ಸಂಬಂಧಗಳನ್ನು ಪ್ರೀತಿಸಬೇಕೇ ಹೊರತು ವಸ್ತುಗಳನ್ನಲ್ಲ!


Team Udayavani, Mar 22, 2019, 12:30 AM IST

bike.jpg

ಜೀವನದಲ್ಲಿ ಎಲ್ಲರಿಗೂ ಆಸೆಗಳಿರುತ್ತವೆ, ಕಂಡಿದ್ದೆಲ್ಲ ಬೇಕು ಅನ್ನುವ ಹಾಗೆ. ಆದರೆ, ಅದೆಲ್ಲವನ್ನು ಪಡೆದು ಹೇಗಿರಬೇಕು? ಅದನ್ನು ಉಳಿಸಿಕೊಳ್ಳುವ ಜಾಯಮಾನ ನಮಗಿದೆಯೋ ಎಂದು ನಮ್ಮನ್ನು ನಾವು ಪ್ರಶ್ನಿಸಬೇಕಾಗಿದೆ. ಆಸೆಗಳು ಸಹಜ ಮತ್ತು ಸ್ವಾಭಾವಿಕ. ಕನಸುಗಳೂ ಆಸೆಯೇ. ಹಾಗಂತ ಕನಸುಗಳೆಲ್ಲವೂ ನನಸಾಗಲು ಸಾಧ್ಯವಿಲ್ಲ. ಮರಕ್ಕೆ ಚಿಗುರು ಎಷ್ಟು ಮುಖ್ಯವೋ, ಬತ್ತುತ್ತಿರುವ ಕೆರೆಗೆ ನೀರಿನ ಒರತೆಯೂ ಅಷ್ಟೇ ಮುಖ್ಯ. ಹಾಗೆಯೇ ನಮ್ಮ ಬದುಕಿಗೂ ಕನಸುಗಳು ಮುಖ್ಯ. ಕನಸು ನನಸಾಗಲು ನಾವು ಭರವಸೆಯಿಂದ, ಜವಾಬ್ದಾರಿಯಿಂದ ಬದುಕುವುದು ಬಹುಮುಖ್ಯವಾಗುತ್ತದೆ. ಮನುಷ್ಯ ಅಂದಮೇಲೆ ಆಸೆಗಳು ಕನಸುಗಳು ಇದ್ದೇ ಇರುತ್ತವೆ. ಅದಿಲ್ಲದಿದ್ದರೆ ಅವನು ಮನುಷ್ಯನಲ್ಲ. ಯಾಕೆಂದರೆ, ಜೀವನ ಇರೋದು ಒಂದೇ.

ಅದನ್ನು ಹಾಳುಮಾಡಿಕೊಳ್ಳುತ್ತೇವೋ, ಕಾಪಾಡಿಕೊಳ್ಳುತ್ತೇವೋ ಅದು ಅವರವರಿಗೆ ಬಿಟ್ಟಿದ್ದು !ಇತ್ತೀಚೆಗೆ ನಡೆಯುತ್ತಿರುವ ರಸ್ತೆ ಅಪಘಾತಗಳನ್ನು ಗಮನಿಸಿ ನನ್ನಲ್ಲಿ ಇಂತಹ ಅನೇಕ ಆಲೋಚನೆಗಳು ಬರಲಾರಂಭಿಸಿವೆ. ವಿಶೇಷವಾಗಿ ಯುವಕರಿಗೆ ಬೈಕ್‌ ಎಂದರೆ ಪ್ರಾಣ. ಅದರಲ್ಲಿ ಜಾಲಿ ರೈಡಿಂಗ್‌ ಅಂದರೆ ಬಲು ಇಷ್ಟ. ಅವರ ಕೈಗೆ ಬೈಕ್‌ ಸಿಕ್ಕರಂತೂ ರಸ್ತೆಯನ್ನು ಬಿಡಿ, ತಮ್ಮನ್ನು ತಾವೇ ಮರೆತು ಬಿಡುತ್ತಾರೆ. ಹೀಗೆ ಬೈಕ್‌ ರೈಡ್‌ನಿಂದ ಅಪಘಾತಕ್ಕೊಳಗಾಗಿ ತಮ್ಮ ಮನೆಯವರು, ಗೆಳೆಯರನ್ನು ಬಿಟ್ಟು ಶಾಶ್ವತವಾಗಿ ಕಳೆದು ಹೋದ ಅನೇಕ ಗೆಳೆಯರ ನೆನಪು ನನ್ನನ್ನು ಆಗಾಗ ಕಾಡುತ್ತವೆೆ. ಇಂದಿನ ಯುವಕರ ಬೈಕ್‌ರೈಡ್‌ ಹುಚ್ಚು ಎಷ್ಟಿರುತ್ತದೆ ಎಂದರೆ, ಅವರನ್ನು ಪ್ರೀತಿಸುವ ಜೀವಗಳಿಗಿಂತಲೂ ಹೆಚ್ಚು. ಆ ಸಮಯದಲ್ಲಿ ತಂದೆ-ತಾಯಿಯರನ್ನೂ ಅವರು ಮರೆತುಬಿಡುತ್ತಾರೆ. ಬೈಕ್‌ರೈಡ್‌ನ‌ ಎದುರು ತಂದೆತಾಯಿ ಪ್ರೀತಿಗೆ ಬೆಲೆ ಇರುವುದಿಲ್ಲ. 

ಜೀವ, ಜೀವನ ಎಂಬುದು ತುಂಬಾ ಅಮೂಲ್ಯವಾದದ್ದು. ಒಂದು ಸಲ ಕಳೆದುಕೊಂಡ ಜೀವ ಮತ್ತೆ ಬರುವುದಿಲ್ಲ. ಆಸೆ ಪಟ್ಟದ್ದೇ ಸಿಗಲಿ, ಆದರೆ, ಜವಾಬ್ದಾರಿಯೂ ನಮ್ಮ ಮೇಲಿರಬೇಕು ಅಲ್ಲವೆ? ನಮ್ಮನ್ನು ಪ್ರೀತಿಸುವವರ ಬಗ್ಗೆಯೂ ಸ್ವಲ್ಪ ಯೋಚಿಸಬೇಕು. ನಾವು ಸಂಬಂಧಗಳನ್ನು ಪ್ರೀತಿಸಬೇಕೇ ವಿನಾ ವಸ್ತುಗಳನ್ನಲ್ಲ ತಾನೆ !

– ರೋಶ್ನಿ
ದ್ವಿತೀಯ ಬಿ.ಕಾಂ.,
ಮಿಲಾಗ್ರಿಸ್‌ ಕಾಲೇಜು, ಕಲ್ಯಾಣಪುರ

ಟಾಪ್ ನ್ಯೂಸ್

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.