ಚೌಕಾಶಿಯೇ ಜೀವನ


Team Udayavani, Mar 22, 2019, 12:30 AM IST

life.jpg

ಬೆಳೆಯುತ್ತಿರುವ ಜಗತ್ತಿನಲ್ಲಿ ಜೀವನ ಎಂಬುವ ಅಮೂಲ್ಯವಾದ ವಸ್ತು ಬಹಳಷ್ಟು ದುಬಾರಿಯಾಗಿಬಿಟ್ಟಿದೆ. ಜನರು ಅದನ್ನು ಸ್ವಪ್ರೇರಣೆಯಿಂದ, ಸ್ವಂತಿಕೆಯಿಂದ ನಡೆಸಲಾಗದೆ ಇತರರಿಂದ ಇಂತಿಷ್ಟೇ ಬೆಲೆಯನ್ನು ನಿಗದಿಗೊಳಿಸಿ ಸಾಧ್ಯವಾದಷ್ಟು ಅದನ್ನು ಕಡಿತಗೊಳಿಸುವುದರ ಮೂಲಕ ಅದರ ಸಾಕ್ಷಾತ್ಕಾರತೆಯ ಸವಿಯನ್ನು ಸವಿಯುತ್ತಿದ್ದಾರೆ. 

ಹೌದು, ಹೇಗೆ ಜಗತ್ತು ಋತು ಕಳೆದಂತೆಲ್ಲ ತನ್ನೆಲ್ಲ ನೈಸರ್ಗಿಕ ಮೂಲಗಳನ್ನು , ಇಂಧನಗಳನ್ನು ಕಡಿಮೆಗೊಳಿಸುತ್ತ ಚೌಕಾಸಿತನವನ್ನು ನಡೆಸುತ್ತಿದೆಯೋ ಅಂತೆಯೇ ಇವೆಲ್ಲದರ ಉಪಯೋಗವನ್ನಾಗಲಿ ಅಥವಾ ಪ್ರಯೋಜನವನ್ನಾಗಲಿ ಪಡೆಯುತ್ತಿರುವಂತಹ ಬುದ್ಧಿಜೀವಿಯಾದ ಮಾನವನು ಕೂಡ ತನ್ನ ಜೀವನವನ್ನು ಚೌಕಾಸಿತನದಲ್ಲಿಯೇ ಕಳೆಯುತ್ತಿದ್ದಾನೆ. ಮೊತ್ತಮೊದಲಾಗಿ ಈ ಚೌಕಾಸಿ ಜೀವನವು ಕಾಲದಿಂದ ಕಾಲಕ್ಕೆ, ಜನಾಂಗದಿಂದ ಜನಾಂಗಕ್ಕೆ ಮರುಕಳಿಸುತ್ತ ಬರುತ್ತಿದೆ. ಲಾಭದ ಉದ್ದೇಶವನ್ನು ಇಟ್ಟುಕೊಂಡಿರುವಂತಹ ಈ ಚೌಕಾಸಿ ಜೀವನ ಆಧುನಿಕ ಯುಗದಲ್ಲಿ ಬಂದದ್ದಲ್ಲ. ಅಂದಿನ ದೇವತೆಗಳ ಕಾಲದಲ್ಲಿಯೂ ವೀರಪುರುಷರ ಕಾಲದಿಂದಲೂ ರೂಢಿಯಲ್ಲಿದೆ.
 
ಹೌದು, ದೇವತೆಗಳ ಕಾಲದಲ್ಲಿ ಅದೆಷ್ಟೋ ಅನ್ಯಾಯ, ಅಧರ್ಮಗಳನ್ನು ಮಾಡಿದ ರಾಕ್ಷಸರು ತಮ್ಮ ಲಾಭಕ್ಕಾಗಿ, ಸ್ವಾರ್ಥಕ್ಕಾಗಿ ಪ್ರಾಣಭಿಕ್ಷೆಯನ್ನು ಬೇಡುವುದೇ ದೊಡ್ಡ ಚೌಕಾಸಿ ಜೀವನವಾಗಿತ್ತು. ಅದು ಕೂಡ ವಿಧ ವಿಧವಾದ ವ್ರತಗಳನ್ನು , ತಪಸ್ಸನ್ನು , ಪೂಜೆ-ಪುನಸ್ಕಾರಗಳನ್ನು ಮಾಡುವುದರ ಮೂಲಕ ತಮ್ಮ ಸ್ವಾರ್ಥದ ಸಾರ್ಥಕತೆಯನ್ನು ಕಾಣುತ್ತಿದ್ದರು. ಆದರೆ ಈ ಚೌಕಾಸಿ ಜೀವನ ದೇವಯುಗದಲ್ಲೇ ಕೊನೆ ಕಾಣಲಿಲ್ಲ. ಕ್ರಿ.ಶ.ದ ನಂತರ ಬಂದ ವೀರಪುರುಷರ ಕಾಲಕ್ಕೂ ತನ್ನ ಒಂದು ಕಾಲನ್ನು ಚಾಚಿಬಿಟ್ಟಿತ್ತು. ರಾಜ್ಯಪಟ್ಟದ ಆಸೆಗಾಗಿ ಬಾಳುತ್ತಿದ್ದ ವೀರರೆಲ್ಲರೂ ತಮ್ಮ ರಾಜ್ಯದ ಉಳಿವಿಗಾಗಿ, ರಾಜ್ಯಭಾರದ ಆಸೆಗಾಗಿ ರಾಜ್ಯವನ್ನು ಬಿಟ್ಟರೆ ಮಡದಿ ಮಕ್ಕಳನ್ನು ನೀಡುವುದಾಗಿ, ಪ್ರಾಣತ್ಯಾಗ ಮಾಡಿದರೆ ಕುಟುಂಬಕ್ಕೆ ಸಹಾಯ ಮಾಡುವುದಾಗಿ, ನಿಧಿಯನ್ನು ಹುಡುಕಿದರೆ ಅರ್ಧ ಪಾಲು ನೀಡುವುದಾಗಿ ಚೌಕಾಸಿತನವನ್ನು ನಡೆಸುತ್ತ ಬಂದರು. ಆದರೆ, ವಿಚಿತ್ರ ಸಂಶಯಾಸ್ಪದ ವಿಷಯವೆಂದರೆ, ಇಂದು ಜಗತ್ತು ತನ್ನ ಅಸ್ತಿತ್ವವನ್ನು ಮೆರೆದು ನಿಂತಿದೆ. 

