ಸೀನಿಯರ್‌ ಎಂದರೆ ಸೀ-ನಿಯರ್‌ !


Team Udayavani, Mar 22, 2019, 12:30 AM IST

1200541wallpaper2a1a.jpg

ಕಾಲೇಜಿನ ಮೊದಲ ದಿನ ಯಾರಿಗೆ ತಾನೇ ನೆನಪಿರಲ್ಲ ಹೇಳಿ. ತಬ್ಬಿಬ್ಟಾಗಿ ಏನೂ ಅರಿಯದೆ ಉಂಟಾಗುವ ಫ‌ಜೀತಿ, ಭಯ, ಆತಂಕ ಇವುಗಳೆಲ್ಲದರ ಸಂಗಮ ಕಾಲೇಜಿನ ಮೊದಲ ದಿನ. ಸೂಚನಾ ಫ‌ಲಕದಲ್ಲಿ ಹಾಕಿರುವ ವೇಳಾಪಟ್ಟಿ ಅರ್ಥವಾಗದೆ, ಕ್ಲಾಸ್‌ ರೂಮ್‌ ಗೊತ್ತಾಗದೆ ಪರದಾಡುತ್ತ ಇರಬೇಕಾದರೆ ಆಪದ್ಭಾಂದವರಂತೆ ಅವತರಿಸುವವರೇ ನಮ್ಮ ಸೀನಿಯರ್‌ಗಳು. ಅಲ್ಲಿಂದ ಶುರುವಾಗುತ್ತದೆ ನೋಡಿ ನಮ್ಮ ಮತ್ತು ಅವರ ನಡುವಿನ ಬಾಂಧವ್ಯ. 

ಅದ್ಯಾವ ಋಣಾನುಬಂಧವೋ ನಾನರಿಯೆ ಮೊದಲು ಪರಿಚಯ ಇಲ್ಲದವರು ಕೂಡ ಉತ್ತಮ ಗೆಳೆಯರಾಗಿಬಿಡುತ್ತಾರೆ. ಸೀನಿಯರ್‌ಗಳೆಂದರೆ ಚಲನಚಿತ್ರದಲ್ಲಿ ತೋರಿಸುವಂತೆ ರ್ಯಾಗಿಂಗ್‌ ಮಾಡುತ್ತ ಚಿತ್ರವಿಚಿತ್ರ ಹಿಂಸೆ ಕೊಡ್ತಾರೆ ಎಂಬುದು ನಮ್ಮೆಲ್ಲರ ಮನದಲ್ಲಿ ಇರುತ್ತದೆ. ಆದರೆ, ಅದೆಲ್ಲ ಕಲ್ಪನೆಗಳನ್ನು ಬುಡಸಮೇತ ಕಿತ್ತುಹಾಕುತ್ತಾರೆ ನಮ್ಮ ಸೀನಿಯರ್‌ಗಳು. ಅವರ ನಗುಮೊಗದ ಸ್ವಾಗತ ಮತ್ತು ಪ್ರೀತಿಯ ನುಡಿಗಳು, ಹಿರಿಯರು ಎಂಬ ಅಹಂ ಇಲ್ಲದೆ ಉತ್ತಮ ಮಾರ್ಗದರ್ಶಕರಾಗಿಯೂ, ಸಹೋದರರಾಗಿಯೂ ಮುಕ್ತವಾಗಿ ಒಡನಾಡುವುದನ್ನು ಕಂಡರೆ ನಿಬ್ಬೆರಗಾಗುತ್ತೇವೆ. ಅವರು ಅಕ್ಕ-ಅಣ್ಣ ಅಂತ ಅವರನ್ನ ಕರೆಯೋದ್ರಲ್ಲಿ ಅದೇನೋ ಅವ್ಯಕ್ತವಾದ ಖುಷಿ. 

