೊಂದು ಸಲಾಮ್‌.

ಜಾಬಿರ್‌ ಮುಬಶ್ಶಿರ್‌ ಬಿ. ಎ.
ಪತ್ರಿಕೋದ್ಯಮ ವಿದ್ಯಾರ್ಥಿ, ಸಂತ ಫಿಲೋಮಿನ ಕಾಲೇಜು,  ಪುತ್ತೂರು

ಟಾಪ್ ನ್ಯೂಸ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.