ಸಿಎಂ ಅಮೆರಿಕಕ್ಕೆ ಹೋಗಲು ಯಡಿಯೂರಪ್ಪನ ಪರ್ಮಿಷನ್ ಪಡಿಬೇಕಿತ್ತಾ?
ಪುತ್ರನ ಅಮೆರಿಕಾ ಪ್ರವಾಸ ಟೀಕಿಸಿದ್ದವರ ವಿರುದ್ಧ ಎಚ್ಡಿಡಿ ಕಿಡಿ
Team Udayavani, Jun 30, 2019, 1:08 PM IST
ಬೆಂಗಳೂರು: ಕುಮಾರಸ್ವಾಮಿ ಅವರು ಅಮೆರಿಕಕ್ಕೆ ತೆರಳಲು ಯಡಿಯೂರಪ್ಪನ ಅನುಮತಿ ಪಡಿಬೇಕಿತ್ತಾ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕಿಡಿ ಕಾರಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಕುಮಾರಸ್ವಾಮಿ ಅವರು ನಮ್ಮ ಒಕ್ಕಲಿಗ ಸಮಾಜದ ದೇವಾಲಯದ ಭೂಮಿ ಪೂಜೆ ಕಾರ್ಯಕ್ರಮಕ್ಕಾಗಿ ತೆರಳಿದ್ದಾರೆ. ಇಲ್ಲಿಯ ಯಾರೂ ಹಣ ಕೊಟ್ಟಿಲ್ಲ, ಅಲ್ಲಿಯ ಒಕ್ಕಲಿಗರೇ 20 ಕೋಟಿ ಹಣ ಸೇರಿಸಿ ದೇವಾಲಯ ನಿರ್ಮಾಣ ಮಾಡುತ್ತಿದ್ದಾರೆ ಎಂದರು.
ಏನು ಯಡಿಯೂರಪ್ಪನ ಪರ್ಮಿಷನ್ ಪಡೆದು ಅಮೆರಿಕಾಕ್ಕೆ ಹೋಗಬೇಕಿತ್ತಾ, ಬೆಳಗ್ಗಿನಿಂದ ಸಂಜೆಯವರೆಗೂ ಅದೇ ಚರ್ಚೆ ಎಂದು ಕಿಡಿ ಕಾರಿದರು.