ಆಗ ತಾನೇ ಕಾಲೇಜಿಗೆ ಕಾಲಿಟ್ಟ ನಮ್ಮನ್ನು ಕುಟುಂಬದ ಸದಸ್ಯರಂತೆ ಕಂಡು ಸ್ವಾಗತಿಸಿದ ನೆನಪು ಮನದಲ್ಲಿ ಸದಾ ಹಸಿರಾಗಿ ಉಳಿಯುತ್ತದೆ. ಎಡವಿದಾಗ ತಮ್ಮ ಬುದ್ಧಿಮಾತುಗಳಿಂದ ತಿದ್ದಿ, ಒಳ್ಳೆಯ ಕಾರ್ಯಗಳನ್ನು ಮಾಡಿದಾಗ ಹುರಿದುಂಬಿಸಿದ ನನ್ನ ಸೀನಿಯರ್‌ಗಳು ಸದಾ ಸಾಧನೆಗೆ ಬೆನ್ನೆಲುಬಾಗಿ ನಿಂತವರು. ಅಂತ‌ರ್‌ ಕಾಲೇಜುಸ್ಪರ್ಧೆಗಳಿಗೆ ಹೋಗುವಾಗಲೋ ಅಥವಾ ಬೇರೆ ಯಾವುದಾದರೂ ಶೈಕ್ಷಣಿಕ ಪ್ರವಾಸವನ್ನು ಆಯೋಜನೆ ಮಾಡಿದ್ದಾಗಲೋ ನಾವು ಇನ್ನೂ ಹತ್ತಿರವಾಗುತ್ತೇವೆ. ಕಾರ್ಯಕ್ರಮದ ಜವಾಬ್ದಾರಿ ಹಾಗೂ ನಮ್ಮನ್ನೂ ಸಂಭಾಳಿಸಬೇಕಾಗಿರುವುದರಿಂದ ಗಂಭೀರ ಮುಖ ಹೊತ್ತು ತಿರುಗುವ ಅವರನ್ನು ಸ್ವಲ್ಪ ಹೊತ್ತಿನಲ್ಲೇ ನಮ್ಮ ಕೇಕೆ-ತುಂಟಾಟಗಳಿಗೆ ಒಳಪಡಿಸುವುದರಲ್ಲಿ ನಮಗೆಲ್ಲ ಖುಷಿಯೋ ಖುಷಿ. ಅದೆಷ್ಟೇ ಆದರೂ ನಮ್ಮನ್ನು ಬೈಯ್ಯದೆ ತಾಳ್ಮೆಯಿಂದ ಇರುವ ಅವರಿಗೆ ದೊಡ್ಡ ಸಲಾಂ. ನಮ್ಮ ಕಾಲೇಜಿನಲ್ಲಿ ಸ್ಟೂಡೆಂಟ್‌ ಫ್ಯಾಕಲ್ಟಿ ಅನ್ನೋ ಒಂದು ಯೋಜನೆಯಿದೆ. ಈ ಯೋಜನೆಯ ಪ್ರಕಾರ ಆಯ್ಕೆಯಾದ ಅಂತಿಮ ಪದವಿ ವಿದ್ಯಾರ್ಥಿಗಳು ಪ್ರಥಮ ಅಥವಾ ದ್ವಿತೀಯ ಪದವಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರೆ. ಈ ಮೂಲಕ ಅವರೊಂದಿಗಿನ ಸಂಬಂಧ ಇನ್ನೂ ವೃದ್ಧಿಯಾಗುತ್ತದೆ. ಇನ್ನು ನಾನು ಪತ್ರಿಕೋದ್ಯಮ ವಿದ್ಯಾರ್ಥಿಯಾಗಿರುವುದರಿಂದ ಮೊದಲೇ ನಮ್ಮ ತರಗತಿಯಲ್ಲಿ ಸೀನಿಯರ್‌ ಮತ್ತು ಜೂನಿಯರ್‌ಗಳ ನಡುವೆ ಒಂದು ಉತ್ತಮ ಕೊಂಡಿಯನ್ನು ನಮ್ಮ ಅಧ್ಯಾಪಕರೇ ಸೃಷ್ಟಿಸಿಬಿಟ್ಟಿದ್ದಾರೆ. ಅದಕ್ಕೆ ಪುರಾವೆಯೇ ಸ್ವಾಗತ ಕಾರ್ಯಕ್ರಮ. ಸೀನಿಯರ್‌ಗಳೆಂದರೆ ‌”ಸೀ’ “ನಿಯರ್‌ ಗಳಾಗಬೇಕೆಂಬುದೇ ಇದರ ಉದ್ದೇಶ. 

