ಅರುಣಾಚಲ ಹೆಸರಿಲ್ಲದ 30 ಸಾವಿರ ಜಾಗತಿಕ ಭೂಪಟ ಸುಟ್ಟ ಚೀನಾ!
Team Udayavani, Mar 26, 2019, 1:29 PM IST
ಬೀಜಿಂಗ್:ಸದಾ ನೆರೆಹೊರೆ ದೇಶಗಳ ಗಡಿ ಭಾಗದ ಬಗ್ಗೆ ಕ್ಯಾತೆ ತೆಗೆಯುತ್ತಿರುವ ಚೀನಾ ಇದೀಗ ಅರುಣಾಚಲಪ್ರದೇಶ ಮತ್ತು ತೈವಾನ್ ಚೀನಾದ ಭಾಗ ಎಂದು ನಮೂದಿಸದೇ ಇದ್ದ ಕಾರಣಕ್ಕೆ ಸುಮಾರು 30 ಸಾವಿರ ಜಾಗತಿಕ ಭೂಪಟವನ್ನು ಚೀನಾ ಕಸ್ಟಮ್ಸ್ ಅಧಿಕಾರಿಗಳು ಸುಟ್ಟು ಹಾಕಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಚೀನಾದ ಪ್ರಕಾರ, ಭಾರತದ ಈಶಾನ್ಯ ರಾಜ್ಯದ ಅರುಣಾಚಲ ಪ್ರದೇಶ ದಕ್ಷಿಣ ಟಿಬೆಟ್ ನ ಭಾಗವಂತೆ! ಅಷ್ಟೇ ಅಲ್ಲ ಅರುಣಾಚಲ ಪ್ರದೇಶಕ್ಕೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದಾಗಲೂ ಆಕ್ಷೇಪ ವ್ಯಕ್ತಪಡಿಸಿತ್ತು. ಅರುಣಾಚಲ ಪ್ರದೇಶಕ್ಕೆ ಭಾರತದ ಮುಖಂಡರು ಭೇಟಿ ನೀಡುವ ಸಂದರ್ಭದಲ್ಲೆಲ್ಲಾ ಚೀನಾ ಆಕ್ಷೇಪ ವ್ಯಕ್ತಪಡಿಸುವ ಮೂಲಕ ಅರುಣಾಚಲ ತನ್ನ ಭೂಭಾಗ ಎಂಬುದನ್ನು ಬಿಂಬಿಸಿಕೊಳ್ಳುತ್ತಿದೆ.
ಅರುಣಾಚಾಲ ಪ್ರದೇಶ ನಮ್ಮ ಆಂತರಿಕ ಮತ್ತು ಭಾರತದ ಅವಿಭಾಜ್ಯ ಅಂಗವಾಗಿದೆ. ಭಾರತದ ಗಣ್ಯ ಮುಖಂಡರು ಅರುಣಾಚಲಕ್ಕೆ ಕಾಲ, ಕಾಲಕ್ಕೆ ಭೇಟಿ ಕೊಡುತ್ತಲೇ ಬಂದಿದ್ದು, ದೇಶದ ಅವಿಭಾಜ್ಯ ಅಂಗವಾಗಿದ್ದರಿಂದ ಅರುಣಾಚಲಕ್ಕೆ ಸಹಜ ಭೇಟಿ ನೀಡುತ್ತಿರುವುದಾಗಿ ಭಾರತ ಕೂಡಾ ತಿರುಗೇಟು ನೀಡುತ್ತಲೇ ಬಂದಿದೆ.
ಅಲ್ಲದೇ ತೈವಾನ್ ದ್ವೀಪಪ್ರದೇಶ ಕೂಡಾ ತನ್ನ ಭಾಗ ಎಂದು ಚೀನಾ ವಾದ ಮಂಡಿಸುತ್ತಲೇ ಬಂದಿದ್ದು, ಈ ನಿಟ್ಟಿನಲ್ಲಿ ಅರುಣಾಚಲ, ತೈವಾನ್ ಅನ್ನು ಚೀನಾದ ಭೂಭಾಗ ಎಂದು ನಮೂದಿಸದ ಜಾಗತಿಕ ಭೂಪಟಗಳನ್ನು ಸುಟ್ಟು ಹಾಕಿರುವುದಾಗಿ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