ಜನರೆಲ್ಲ ತಮ್ಮ ದೈನಂದಿನ ಜೀವನದ ಸಾರ್ಥಕತೆಯನ್ನು ಕಾಣುವ ರೀತಿ ಬದಲಾಗಿದೆ. ಬೆಳೆಯುತ್ತಿರುವ ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನಗಳು ರಾಕೆಟಿನಂತೆ ಬಾನೆತ್ತರಕ್ಕೆ ಜಿಗಿಯುತ್ತಿದ್ದರೂ ಕೂಡ ಈ ಚೌಕಾಸಿ ಜೀವನದ ಗೋಳು ಇನ್ನೂ ನಿಂತಿಲ್ಲ. ಯಾವಾಗಿನಿಂದಲೂ ಆಚರಿಸಿಕೊಂಡ ಸಂಸ್ಕೃತಿ, ಪದ್ಧತಿ, ಆಚಾರ-ವಿಚಾರಗಳು ನಶಿಸಿಹೋದರೂ ಈ ಚೌಕಾಸಿ ಪದ್ಧತಿ ಇನ್ನೂ ಮುಂದುವರಿಯುತ್ತ ಬಂದಿದೆ. ಅದು ಕೂಡ ಅಂದಿಗಿಂತ ಅಧಿಕ ಪ್ರಮಾಣದಲ್ಲಿ. ಹೌದು ಸಾಮಾನ್ಯವಾಗಿ ಆಧುನಿಕ ಜೀವನ ಅಧಿಕ ಚೌಕಾಸಿಯಾಗಿ ಹೋಗಿಬಿಟ್ಟಿದೆ. ಅದು ಹೇಗೆಂದರೆ, ದೊಡ್ಡ ವಿಷಯಗಳಿಂದ ಹಿಡಿದು ಚಿಕ್ಕ ವಿಷಯಗಳವರೆಗೂ ಅಂದರೆ ಎರಡು ರಾಷ್ಟ್ರಗಳ ನಡುವಿನ ಒಪ್ಪಂದದಲ್ಲಿ ಚೌಕಾಸಿ, ವಾಹನ, ಅಂಗಡಿಗಳ ಖರೀದಿಯಲ್ಲಿ, ನಿವೇಶನ, ಖಾಲಿ ಜಾಗ ಖರೀದಿಯಲ್ಲಿ ಚೌಕಾಸಿ ಒಂದು ರೀತಿಯಾದರೆ ಇನ್ನು ವಸ್ತುಗಳ ಮಾರಾಟದಲ್ಲಿ ರಖಂ ವ್ಯಾಪಾರಸ್ಥರು ತಯಾರಕರ ಬಳಿ, ಚಿಲ್ಲರೆ ವ್ಯಾಪಾರಸ್ಥರು ರಖಂ ವ್ಯಾಪಾರಸ್ಥರ ಬಳಿ, ಗ್ರಾಹಕರು ಚಿಲ್ಲರೆ ವ್ಯಾಪಾರಸ್ಥರ ಬಳಿ ಚೌಕಾಸಿ ಮಾಡಿಯೇ ವಸ್ತುಗಳನ್ನು ಖರೀದಿಸುತ್ತಾರೆ. ಈ ಚೌಕಾಸಿ ಜೀವನ ಕೆಲವೊಮ್ಮೆ ನೇರವಾಗಿ ಆಗದಿದ್ದರೂ ಕೆಲವೊಮ್ಮೆ ದೊಡ್ಡ ವ್ಯಕ್ತಿಗಳ ಹೆಸರನ್ನು ಬಳಸಿಯಾದರೂ ಆಗುವುದಂತೂ ಖಂಡಿತ. 

ಕೆಲವೊಂದು ವಿಚಿತ್ರ ಸನ್ನಿವೇಶವೆಂದರೆ ಜನರು ಆಲೋಚಿಸದೆ ಒಂದು ರೂಪಾಯಿ ಬೆಲೆಬಾಳುವ ವಸ್ತುವಾದರೂ ಅದನ್ನು ಐವತ್ತು ಪೈಸೆಗೆ ಮುಲಾಜಿಲ್ಲದೆ ಇಳಿಸಿಯೇ ಬಿಡುತ್ತಾರೆ. ಹಾಸ್ಯಾಸ್ಪದವೆಂದರೆ ಭಾರತ ಕೂಡ ಚೌಕಾಸಿ. ಯಾಕೆಂದರೆ, ಭಾರತ ವಿಶಾಲವಾದ ದೇಶವಾದರೂ ಪಾರ್ಕಿಂಗ್‌ ಜಗತ್ತಿನಲ್ಲಿ ನಿಂತಾಗ ಹಾಗನಿಸುವುದಿಲ್ಲ.

– ಪ್ರಾಣೇಶ್‌
ಸಹ್ಯಾದ್ರಿ ಕಾಲೇಜ್‌ ಆಫ್ ಇಂಜಿನಿಯರಿಂಗ್‌, ಮಂಗಳೂರು

ಟಾಪ್ ನ್ಯೂಸ್

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.