ಆದರೆ, ಕಾಲ ಓಡುತ್ತಲೇ ಇರುತ್ತದೆ. ಇನ್ನೇನು ಅವರ ಪದವಿ ಬದುಕಿನ ಅಂತಿಮ ಘಟ್ಟದಲ್ಲಿ¨ªಾರೆ. ಅಗಲಿಕೆ ಅನಿವಾರ್ಯವಾಗಿದೆ. ತಮ್ಮ ಮುಂದಿನ ಭವಿಷ್ಯಕ್ಕಾಗಿ ಬೇರೆ ಕಡೆ ವಿದ್ಯಾಭ್ಯಾಸಕ್ಕೋ , ಕೆಲಸಕ್ಕೋ ತೆರಳಬೇಕಾಗಿದೆ. ಸ್ನೇಹದ ಬೀಜ ಮೊಳಕೆಯಾಗಿ ಚಿಗುರೊಡೆದು ಹೆಮ್ಮರವಾಗಿ ಬೆಳೆದಿದೆ. ಅದರ ಒಂದೊಂದು ಕೊಂಬೆಯನ್ನೂ ಬಹಳ ಜತನದಿಂದ ಕಾಪಾಡಬೇಕಾಗುತ್ತದೆ. ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಬಲು ಸೊಗಸು ಎಂಬಂತೆ. ಸೀನಿಯರ್‌ಗಳು ಬೇರಿನಂತೆ ಇದ್ದವರು. ಅವರು ಹಾಕಿಕೊಟ್ಟ ಹಾದಿಯಿದೆ. ಆದರೆ, ಅದಕ್ಕೆ ಹೊಸ ಮೈಲಿಗಲ್ಲುಗಳನ್ನು ಸೃಷ್ಟಿಸುವುದು ನಮ್ಮ ಕರ್ತವ್ಯ. ಪ್ರತಿಯೊಂದು ಹೆಜ್ಜೆಯಲ್ಲೂ ಸಹಾಯಹಸ್ತವನ್ನು ಚಾಚಿದ ನನ್ನ ಸೀನಿಯರ್‌ಗಳು ಸದಾ ಸಂತೋಷದಿಂದಿರಲಿ. ವಿದಾಯ ಅನ್ನೋದು ಕಣ್ಣಿನಿಂದ ಪ್ರೀತಿಸಿದವರಿಗೆ ಮಾತ್ರ. ಹೃದಯದಿಂದ ಪ್ರೀತಿಸಿದವರಿಗಲ್ಲ. ಅದೇನೇ ಆದರೂ ಇಷ್ಟು ದಿನ ಒಟ್ಟಿಗೆ ಕಳೆದ ನೆನಪುಗಳು ಮಾತ್ರ ಶಾಶ್ವತ. ಅವರ ಉಜ್ವಲ ಭವಿಷ್ಯಕ್ಕಾಗಿ ತಂಗಿ- ತಮ್ಮಂದಿರ ಕಡೆಯಿಂದ ಹಾರೈಕೆಗಳು.

– ರಶ್ಮಿ ಯಾದವ್‌
ಎಂಸಿಜೆ, ಮಂಗಳೂರು ವಿ. ವಿ.

ಟಾಪ್ ನ್ಯೂಸ್

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.